ಮೇಲುಕೋಟೆ ಕಲ್ಯಾಣಿಯು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಇರುವಂತಹ ಮೇಲುಕೋಟೆ ದೇವಾಲಯದ ಕಲ್ಯಾಣಿ ಆಗಿದೆ. ಈ ಪುರಾತನ ದೇವಾಲಯದ ಕಲ್ಯಾಣಿಯು 1000 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಈ ಜಿಲ್ಲೆಯ 108 ದೇವಾಲಯಗಳ ಕಲ್ಯಾಣಿಗಳಲ್ಲಿ ಇದು ಬಹಳ ದೊಡ್ಡದಾಗಿದೆ ಎಂದು ಪರಿಗಣಿಸಲಾಗಿದೆ.
ಈ ಕಲ್ಯಾಣಿಯು ಬೆಂಗಳೂರಿನಿಂದ ಸುಮಾರು 137 ಕಿ.ಮೀ ಮತ್ತು ಮಂಡ್ಯ ನಗರದಿಂದ ಸುಮಾರು 39 ಕಿ.ಮೀ ದೂರದಲ್ಲಿದೆ. ಹಾಗೂ ಮೈಸೂರು ನಗರದಿಂದ 47 ಕಿ.ಮೀ ಮತ್ತು ಪಾಂಡವಪುರ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು ಕೇವಲ 29 ಕಿ.ಮೀ ದೂರದಲ್ಲಿದೆ.
ಈ ಕಲ್ಯಾಣಿಯು ಕಲ್ಲಿನ ಕಂಬಗಳಿಂದ ಆವೃತವಾದ ಮತ್ತು ಕಾರಿಡಾರ್ಗಳಿಂದ ಆವೃತವಾದ ಬೃಹತ್ ತೊಟ್ಟಿಯಾಗಿದೆ. ಪ್ರತಿಯೊಂದು ಕಂಬಗಳ ಮೇಲೆ ಸುಂದರವಾಗಿ ಕೆತ್ತಲಾಗಿದೆ. ಕಂಬಗಳು ಮತ್ತು ತೊಟ್ಟಿಯ ನಡುವೆ ನೀರಿಗೆ ಇಳಿಯುಲು ಸಮಾನ ಹಂತಗಳ ಮೆಟ್ಟಿಲುಗಳಿವೆ. ದೇವಾಲಯದ ತೊಟ್ಟಿಯು ಕಾಲುವೆಗಳ ಜಾಲದ ಮೂಲಕ ಸುತ್ತಮುತ್ತಲಿನ ಇತರ 107 ಕಲ್ಯಾಣಿಗಳಿಗೆ ಸಂಪರ್ಕ ಹೊಂದಿದೆ.
ಮೇಲುಕೋಟೆಯ ಕಲ್ಯಾಣಿಯು ಅತಿದೊಡ್ಡ ದೇವಾಲಯದ ಕಲ್ಯಾಣಿ ಆಗಿದ್ದು, ಈ ಕಲ್ಯಾಣಿಯಾ ನೀರನ್ನು ದೇವರ ಅಭಿಷೇಕ ಹಾಗು ಪೂಜಾ ಕಾರ್ಯಗಳಿಗೆ ಉಪಯೋಗಿಸಲಾಗುವುದು. ಇದನ್ನು ಭುವನೇಶ್ವರಿ ಮಂಟಪ ಎಂದು ಸಹ ಕರೆಯುವ ರೂಢಿಯಿದೆ.
ಪ್ರಾಚೀನ ಭಾರತದ ಕಾಲದಲ್ಲಿ ದೇವಾಲಯಗಳನ್ನು ಸಾಮಾನ್ಯವಾಗಿ ನೀರಿನ ಮೂಲದ ಬಳಿ ನಿರ್ಮಿಸಲಾಗುತಿತ್ತು. ದೇವಾಲಯಗಳನ್ನು ನದಿಗಳ ದಡದಲ್ಲಿ, ತೊರೆಗಳು ಮತ್ತು ಸರೋವರಗಳ ಪಕ್ಕದಲ್ಲಿ ನಿರ್ಮಿಸಲಾಗುತಿತ್ತು ಅಥವಾ ಅವುಗಳ ಪಕ್ಕದಲ್ಲಿ ಕಲ್ಯಾಣಿ ಹೊಂದಿರುತ್ತದೆ.
ಇತಿಹಾಸ
ಈಶ್ವರ ಸಂಹಿತೆಯ ಪ್ರಕಾರ, ಶ್ರೀಕೃಷ್ಣನು ಭೂಮಿಯನ್ನು ಸಾರ್ವತ್ರಿಕ ಸಾಗರದಿಂದ ಮೇಲಕ್ಕೆತ್ತಿದಾಗ ವರಾಹ ಅವತಾರವನ್ನು ತೆಗೆದುಕೊಂಡನು. ಹಾಗೆ ಮಾಡುವಾಗ, ಅವನ ದೇಹದ ಮೇಲಿದ್ದ ನೀರಿನ ಕೆಲವು ಹನಿಗಳು ಮೇಲುಕೋಟೆಯ ಬೆಟ್ಟದ ಮೇಲೆ ಬಿದ್ದವು. ಇದು ಕಲ್ಯಾಣಿ ಕೊಳದ ಸೃಷ್ಟಿಗೆ ಕಾರಣವಾಯಿತು. ಮೇಲುಕೋಟೆಯ ಕಲ್ಯಾಣಿಗಳನ್ನು ನೋಡಲು ಅತ್ಯಂತ ಭವ್ಯವಾಗಿವೆ ಹಾಗು ಪ್ರಶಾಂತ ವಾತಾವರಣವನ್ನು ಹೊಂದಿದೆ. ಕಲ್ಯಾಣಿಯ ರಚನೆಯ ವಿನ್ಯಾಸವು ವಿಸ್ಮಯವನ್ನುಟು ಮಾಡುತ್ತದೆ. ನೈಸರ್ಗಿಕ ಪರಿಸರ ವ್ಯವಸ್ಥೆ ಕಣ್ಣಿಗೆ ಆಹ್ಲಾದವನ್ನು ನೀಡುವುದು.
ಭೇಟಿ ನೀಡಿ