ಹಳೇಬೀಡು ಜೈನ ಬಸದಿ ದೇವಸ್ಥಾನ

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ಇರುವ ಜೈನ ಬಸದಿ ಸಂಕೀರ್ಣವು ಜೈನ ತೀರ್ಥಂಕರರಾದ ಪಾರ್ಶ್ವನಾಥ, ಶಾಂತಿನಾಥ ಮತ್ತು ಆದಿನಾಥರಿಗೆ ಸಮರ್ಪಿತವಾದ ಸ್ಥಳವಾಗಿದೆ. ಜೈನ ಬಸದಿ ಸಂಕೀರ್ಣವು ಕೇದಾರೇಶ್ವರ ದೇವಾಲಯ ಮತ್ತು ದ್ವಾರಸಮುದ್ರ ಸರೋವರದ ಬಳಿ ಇದೆ. ಈ ದೇವಾಲಯಗಳನ್ನು 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.

ಈ ಬಸದಿ ಸಂಕೀರ್ಣವು ಬೆಂಗಳೂರಿನಿಂದ 216 ಕಿ.ಮೀ, ಹಾಸನದಿಂದ 32 ಕಿ.ಮೀ ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 27 ಕಿ.ಮೀ ದೂರದಲ್ಲಿದೆ.

ಇತಿಹಾಸ

ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಳೇಬೀಡಿನಲ್ಲಿ, 11 ರಿಂದ 14ನೇ ಶತಮಾನವರೆಗೆ ಜೈನಧರ್ಮವು ಈ ಪ್ರದೇಶದಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿತ್ತು. ಹೊಯ್ಸಳರ ಆಳ್ವಿಕೆಯಲ್ಲಿ ಈ ಪ್ರದೇಶವನ್ನು ದ್ವಾರಸಮುದ್ರ ಎಂದು ಕರೆಯಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯದ ಪ್ರಮುಖ ಅರಸನಾದ ಬಿಟ್ಟಿಗ, ಇವರ ನಂತರದ ಹೆಸರು ವಿಷ್ಣುವರ್ಧನ. ಬಿಟ್ಟಿಗನು ಹೊಯ್ಸಳ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರರಲ್ಲಿ ಒಬ್ಬನಾಗಿ ಪರಿಗಣಿಸಲ್ಪಟ್ಟಿದ್ದಾನೆ. ಸುಮಾರು 1115ರವರೆಗೆ ಆತನು ಜೈನನಾಗಿದ್ದನು. ನಂತರ ಹಿಂದೂ ಸಂತ ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಧರ್ಮಕ್ಕೆ ಮತಾಂತರಗೊಂಡನು.

ಅವರ ಆಡಳಿತದ ಅವಧಿಯಲ್ಲಿ ಹಿಂದೂ ಧರ್ಮ ಮತ್ತು ಜೈನಧರ್ಮವು ಉತ್ತಮ ಧಾರ್ಮಿಕ ಸಾಮರಸ್ಯದೊಂದಿಗೆ ಸಹ ಅಸ್ತಿತ್ವದಲ್ಲಿದ್ದವು. ವಿಷ್ಣುವರ್ಧನನ (ಬಿಟ್ಟಿಗ) ಪತ್ನಿ ಶಾಂತಲಾದೇವಿ ಜೀವನಪರ್ಯಂತ ಜೈನ್ ಧರ್ಮದ ಅನುಯಾಯಿಯಾಗಿಯೇ ಉಳಿದಳು. ನಂತರದ ಕಾಲದಲ್ಲಿ ಈ ದೇವಾಲಯವನ್ನು ಮೈಸೂರು ಮಹಾರಾಜರು ನಿರ್ವಹಿಸಿದರು.

ಪಾರ್ಶ್ವನಾಥ ಬಸದಿಯನ್ನು ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಬೊಪ್ಪದೇವನು ಕ್ರಿಸ್ತಶಕ 1133ರಲ್ಲಿ ನಿರ್ಮಿಸಿದನು. ಬೊಪ್ಪದೇವನು ಹೊಯ್ಸಳ ರಾಜ ವಿಷ್ಣುವರ್ಧನನ ಮಂತ್ರಿಯಾಗಿದ್ದ ಗಂಗಾರಾಜನ ಮಗನು. ಶಾಂತಿನಾಥ ಬಸದಿಯನ್ನು ವೀರಬಲ್ಲಾಳ II ಅವರ ಆಳ್ವಿಕೆಯಲ್ಲಿ ಕ್ರಿ.ಶ. 1192ರಲ್ಲಿ ನಿರ್ಮಿಸಲಾಯಿತು.

ಆದಿನಾಥ ಬಸದಿಯು ಜೈನ ಬಸದಿಗಳಲ್ಲಿ ಚಿಕ್ಕದಾಗಿದೆ. 12ನೇ ಶತಮಾನದಲ್ಲಿ ನಿರ್ಮಿಸಿದ ಈ ದೇವಾಲಯದ ಒಳಗೆ ಬಾಹುಬಲಿಯ ಏಕಶಿಲೆಯನ್ನು ಸ್ಥಾಪಿಸಲಾಗಿತ್ತು. ಆದರೆ ಈಗ ಈ ಏಕಶಿಲೆಯನ್ನು ಹಳೇಬೀಡು ವಸ್ತುಸಂಗ್ರಹಾಲಯದ ಹೊರಗೆ ಪ್ರದರ್ಶಿಸಲಾಗುತ್ತಿದೆ.

ಭೇಟಿ ನೀಡಿ
ಬೇಲೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section