ಕೈವಾರ ಬೆಟ್ಟವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಟಿಗನಹಳ್ಳಿಯಲ್ಲಿ ಇರುವ ಬೆಟ್ಟವಾಗಿದೆ. ಕೈವಾರ ಬೆಟ್ಟದ ಮೇಲ್ಭಾಗದಲ್ಲಿ ಕೆಂಪೇಗೌಡ ಕೋಟೆಯೂ ಇದ್ದು, ಈ ಕೋಟೆಯು ಈಗ ಶಿಥಿಲಾವಸ್ಥೆಯಲ್ಲಿ ಇದೆ. ಈ ಬೆಟ್ಟವನ್ನು ಭೀಮ ಬಕಾಸುರ ಬೆಟ್ಟ ಎಂದೂ ಕರೆಯಲಾಗುತ್ತದೆ. ಇದು ಬಹುಮಟ್ಟಿನ ಇತಿಹಾಸವನ್ನು ಹೊಂದಿದ್ದು, ಕೈವಾರ ಪ್ರದೇಶದಲ್ಲಿ ಅತ್ಯುತ್ತಮ ಸೂರ್ಯೋದಯದ ನೋಟವನ್ನು ನೀಡುತ್ತದೆ.
ಈ ಸ್ಥಳವು ಬೆಂಗಳೂರಿನಿಂದ ಸುಮಾರು 82 ಕಿ.ಮೀ ಮತ್ತು ಚಿಕ್ಕಬಳ್ಳಾಪುರ ನಗರದಿಂದ ಸುಮಾರು 36 ಕಿ.ಮೀ ದೂರದಲ್ಲಿದೆ. ಹಾಗೂ ಚಿಂತಾಮಣಿ ಯಿಂದ 12 ಕಿ.ಮೀ ಚಿಂತಾಮಣಿ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.
ಕೈವಾರ ಬೆಟ್ಟವನ್ನು ಏರಲು ನೀವು ಮೊದಲು ಕೈವಾರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶ ಮಾಡಬೇಕು. ಈ ಉದ್ಯಾನವನಕ್ಕೆ ಪ್ರವೇಶಿಸಲು ಗುರುತಿನ ಚೀಟಿ (ಐಡಿ ಕಾರ್ಡ್) ಕಡ್ಡಾಯವಾಗಿದ್ದು, ಪ್ರವೇಶ ಶುಲ್ಕ ಒಬ್ಬರಿಗೆ ₹10/- ಇದೆ.
ರಮಣೀಯ ಮಾರ್ಗವಿರುವ ಈ ಸುಂದರ ಬೆಟ್ಟದ ತುದಿ ಮೇಲ್ಭಾಗಕ್ಕೆ ಚಾರಣ ಕೆಲವರಿಗೆ ಸ್ವಲ್ಪ ಕಠಿಣವಾಗಬಹುದು, ಏಕೆಂದರೆ ಮೇಲ್ಭಾಗದ ಪಥವು ನಿಜವಾಗಿಯೂ ತೀವ್ರ ಇಳಿಜಾರಿನಂತೆ ಕಾಣುತ್ತದೆ. ಆದರೂ, ಈ ಪ್ರಯಾಣವು ಸಂಪೂರ್ಣವಾಗಿ ಯೋಗ್ಯವಾಗಿದೆ. ಮೇಲ್ಭಾಗದಲ್ಲಿ ನೀವು ಪ್ರಾಚೀನ ಅವಶೇಷಗಳನ್ನೂ ಕಾಣಬಹುದು.
ಭೇಟಿ ನೀಡಿ
ಭೇಟಿ ನೀಡಿ
















