ಧರ್ಮ ಜಲಾಶಯ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಮಳಗಿ ಪ್ರದೇಶದಲ್ಲಿರುವ ಮನೋಹರ ಜಲಾಶಯವಾಗಿದೆ. ಹಚ್ಚಹಸಿರಿನ ಪರಿಸರ ಮತ್ತು ಜಲಾಶಯದ ಆಕರ್ಷಕ ನೋಟವು ಈ ಸ್ಥಳವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿದೆ.
ಧರ್ಮ ಜಲಾಶಯದ ದೂರಗಳು
- ಬೆಂಗಳೂರು – 385
- ಕಾರವಾರ – 151
- ಮುಂಡಗೋಡು – 34
- ಶಿರಸಿ – 33
- ಹುಬ್ಬಳಿ ರೈಲ್ವೆ ನಿಲ್ದಾಣ – 55
ಧರ್ಮ ಜಲಾಶಯ ಯೋಜನೆಯು 1965ರ ಫೆಬ್ರುವರಿ 20ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪ ಅವರ ಅಮೃತಹಸ್ತದಿಂದ ಆರಂಭಗೊಂಡಿತು.



