ಮಂಜರಾಬಾದ್ ಕೋಟೆ

ಮಂಜರಾಬಾದ್ ಕೋಟೆಯು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ 1785–1791ರ ನಡುವೆ ನಿರ್ಮಿಸಿದರು. ಈ ಕೋಟೆಯು ಬೆಂಗಳೂರು–ಮಂಗಳೂರು ಹೆದ್ದಾರಿಯ ಮೇಲೆ, ಸಕಲೇಶಪುರದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನಲ್ಲಿ ಇದೆ.

ಈ ಕೋಟೆಯು ಬೆಂಗಳೂರಿನಿಂದ 274 ಕಿ.ಮೀ, ಹಾಸನದಿಂದ 44 ಕಿ.ಮೀ ಹಾಗೂ ಸಕಲೇಶಪುರದಿಂದ 5 ಕಿ.ಮೀ ದೂರದಲ್ಲಿದೆ.

ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಿಂದ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಸುಮಾರು 12 ಅಡಿ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದರೆ, ಎರಡನೇ ಹಂತವನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಮೊದಲ ಹಂತವನ್ನು ಸಕಲೇಶಪುರ ತಾಲ್ಲೂಕಿನ ಐಗೂರಿನ ಪಾಳೇಗಾರರು ನಿರ್ಮಿಸಿದರೆಂಬ ಮಾಹಿತಿ ಇದೆ. ನಂತರ ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಪುನರ್‌ನವೀಕರಿಸಿದನು. ಆಂಗ್ಲ–ಮೈಸೂರು ಯುದ್ಧಗಳ ವೇಳೆ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದರ ಕೆಲವು ಭಾಗಗಳನ್ನು ನಾಶಮಾಡಿದರೆಂದು ಎನ್ನಲಾಗಿದೆ.

ಸುಮಾರು 250 ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಇದು ಸಮುದ್ರಮಟ್ಟದಿಂದ ಸುಮಾರು 3,420 ಅಡಿ ಎತ್ತರದಲ್ಲಿದ್ದು, ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನಗಳ ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ. ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.

ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಯು ಸುತ್ತಮುತ್ತಲಿನ ಭೂದೃಶ್ಯದ ಉಸಿರುಗಟ್ಟುವ ನೋಟಗಳನ್ನು ಮತ್ತು ಪ್ರದೇಶದ ಶ್ರೀಮಂತ ಇತಿಹಾಸದ ಒಂದು ಝಲಕಿನ ನೋಟವನ್ನು ನೀಡುವ ಗುಪ್ತ ರತ್ನವಾಗಿದೆ. ಅತ್ಯಾಕರ್ಷಕ ಟ್ರೆಕ್ಕಿಂಗ್ ಟ್ರೇಲ್‌ಗಳು ಮತ್ತು ಬೆರಗುಗೊಳಿಸುವ ದೃಶ್ಯಾವಳಿಗಳೊಂದಿಗೆ, ಇದು ಸಾಹಸ ಹುಡುಕುವವರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಅತ್ಯಂತ ಸೂಕ್ತವಾಗಿದೆ. ಕೆಲವು ಪ್ರದೇಶಗಳಿಗೆ ನಿರ್ವಹಣೆಯ ಅಗತ್ಯವಿದ್ದರೂ, ಕೋಟೆಯು ತನ್ನ ಸಾಂಸ್ಕೃತಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಭೇಟಿ ನೀಡಲೇಬೇಕಾದ ತಾಣವಾಗಿದೆ. ಒಟ್ಟಾರೆ, ಇತಿಹಾಸ ಪ್ರಿಯರು, ಚಾರಣಿಗರು ಮತ್ತು ಛಾಯಾಗ್ರಾಹಕರಿಗೆ ಇದು ಅತ್ಯುತ್ತಮ ಸ್ಥಳ!

ಭೇಟಿ ನೀಡಿ
ಸಕಲೇಶಪುರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section