ಶ್ರೀ ವಿಜಯದುರ್ಗಾ ಕ್ಷೇತ್ರ

ಶ್ರೀ ವಿಜಯ ದುರ್ಗಾ ಕ್ಷೇತ್ರವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಆಲೂರ್ ತಾಲೂಕಿನಲ್ಲಿ ಇರುವ ಒಂದು ಸುಂದರ ಹಾಗು ಪ್ರಸಿದ್ಧ ದೇವಾಲಯವಾಗಿದೆ. ಮೂರೂ ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಉಡಸಲಮ್ಮ ಮತ್ತು ಮಸ್ತಲಮ್ಮ ದೇವಿಯರ ಪುನಾರ ಜೀವನಗೊಂಡ ವಿನೂತನ ದೇವಾಲಯಗಳ ಸಮುಚ್ಛಯವೇ ಈ ವಿಜಯ ದುರ್ಗಾ ಕ್ಷೇತ್ರಗಾಗಿ ರೂಪಗೊಂಡಿದೆ.

ಶ್ರೀ ವಿಜಯ ದುರ್ಗಾ ಕ್ಷೇತ್ರವು ಬೆಂಗಳೂರಿನಿಂದ ಸುಮಾರು 196 ಕಿ.ಮೀ ಮತ್ತು ಹಾಸನ ನಗರದಿಂದ 15 ಕಿ.ಮೀ ದೂರದಲ್ಲಿದೆ. ಹಾಗೂ ಆಲೂರ್ ತಾಲೂಕಿನಿಂದ 02 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 17 ಕಿ.ಮೀ ದೂರದಲ್ಲಿದೆ.

ಈ ಕ್ಷೇತ್ರವು ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 1:30 ರವರೆಗೆ ಮತ್ತು ಸಂಜೆ 4:00 ಗಂಟೆಗೆ 7:30 ರವರೆಗೆ ತೆರೆಯುತ್ತದೆ.

ದೇವಿಮಹಾತ್‌ಮಾಯದ ಪ್ರಕಾರ ದೈವಿ ಸ್ವರೂಪಕಾದ ಅಮ್ಮನಿಗೆ ಒಂಬತ್ತು ಹೆಸರುಗಳು – ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಗಂಟಾ, ಕುಷ್ಕಂಡ, ಸ್ಲಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಯಜ್ಞ ಮಂಟಪದ ಹೊರಗೆ ಪ್ರದಕ್ಷಿಣೆ ಹಾಕಿ ದೇವಿಯ ನವ ರೂಪಗಳ ದರ್ಶನ ಪಡೆಯಬಹುದು. ದುರ್ಗೆಯು ದೇಹ, ಮನಸ್ಸು ಮತ್ತು ಆತ್ಮದ ಎಲ್ಲಾ ಶಕ್ತಿಗಳ ಸಂಯೋಗದ ಪ್ರತೀಕವಾಗಿದ್ದಾಳೆ. ಈ ಶಕ್ತಿಯಿಂದ ಕೆಟ್ಟ ಗುಣಗಳು ಮತ್ತು ಕೆಟ್ಟ ಹವ್ಯಾಸಗಳು ನಾಶವಾಗುತ್ತವೆ. ನವದುರ್ಗೆಯಕ ದರ್ಶನದಿಂದ ಹಾಗು ದೈವಿ ಸ್ವರೂಪಳಾದ ದೇವಿಯ ನವ ರೂಪದ ಬಗ್ಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವುದರಿಂದ ಕೆಟ್ಟ ಶಕ್ತಿಗಳು ನಿರ್ಮೂಲನಗೊಂಡು, ಆತ್ಮವು ಶುದ್ಧವಾಗುತ್ತದೆ.

ಭೇಟಿ ನೀಡಿ
ಆಲೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section