1008 ಅನಂತನಾಥ ತೀರ್ಥಂಕರ ದಿಗಂಬರ್ ಜೈನ ಬಸದಿ

ಲಕ್ಷ್ಮೇಶ್ವರದಲ್ಲಿರುವ ಮತ್ತೊಂದು ಜೈನ ದೇವಾಲಯವೆಂದರೆ ಅನಂತನಾಥ ಬಸದಿ. ಈ ಬಸದಿಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆ, ಲಕ್ಷ್ಮೇಶ್ವರ ಪಟ್ಟಣದ ಮಧ್ಯಭಾಗದಲ್ಲಿ ಇದೆ. ಇದನ್ನು ಕ್ರಿ.ಶ. 1250 ರಲ್ಲಿ ನಿರ್ಮಿಸಲಾಗಿದೆ. ಇದು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಒಬ್ಬ ಉತ್ತಮ ಉದಾಹರಣೆಯಾಗಿದೆ.

ಲಕ್ಷ್ಮೇಶ್ವರದಲ್ಲಿರುವ ಈ ಬಸದಿಯು ಬೆಂಗಳೂರಿನಿಂದ 385 ಕಿ.ಮೀ ಮತ್ತು ಗದಗದಿಂದ 46 ಕಿ.ಮೀ ದೂರದಲ್ಲಿದೆ. ಹಾಗೂ ಲಕ್ಷ್ಮೇಶ್ವರ ಪಟ್ಟಣದಿಂದ ಕೇವಲ 650 ಮೀ ಮತ್ತು ಗುಡಗೇರಿ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.

ಲಕ್ಷ್ಮೇಶ್ವರದಲ್ಲಿರುವ ಈ ಪ್ರಾಚೀನ ಸ್ಮಾರಕವು ಕಲ್ಯಾಣಿ ಚಾಲುಕ್ಯರ ಕಾಲದ ಬಸದಿಯಾಗಿದೆ. ನಂತರ ವಿಜಯನಗರ ಅರಸರ ಕಾಲದಲ್ಲಿ ಜೈನ ಬಸದಿಯನ್ನು ವಿಸ್ತರಣೆ ಮಾಡಲಾಗಿದೆ. ಈ ದೇವಾಲಯವು ತ್ರಿಕೂಟ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ನಾಲ್ಕು ಗರ್ಭಗೃಹಗಳಲ್ಲಿ ಜೈನ ತೀರ್ಥಂಕರ ವಿಗ್ರಹಗಳು ಪ್ರತಿಷ್ಠಾಪಿತವಾಗಿದ್ದು, ತೀರ್ಥಂಕರರ ಕೆಳಗಡೆ ಶಾಸನಗಳನ್ನೂ ಕೆತ್ತಲಾಗಿದೆ.

ಈ ಬಸದಿಯು ರಾಜ್ಯ ಸರ್ಕಾರದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಧೀನಕ್ಕೆ ಒಳಪಟ್ಟಿದೆ.

ಭೇಟಿ ನೀಡಿ
ಲಕ್ಷ್ಮೇಶ್ವರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section