ಜೇನುಕಲ್ಲು ಗುಡ್ಡ ಮತ್ತು ದೀಪದ ಕಲ್ಲು ಗುಡ್ಡವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿರುವ ಪ್ರಖ್ಯಾತ ಪರ್ವತ ಶಿಖರಗಳಾಗಿವೆ. ಇವು ಸಕಲೇಶಪುರದ ಅತ್ಯುತ್ತಮ ಮತ್ತು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಬೆಟ್ಟದ ಭೈರವೇಶ್ವರ ದೇವಸ್ಥಾನದಿಂದ ಚಾರಣದ ಮೂಲಕ ಜೇನುಕಲ್ಲು ಶಿಖರವನ್ನು ತಲುಪಬಹುದು.
ಈ ಸ್ಥಳವು ಬೆಂಗಳೂರಿನಿಂದ ಸುಮಾರು 205 ಕಿ.ಮೀ, ಹಾಸನ ಪಟ್ಟಣದಿಂದ 55 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 52 ಕಿ.ಮೀ ದೂರದಲ್ಲಿದೆ.
ಚಾರಣದ ದೂರವು ಬೆಟ್ಟದ ಭೈರವೇಶ್ವರ ದೇವಾಲಯದಿಂದ ಸುಮಾರು 7 ಕಿ.ಮೀ ಆಗಿದ್ದು, ಎರಡೂ ಮಾರ್ಗ ಸೇರಿ ಸುಮಾರು 4 ರಿಂದ 5 ಗಂಟೆಗಳು ಹೊತ್ತುಕೊಳ್ಳುತ್ತದೆ. ಚಾರಣದ ಆರಂಭಿಕ ಭಾಗವು ಸರಳ ಮತ್ತು ಕ್ರಮೇಣ ಏರುವುದು, ಆದರೆ ಅಂತಿಮ ಹಂತವು ಕಠಿಣ ಮತ್ತು ಕಡಿದಾದ ಏರುಪ್ರದೇಶವಾಗಿದೆ.
ಭೇಟಿ ನೀಡಿ





