ಶ್ರೀ ಮುರುಘಾ ಮಠ

ಮುರುಘಾ ಮಠ ಕರ್ನಾಟಕದ ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಧಾರ್ಮಿಕ ಇತಿಹಾಸದಲ್ಲಿ ಒಂದು ಅಸಾಧಾರಣ ಸಂಸ್ಥೆಯಾಗಿದೆ. ನಗರದ ಪಶ್ಚಿಮ ಭಾಗದಲ್ಲಿರುವ ಈ ಪ್ರಸಿದ್ಧ ಮಠವು ಪ್ರಕೃತಿಯ ಸೌಂದರ್ಯದಿಂದ ಸುತ್ತುವರಿದ ಪ್ರಶಾಂತವಾದ ಸ್ಥಳವಾಗಿದೆ. ಈ ಹೆಸರಾಂತ ಸಂಪ್ರದಾಯದ ಮಠವು ಕಳೆದ ಮೂರು ಶತಮಾನಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಈ ಮಠದ ಆವರಣದಲ್ಲಿ ಮುರುಘಾ ಶ್ರೀ ಮಠ, ಗದ್ದುಗೆ, ಅನುಭವ ಮಂಟಪ ಮತ್ತು ಮುರುಘಾ ಶ್ರೀ ವಸ್ತುಸಂಗ್ರಹಾಲಯವು ಇದೆ.

ಈ ಮಠವು 205 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 03 ಕಿ.ಮೀ ದೂರದಲ್ಲಿದೆ. ಹಾಗೂ ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 02 ಕಿ.ಮೀ ದೂರದಲ್ಲಿದೆ.

ಮುರುಘಾ ಮಠದ ಇತಿಹಾಸ

ಚಿತ್ರದುರ್ಗವನ್ನಾಳಿದ ಪ್ರಸಿದ್ದ ಪಾಳೆಯಗಾರರಲ್ಲಿ ಒಬ್ಬರು ಬಿಚ್ಚುಗತ್ತಿ ಭರಮಣ್ಣನಾಯಕರು. ಇವರ ಕ್ರಿ.ಶ.1689 ರಿಂದ 1721 ರವರೆಗೆ ಆಳ್ವಿಕೆ ನೆಡೆಸಿದರು. ಈ ಅವಧಿಯಲ್ಲಿ ಚಿತ್ರದುರ್ಗದ ಬೃಹನ್ಮಠದ ಪರಂಪರೆಯ ಎಂಟನೇ ಪಟ್ಟಾಧಿಕಾರಿಗಳಾಗಿ ಶ್ರೀ ಮುರಿಘೇಂದ್ರ ರಾಜೇಂದ್ರರು (ಕ್ರಿ.ಶ. 1640–1710) ಕಾರ್ಯನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಒಮ್ಮೆ ಶ್ರೀ ಮುರಿಘೇಂದ್ರ ರಾಜೇಂದ್ರರು ಅವರು ಬಿಚ್ಚುಗತ್ತಿ ಭರಮಣ್ಣನಾಯಕರನ್ನು ಭೇಟಿ ಮಾಡಿದ್ದರು ಹಾಗೂ ಅವರು ಇವರಿಗೆ “ಮುಂದೇ ನೀನು ಚಿತ್ರದುರ್ಗದ ರಾಜನಾಗುತ್ತಿಯೆಂದು” ಎಂದು ಆರ್ಶಿರ್ವಾದ ಮಾಡಿದರಂತೆ.

ಶ್ರೀ ಮುರಿಘೇಂದ್ರ ರಾಜೇಂದ್ರರು ಸ್ವಲ್ಪ ದಿನಗಳ ನಂತರದಲ್ಲಿ ಪ್ರವಾಸದಿಂದ ಮರಳಿ ಬರುವ ವೇಳೆಗೆ, ಭರಮಣ್ಣನಾಯಕನ ಚಿತ್ರದುರ್ಗದ ರಾಜರಾಗಿದ್ದರು. ಪ್ರವಾಸದಿಂದ ಹಿಂದಿರುಗಿದ ತಮ್ಮ ಗುರುಗಳನ್ನು ಕಂಡು ಹರ್ಷಿತಗೊಂಡ ಅವನು ತುಂಬುಮನಸ್ಸಿನಿಂದ ಗುರುಗಳನ್ನು ಸ್ವಾಗತಿಸಿದರು. ತನ್ನ ಭಕ್ತಿಯ ಕಾಣಿಕೆಯೆಂಬಂತೆ ಬೆಟ್ಟದ ಮೇಲಿರುವ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ದೊಡ್ಡಮಠವೊಂದನ್ನು ಕಟ್ಟಿಸಿದರು, ಈ ಸ್ಥಳವು ಚಿತ್ರದುರ್ಗ ಕೋಟೆಯ ಬೆಟ್ಟದ ಮೇಲೆ ಇದೆ. ಅನಂತರ ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನು ನಿರ್ಮಿಸಿದರು. ಆ ಮಠಕ್ಕೆ ಅವರು ಅರ್ಪಿಸಿದ ವಸ್ತುಗಳಲ್ಲಿ ಗಂಟೆಯೂ ಒಂದು. ಅದರಲ್ಲಿ ಅವರ ಹೆಸರಿದೆ. ಹೀಗಾಗಿ ಶ್ರೀ ಮುರಿಗೇಂದ್ರ ರಾಜೇಂದ್ರರೇ ಈ ಪೀಠದ ಮೂಲ ಸ್ಥಾಪಕರಾಗಿದ್ದಾರೆ. ಈಗ ಬೆಟ್ಟದ ಮೇಲಿರುವ ಮಠ ಬಳಕೆಯಲ್ಲಿದೇ ಕೇವಲ ಒಂದು ಸ್ಮಾರಕವಾಗಿ ಉಳಿದಿದೆ.

ಭೇಟಿ ನೀಡಿ
ಚಿತ್ರದುರ್ಗ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿತ್ರದುರ್ಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section