ಪುರಾತನ ಹೊಯ್ಸಳ ಶ್ರೀ ಕಾಶಿ ವಿಶ್ವನಾಥ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕು ಹೊಸ ಬೂದನೂರ ಗ್ರಾಮದಲ್ಲಿ ಇರುವ ಹೊಯ್ಸಳ ಕಾಲದ ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ರಾಜ ವೀರ ಬಲ್ಲಾಳ III ರ ಆಳ್ವಿಕೆಯಲ್ಲಿ 12-13 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಹೊಸ ಬೂದನೂರ ಗ್ರಾಮದಲ್ಲಿ ಹೊಯ್ಸಳ ಕಾಲದ ಎರಡು ದೇವಾಲಯವಿದ್ದು, ಇನ್ನೊಂದು ದೇವಾಲಯ ಅನಂತ ಪದ್ಮನಾಭ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 100 ಕಿ.ಮೀ ಮತ್ತು ಮಂಡ್ಯದಿಂದ ಕೇವಲ 8 ಕಿ.ಮೀ ದೂರದಲ್ಲಿದೆ.
ಕಾಶಿ ವಿಶ್ವೇಶ್ವರ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಪರಿಗಣಿಸಲಾಗಿದೆ. ಲಿಂಗದ ಮುಂದೆ ಒಂದು ದೊಡ್ಡ ನಂದಿ ಪ್ರತಿಮೆ ಇದೆ. ಈ ದೇವಾಲಯವು ಹೆಚ್ಚಿನ ವಿಷಯಗಳಲ್ಲಿ ಇತರ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯವು 4 ಚಿಕ್ಕ ದೇವಾ ಗುಡಿಗಳಿವೆ ಹೊಂದಿದ್ದು, ಅವು ಪ್ರಸ್ತುತ ಖಾಲಿಯಾಗಿವೆ. ದೇವಾಲಯದಲ್ಲಿ ಗಣಪತಿ ಮತ್ತು ಷಣ್ಮುಗನ ಶಿಲ್ಪಗಳಿವೆ.
ಭೇಟಿ ನೀಡಿ