ಶ್ರೀ ಅನಂತಪದ್ಮನಾಭ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕು ಹೊಸ ಬೂದನೂರ ಗ್ರಾಮದಲ್ಲಿ ಇರುವ ಹೊಯ್ಸಳ ಕಾಲದ ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ರಾಜ ವೀರ ಬಲ್ಲಾಳ III ರ ಆಳ್ವಿಕೆಯಲ್ಲಿ 12-13 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಹೊಸ ಬೂದನೂರ ಗ್ರಾಮದಲ್ಲಿ ಹೊಯ್ಸಳ ಕಾಲದ ಎರಡು ದೇವಾಲಯವಿದ್ದು, ಇನ್ನೊಂದು ದೇವಾಲಯ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 100 ಕಿ.ಮೀ ಮತ್ತು ಮಂಡ್ಯದಿಂದ ಕೇವಲ 8 ಕಿ.ಮೀ ದೂರದಲ್ಲಿದೆ.
ಅನಂತ ಪದ್ಮನಾಭ ದೇವಾಲಯವು ಭಗವಾನ್ ಅನಂತ ಪದ್ಮನಾಭನಿಗೆ ಸಮರ್ಪಿತವಾಗಿದೆ. ಈ ಶಿಲ್ಪವು ನಿಂತಿರುವ ಭಂಗಿಯಲ್ಲಿದೆ, ಇದು ಈ ದೇವರ ಅಪರೂಪದ ರೂಪಗಳಲ್ಲಿ ಒಂದಾಗಿದೆ. ಅವರು ಚಕ್ರ, ಅಷ್ಟಬಂಧ, ಗದ ಮತ್ತು ಶಂಕವನ್ನು ಹಿಡಿದಿದ್ದಾರೆ. ದೇವಾಲಯದ ಬಾಗಿಲಿನ ಚೌಕಟ್ಟುಗಳನ್ನು ಹೆಚ್ಚು ಅಲಂಕರಿಸಲಾಗಿದೆ. ಗಣಪತಿ ಮತ್ತು ಲಕ್ಷ್ಮಿಯ ಶಿಲ್ಪಗಳನ್ನು ಹೊಂದಿರುವ ಎರಡು ಸಣ್ಣ ದೇವಾ ಗುಡಿಗಳಿವೆ. ದೇವಾಲಯದಲ್ಲಿ ಒಂದು ಶಾಸನ ಕಲ್ಲು ಇದೆ, ಇದು ದೇವಾಲಯದ ಬಗ್ಗೆ ಮಾಹಿತಿಯ ಪ್ರಮುಖ ಮೂಲವಾಗಿದೆ.
ಭೇಟಿ ನೀಡಿ