ಶ್ರೀ ಉದ್ಭವಲಿಂಗ ಅಮರೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಔರಾದ್ನಲ್ಲಿ ಇದ್ದು, ಶಿವನ ರೂಪವಾದ ಅಮರೇಶ್ವರನಿಗೆ ಅರ್ಪಿತ ಪ್ರಮುಖ ಹಿಂದೂ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 777 ಕಿ.ಮೀ (NH50 ಮೂಲಕ), ಹೈದರಾಬಾದ್ ಮೂಲಕ 722 ಕಿ.ಮೀ (NH44), ಬೀದರ್ನಿಂದ 43 ಕಿ.ಮೀ ಮತ್ತು ಔರಾದ್ನಿಂದ 500 ಮೀ ದೂರದಲ್ಲಿದೆ.
ಈ ದೇವಸ್ಥಾನವನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ದೇವಾಲಯವನ್ನು ಅಮರೇಶ್ವರ ಭಕ್ತರು ಪುನರ್ ನಿರ್ಮಿಸಿದ್ದಾರೆ. ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಗಜ ಲಕ್ಷ್ಮಿಗಳಿವೆ. ದೇವಾಲಯದ ವಿನ್ಯಾಸವು ಸಾಂಪ್ರದಾಯಿಕ ದ್ರಾವಿಡ ಶೈಲಿಯನ್ನು ಅನುಸರಿಸುತ್ತದೆ ಮತ್ತು ಸುಕ್ಷ್ಮವಾಗಿ ಕೆತ್ತಿದ ಕಂಬಗಳು ಹಾಗೂ ದೊಡ್ಡ ಸಭಾಂಗಣವನ್ನು ಹೊಂದಿದೆ.
ಇತಿಹಾಸ
ಸ್ಥಳೀಯ ದಂತಕಥೆಗಳ ಪ್ರಕಾರ, ಸ್ವರ್ಗದಿಂದ ಬಂದ ಸಂತ ಅಮರೇಶ್ವರ ದೇವರು 10ನೇ ಶತಮಾನಕ್ಕೂ ಮೊದಲು ಹಲವು ವರ್ಷಗಳ ಕಾಲ ಇಲ್ಲಿ ಧ್ಯಾನ ಮಾಡಿದ್ದರು. ಹತ್ತಿರದ ಯನಗುಂದ ಗ್ರಾಮದಿಂದ ಹಸುಗಳು ಪ್ರತಿದಿನ ಮೇಯಲು ಕಾಡಿಗೆ ಹೋಗುತ್ತಿದ್ದವು. ಒಂದು ದಿನ, ಅಮರೇಶ್ವರ ದೇವರು ಧ್ಯಾನದಲ್ಲಿದ್ದಾಗ, ಒಂದು ಹಸು ತನ್ನ ಬಳಿ ರೂಪುಗೊಂಡಿದ್ದ ಇರುವೆ ಗೂಡಿಗೆ (Ant nest) ಹಾಲುಣಿಸುತ್ತಿರುವುದು ಕಂಡುಬಂತು. ಹಸು ಮನೆಗೆ ಹಿಂದಿರುಗಿದಾಗ, ಅದರ ಕೆಚ್ಚಲು ಖಾಲಿಯಾಗಿತ್ತು. ಇದನ್ನು ಗಮನಿಸಿದ ರೈತನು ಹಸುವನ್ನು ಹಿಂಬಾಲಿಸಿ ಕಾಡಿಗೆ ಹೋಗಲು ನಿರ್ಧರಿಸಿದನು. ಹಸು ಒಂದು ನಿರ್ದಿಷ್ಟ ದಿಬ್ಬದ ಮೇಲೆ ನಿಂತಿತು, ಮತ್ತು ಅದರ ಹಾಲು ನೆಲದಲ್ಲಿದ್ದ ಸಣ್ಣ ರಂಧ್ರಕ್ಕೆ ಹರಿಯಿತು. ಕುತೂಹಲದಿಂದ ರೈತ ಅಗೆದು ನೋಡಿದಾಗ, ಅಲ್ಲಿ ಒಂದು ಲಿಂಗ ಕಂಡುಬಂತು. ಬಳಿಕ ಗ್ರಾಮಸ್ಥರು ಈ ಲಿಂಗವನ್ನು “ಉದ್ಭವ ಲಿಂಗ” ಅಥವಾ ಅಮರೇಶ್ವರ ದೇವರು ಎಂದು ಪೂಜಿಸಲು ಪ್ರಾರಂಭಿಸಿದರು.
ಪ್ರತಿ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ಈ ದೇವಾಲಯವು ಭವ್ಯವಾದ ಅಮರೇಶ್ವರ ಜಾತ್ರೆ ಯನ್ನು ಆಯೋಜಿಸುತ್ತದೆ. ಈ ಜಾತ್ರೆಗೆ ಅಮರೇಶ್ವರ ದೇವರ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಾರೆ.
ಭೇಟಿ ನೀಡಿ



