ಗೋಸಲ ಚನ್ನಬಸವೇಶ್ವರ ದೇವಾಲಯ ಗುಬ್ಬಿ

ಗೋಸಲ ಚನ್ನಬಸವೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು 15ನೇ ಶತಮಾನದಲ್ಲಿ ನೆಲೆಸಿದ್ದ ಶಿವಯೋಗಿಯಾಗಿದ್ದು, ಪವಾಡಪುರುಷರಾಗಿ ಪ್ರಸಿದ್ಧರಾಗಿದ್ದರು. ಧರ್ಮ ಜಾಗೃತಿ ಕಾರ್ಯಕ್ಕಾಗಿ ದೇಶಸಂಚಾರ ಮಾಡುತ್ತಿದ್ದ ಅವರು, ಜನಸಾಮಾನ್ಯರಿಗೆ ಹತ್ತಿರವಾಗಿದ್ದು ಹಲವಾರು ಪವಾಡಗಳ ಮೂಲಕ ಮನೆಮಾತಾಗಿದ್ದರು.

ಯಡಿಯೂರು ಕ್ಷೇತ್ರದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳು ಅವರಿಗೆ ದೀಕ್ಷೆ ನೀಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈ ಯೋಗಿಗಳು ಲಿಂಗೈಕರಾದ ಈ ಸ್ಥಳದಲ್ಲೇ ಇಂದು ಬೃಹತ್ ದೇಗುಲವನ್ನು ನಿರ್ಮಿಸಲಾಗಿದೆ.

ಗೋಸಲ ಚನ್ನಬಸವೇಶ್ವರ ದೇವಾಲಯದ ದೂರಗಳು

  • ಬೆಂಗಳೂರು – 96 ಕಿ.ಮೀ
  • ತುಮಕೂರು – 20 ಕಿ.ಮೀ
  • ಗುಬ್ಬಿ – 1 ಕಿ.ಮೀ
  • ಗುಬ್ಬಿ ರೈಲ್ವೆ ನಿಲ್ದಾಣ – 3 ಕಿ.ಮೀ

ಗುಬ್ಬಿ ಪಟ್ಟಣದಲ್ಲಿರುವ ಈ ದೇಗುಲವನ್ನು ಗುಬ್ಬಿ ಪಟ್ಟಣದ ಕಿರೀಟವೆಂದೇ ಪರಿಗಣಿಸಲಾಗುತ್ತದೆ. ತುಮಕೂರು ಜಿಲ್ಲೆಯ ಗುಬ್ಬಿ ಒಂದು ಐತಿಹಾಸಿಕ ತಾಣವಾಗಿದ್ದು, ಪ್ರಾಚೀನ ಕಾಲದಲ್ಲಿ ಇದನ್ನು “ಅಮರಕೊಂಡ” ಎಂದು ಕರೆಯಲಾಗುತ್ತಿತ್ತು.

ಗುಬ್ಬಿ ಇತಿಹಾಸ

“ಗುಬ್ಬಿ” ಎಂಬ ಹೆಸರಿನ ಹಿಂದೆ ಒಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಈ ಊರಿನಲ್ಲಿ ಗದ್ದೆ ಮಲ್ಲೇಶ್ವರ ಎಂಬ ಪ್ರಾಚೀನ ದೇವಾಲಯವಿದ್ದು, ಅಲ್ಲಿ ಪ್ರತಿನಿತ್ಯ ಪ್ರವಚನಗಳು ಸೇರಿದಂತೆ ಅನೇಕ ಪುಣ್ಯಕಾರ್ಯಗಳು ನಡೆಯುತ್ತಿದವು. ಆ ಪ್ರವಚನಗಳನ್ನು ಕೇಳಲು ಎರಡು ಗುಬ್ಬಿ ಮರಿಗಳು ಬಂದು ಕುಳಿತುಕೊಳ್ಳುತ್ತಿದವಂತೆ. ಹೀಗೆ ನಿರಂತರವಾಗಿ ಪ್ರವಚನವನ್ನು ಕೇಳುತ್ತಾ ಅವುಗಳು ತಮ್ಮ ಪ್ರಾಣತ್ಯಾಗ ಮಾಡಿದವು ಎಂಬ ದಂತಕಥೆ ಇದೆ. ಈ ಕಾರಣದಿಂದಲೇ ಈ ಸ್ಥಳಕ್ಕೆ “ಗುಬ್ಬಿ” ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.

ಇಂದಿಗೂ ಗದ್ದೆ ಮಲ್ಲೇಶ್ವರ ದೇವಾಲಯದಲ್ಲಿ ಆ ಗುಬ್ಬಿಗಳ ಸಮಾಧಿ ಇರುವುದಾಗಿ ನಂಬಲಾಗಿದೆ. ಗುಬ್ಬಿಗಳಿಗೆ ಸದ್ಗತಿ ದೊರೆತ ನಂತರ, ಈ ಕ್ಷೇತ್ರವು ಶಿವಶರಣರಿಗೆ ಆಶ್ರಯ ತಾಣವಾಗಿ ಬೆಳೆಯಿತು.

ಗುಬ್ಬಿ ಕ್ಷೇತ್ರದಲ್ಲಿ ಆಶ್ರಯ ಪಡೆದ ಶಿವಶರಣರಲ್ಲಿ ಪ್ರಮುಖರು ಗೋಸಲ ಚನ್ನಬಸವೇಶ್ವರ ಸ್ವಾಮಿಗಳು. ವೀರಶೈವ ಧರ್ಮವನ್ನು ಉಳಿಸಿ ಬೆಳೆಸಿದ ಇವರಿಗೆ ಸಮರ್ಪಿತವಾದ ದೇವಾಲಯವು ಇಂದು ಪುಣ್ಯಕ್ಷೇತ್ರವಾಗಿಯೂ ಸಾಂಸ್ಕೃತಿಕ ಕೇಂದ್ರವಾಗಿಯೂ ಪ್ರಸಿದ್ಧಿಯಾಗಿದೆ.

ಭೇಟಿ ನೀಡಿ
ಗುಬ್ಬಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section