ಪುರಾತನ ಹೊಯ್ಸಳ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಹೊಸಬೂದನೂರು

ಪುರಾತನ ಹೊಯ್ಸಳ ಶ್ರೀ ಕಾಶಿ ವಿಶ್ವನಾಥ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕು ಹೊಸ ಬೂದನೂರ ಗ್ರಾಮದಲ್ಲಿ ಇರುವ ಹೊಯ್ಸಳ ಕಾಲದ ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳ ರಾಜ ವೀರ ಬಲ್ಲಾಳ III ರ ಆಳ್ವಿಕೆಯಲ್ಲಿ 12-13 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಹೊಸ ಬೂದನೂರ ಗ್ರಾಮದಲ್ಲಿ ಹೊಯ್ಸಳ ಕಾಲದ ಎರಡು ದೇವಾಲಯವಿದ್ದು, ಇನ್ನೊಂದು ದೇವಾಲಯ ಅನಂತ ಪದ್ಮನಾಭ ದೇವಾಲಯವಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 100 ಕಿ.ಮೀ ಮತ್ತು ಮಂಡ್ಯದಿಂದ ಕೇವಲ 8 ಕಿ.ಮೀ ದೂರದಲ್ಲಿದೆ.

ಕಾಶಿ ವಿಶ್ವೇಶ್ವರ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಪರಿಗಣಿಸಲಾಗಿದೆ. ಲಿಂಗದ ಮುಂದೆ ಒಂದು ದೊಡ್ಡ ನಂದಿ ಪ್ರತಿಮೆ ಇದೆ. ಈ ದೇವಾಲಯವು ಹೆಚ್ಚಿನ ವಿಷಯಗಳಲ್ಲಿ ಇತರ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯವು 4 ಚಿಕ್ಕ ದೇವಾ ಗುಡಿಗಳಿವೆ ಹೊಂದಿದ್ದು, ಅವು ಪ್ರಸ್ತುತ ಖಾಲಿಯಾಗಿವೆ. ದೇವಾಲಯದಲ್ಲಿ ಗಣಪತಿ ಮತ್ತು ಷಣ್ಮುಗನ ಶಿಲ್ಪಗಳಿವೆ.

ಭೇಟಿ ನೀಡಿ
ಮಂಡ್ಯ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section
Share to Other