ಲಕ್ಷ್ಮೇಶ್ವರದಲ್ಲಿರುವ ಮತ್ತೊಂದು ಜೈನ ದೇವಾಲಯವೆಂದರೆ ಅನಂತನಾಥ ಬಸದಿ. ಈ ಬಸದಿಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆ, ಲಕ್ಷ್ಮೇಶ್ವರ ಪಟ್ಟಣದ ಮಧ್ಯಭಾಗದಲ್ಲಿ ಇದೆ. ಇದನ್ನು ಕ್ರಿ.ಶ. 1250 ರಲ್ಲಿ ನಿರ್ಮಿಸಲಾಗಿದೆ. ಇದು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಒಬ್ಬ ಉತ್ತಮ ಉದಾಹರಣೆಯಾಗಿದೆ.
ಲಕ್ಷ್ಮೇಶ್ವರದಲ್ಲಿರುವ ಈ ಬಸದಿಯು ಬೆಂಗಳೂರಿನಿಂದ 385 ಕಿ.ಮೀ ಮತ್ತು ಗದಗದಿಂದ 46 ಕಿ.ಮೀ ದೂರದಲ್ಲಿದೆ. ಹಾಗೂ ಲಕ್ಷ್ಮೇಶ್ವರ ಪಟ್ಟಣದಿಂದ ಕೇವಲ 650 ಮೀ ಮತ್ತು ಗುಡಗೇರಿ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.
ಲಕ್ಷ್ಮೇಶ್ವರದಲ್ಲಿರುವ ಈ ಪ್ರಾಚೀನ ಸ್ಮಾರಕವು ಕಲ್ಯಾಣಿ ಚಾಲುಕ್ಯರ ಕಾಲದ ಬಸದಿಯಾಗಿದೆ. ನಂತರ ವಿಜಯನಗರ ಅರಸರ ಕಾಲದಲ್ಲಿ ಜೈನ ಬಸದಿಯನ್ನು ವಿಸ್ತರಣೆ ಮಾಡಲಾಗಿದೆ. ಈ ದೇವಾಲಯವು ತ್ರಿಕೂಟ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ನಾಲ್ಕು ಗರ್ಭಗೃಹಗಳಲ್ಲಿ ಜೈನ ತೀರ್ಥಂಕರ ವಿಗ್ರಹಗಳು ಪ್ರತಿಷ್ಠಾಪಿತವಾಗಿದ್ದು, ತೀರ್ಥಂಕರರ ಕೆಳಗಡೆ ಶಾಸನಗಳನ್ನೂ ಕೆತ್ತಲಾಗಿದೆ.
ಈ ಬಸದಿಯು ರಾಜ್ಯ ಸರ್ಕಾರದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಧೀನಕ್ಕೆ ಒಳಪಟ್ಟಿದೆ.
ಭೇಟಿ ನೀಡಿ



