ವಿಶ್ವ ಶಾಂತಿ ಆಶ್ರಮ, ವಿಜಯ ವಿಠ್ಠಲ ಮಂದಿರ

ಕರ್ನಾಟಕ ರಾಜ್ಯದ ತುಮಕೂರು ಹೆದ್ದಾರಿಯಲ್ಲಿ ನೆಲಮಂಗಲದ ಬಳಿ ಇರುವ ಈ ಆಶ್ರಮವನ್ನು ಸದ್ಗುರು ಸಂತ ಕೇಶವದಾಸರು 1982ರಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ತುಮಕೂರು ಹೆದ್ದಾರಿಯ ಅರಿಶಿನಕುಂಟೆ ಗ್ರಾಮದಲ್ಲಿ ವಿಶ್ವ ಶಾಂತಿ ಆಶ್ರಮವನ್ನು ಸ್ಥಾಪಿಸಿದರು. ಈ ಮಂದಿರವು ಇತ್ತೀಚಿನ ದಿನಗಳಲ್ಲಿ ವಿಶ್ವ ಶಾಂತಿ ಆಶ್ರಮ ಎಂದೇ ಪ್ರಸಿದ್ಧಿಯಾಗಿದೆ. ಇದು ಶಾಂತವಾದ ಸ್ಥಳವಾಗಿದ್ದು ಅದು ಅದ್ಭುತವಾದ ಪ್ರೇಕ್ಷಣೀಯ ಸ್ಥಳವಾಗಿದೆ.

ವಿಶ್ವ ಶಾಂತಿ ಆಶ್ರಮದ ದೂರಗಳು

  • ಬೆಂಗಳೂರು – 27 ಕಿ.ಮೀ
  • ನೆಲಮಂಗಲ – 2 ಕಿ.ಮೀ

ವಿಠ್ಠಲ ಮತ್ತು ರುಕ್ಮಿಣಿಯವರ ಬೃಹತ್ ಪ್ರತಿಮೆ — 36 ಅಡಿಗಳ ಈ ಪ್ರತಿಮೆಯು ವಿಷ್ಣುವಿನ ಅವತಾರಗಳಲ್ಲಿ ಒಂದಾಗಿದೆ. ಇದು ಆಶ್ರಮದ ಆವರಣವನ್ನು ಪ್ರವೇಶಿಸಿದ ತಕ್ಷಣ ನಿಮ್ಮನ್ನು ಸ್ವಾಗತಿಸುತ್ತದೆ ಹಾಗೂ ವಿಸ್ಮಯಕಾರಿಯಾಗಿದೆ. ವಿಗ್ರಹದ ಸುತ್ತಲೂ ಅಷ್ಟಲಕ್ಷ್ಮಿ ದೇವಿ (ಲಕ್ಷ್ಮಿ ದೇವಿಯ ಎಂಟು ಅವತಾರ), ಲಕ್ಷ್ಮೀ-ನಾರಾಯಣ ಮತ್ತು ಗಾಯತ್ರಿ ದೇವಿಯ ದೇವಾಲಯಗಳಿವೆ.

ಇಲ್ಲಿ ವಿಶ್ವರೂಪ ದೇವಾಲಯವೂ ಇದೆ. ಇದು ವಿಷ್ಣುವಿನ ಭವ್ಯವಾದ ‘ವಿಶ್ವರೂಪಂ’ ಅವತಾರದಲ್ಲಿ ವಿಗ್ರಹವನ್ನು ಹೊಂದಿದೆ. ಪ್ರತಿಮೆಯು ಭವ್ಯವಾಗಿದ್ದು, ಪ್ರತಿಯೊಂದು ಸಣ್ಣ ವಿವರಕ್ಕೂ ವಿಶೇಷ ಗಮನ ನೀಡಲಾಗಿದೆ. ಪ್ರತಿಮೆಯ ಸುತ್ತಲಿನ ಗೋಡೆಗಳ ಮೇಲೆ ಸಂಪೂರ್ಣ ಭಗವದ್ಗೀತೆಯನ್ನು ಗ್ರಾನೈಟ್ ಚಪ್ಪಡಿಗಳ ಮೇಲೆ ಕೆತ್ತಲಾಗಿದೆ.

ವಿಶ್ವರೂಪಂ ದೇವಾಲಯದ ಹೊರಭಾಗದಲ್ಲಿ ಮಹಾಭಾರತದ ಅರ್ಜುನೋಪದೇಶದ ದೃಶ್ಯವನ್ನು ಚಿತ್ರಿಸಲಾಗಿದೆ. ಈ ಚಿತ್ರಣದಲ್ಲಿ ಭಗವಾನ್ ಕೃಷ್ಣನು ದೊಡ್ಡ ರಥದ ಸಾರಥಿಯಾಗಿ ಅರ್ಜುನನಿಗೆ ಉಪದೇಶ ನೀಡುತ್ತಿರುವ ದೃಶ್ಯವು ಅತ್ಯಂತ ಮನೋಹರವಾಗಿದೆ.

ವಿಶ್ವರೂಪ ದೇವಾಲಯದ ಎದುರು ಏಳು ಪ್ರತಿಮೆಗಳಿದ್ದು, ಅವು ಭಾರತದ ಏಳು ಪ್ರಮುಖ ನದಿಗಳನ್ನು ಚಿತ್ರಿಸುತ್ತವೆ. ಗಂಗಾ, ಯಮುನಾ, ಗೋದಾವರಿ, ಕಾವೇರಿ, ನರ್ಮದಾ, ಸಿಂಧು ಮತ್ತು ಸರಸ್ವತಿ. ಇದರ ಶಿಲ್ಪಕಲೆ ಅತ್ಯಂತ ಸುಂದರವಾಗಿದೆ. ಈ ಏಳು ನದಿಗಳ ಮುಂಭಾಗದಲ್ಲಿ ಸದ್ಗುರು ಸಂತ ಕೇಶವದಾಸಜಿಯವರ ಧ್ಯಾನ ಮಂದಿರವಿದೆ.

ವಿಶ್ವ ಶಾಂತಿ ಆಶ್ರಮವು ಸುಂದರ ಹಾಗೂ ಪ್ರಶಾಂತ ಸ್ಥಳವಾಗಿದ್ದು, ಭೇಟಿ ನೀಡಲು ಯೋಗ್ಯವಾಗಿದೆ. ಇಲ್ಲಿ ಗಣೇಶ, ಶಿವ, ರಾಮ, ಪಾಂಡುರಂಗ-ರುಕ್ಮಿಣಿ, ಸುಬ್ರಹ್ಮಣ್ಯ, ರಾಧಾ-ಕೃಷ್ಣ ಮತ್ತು ಸತ್ಯನಾರಾಯಣ ದೇವಾಲಯಗಳ ಸಮೂಹವಿದೆ. ಜೊತೆಗೆ ಸಂಕಟಹರಣ ಮೋಚನ ಆಂಜನೇಯ ದೇವಾಲಯವೂ ಇದೆ.

ಭೇಟಿ ನೀಡಿ
ನೆಲಮಂಗಲದ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section