ಕೈವಾರ ರಾಷ್ಟ್ರೀಯ ಉದ್ಯಾನವು ಚಿಂತಾಮಣಿ ತಾಲೂಕಿನ ಬಟ್ಟಿಗನಹಳ್ಳಿಯಲ್ಲಿ ಇದೆ. ಇದು ಕೈವಾರದ ಹೊರವಲಯದಲ್ಲಿರುವ ಉದ್ಯಾನವನದಂತಿರುವ ಮಿನಿ ಅರಣ್ಯವಾಗಿದೆ. ವಿಶ್ರಾಂತಿ ಪಡೆಯಲು ದಂಪತಿಗಳು, ಕುಟುಂಬಗಳು ಮತ್ತು ಸ್ನೇಹಿತರಿಗೆ ಇದು ಶಾಂತಿಯುತ ಸ್ಥಳವಾಗಿದೆ. ಇಲ್ಲಿ ಜಿಂಕೆ, ನವಿಲುಗಳು, ಮೊಲಗಳು, ಮಂಗಗಳು ಇತ್ಯಾದಿಗಳನ್ನು ಕಾಣಬಹುದು. ಈ ಉದ್ಯಾನವನದ ಪ್ರವೇಶಕ್ಕೆ ಗುರುತಿನ ಚೀಟಿ (ಐಡಿ ಕಾರ್ಡ್) ಕಡ್ಡಾಯವಾಗಿದ್ದು, ಪ್ರವೇಶ ಶುಲ್ಕ ಒಬ್ಬರಿಗೆ ₹10/- ಆಗಿದೆ.
ಈ ಸ್ಥಳವು ಬೆಂಗಳೂರಿನಿಂದ ಸುಮಾರು 82 ಕಿ.ಮೀ ಮತ್ತು ಚಿಕ್ಕಬಳ್ಳಾಪುರ ನಗರದಿಂದ ಸುಮಾರು 36 ಕಿ.ಮೀ ದೂರದಲ್ಲಿದೆ. ಹಾಗೂ ಚಿಂತಾಮಣಿ ಯಿಂದ 12 ಕಿ.ಮೀ ಚಿಂತಾಮಣಿ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.
ಭೇಟಿ ನೀಡಿ
ಭೇಟಿ ನೀಡಿ















