ಕೋಟೆ ನಾಡು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿರುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯವು ಒಂದು ಐತಿಹಾಸಿಕ ಮತ್ತು ಪುಣ್ಯಕ್ಷೇತ್ರವಾಗಿದೆ. ಅವಧೂತ ಪರಂಪರೆಗೆ ಸೇರಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರು 16ನೇ ಶತಮಾನದ ಅಂತ್ಯದಲ್ಲಿ ನೆಲೆನಿಂತು ಪವಾಡ ಮಾಡಿದ ಸ್ಥಳ ಇದಾಗಿದೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರು ಶಿವನ ಪಂಚ ಗಣಾಧೀಶರಲ್ಲಿ ಇವರು ಒಬ್ಬರು ಕೂಡ ಎಂದು ಇಲ್ಲಿಯ ಜನಗಳ ನಂಬಿಕೆ.
ಈ ದೇವಾಲಯವು ಬೆಂಗಳೂರಿನಿಂದ 227 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 35 ಕಿ.ಮೀ ದೂರದಲ್ಲಿದೆ. ಹಾಗೂ ಚಳ್ಳಕೆರೆ ನಗರದಿಂದ 22 ಕಿ.ಮೀ ಮತ್ತು ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 37 ಕಿ.ಮೀ ದೂರದಲ್ಲಿದೆ.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರ ಮೂಲ ಹೆಸರು ರುದ್ರಸ್ವಾಮಿ. ಇವರ ಮೂಲ ಹುಟ್ಟೂರು ಆಂಧ್ರಪ್ರದೇಶ ಏನು ಹೇಳಲಾಗುತ್ತದೆ. ಹೀಗಾಗಿ ಆ ರಾಜ್ಯದ ಜನರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರೆಂದರೆ ಹೆಚ್ಚು ಭಕ್ತಿ.
ಒಮ್ಮೆ ಇವರು ದಕ್ಷಿಣ ಭಾರತದಲ್ಲಿ ಸಂಚರಿಸುತ್ತಿದ್ದಾಗ ಲೌಕಿಕ ಜೀವನದಲ್ಲಿ ಮುಳುಗಿ ತನ್ನ ಜೀವನದ ಮೂಲ ಉದ್ದೇಶವನ್ನು ಮರೆತಿದ್ದ ಇನ್ನೊಬ್ಬ ಗಣಾಧೀಶರು ಆದಂತ ಶ್ರೀ ಕೆಂಪಯ್ಯ ಸ್ವಾಮಿ ಅವರನ್ನು ಭೇಟಿಯಾಗುತ್ತಾರೆ. ಶ್ರೀ ಕೆಂಪಯ್ಯ ಸ್ವಾಮಿ ಅವರನ್ನು ಸರಿಯಾದ ದಾರಿಗೆ ತರಲು ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಅಷ್ಟೊಂದು ಶುಚಿಯಾಗಿರಾದ ಸಗಣಿ ತಿಪ್ಪೆ ಬಿದ್ದಿದ್ದ ಸ್ಥಳದಲ್ಲಿ ಧ್ಯಾನರಾಗುತ್ತಾರೆ. ಇದನ್ನು ಕಂಡ ಕೆಂಪಯ್ಯ ಸ್ವಾಮಿ ಅವರು ತಂಪಾದ ಮರದ ಕೆಳಗೆ ಅಥವಾ ಗುಹೆಯಲ್ಲಿ ಧ್ಯಾನ ಮಾಡುವುದನ್ನು ಬಿಟ್ಟು, ಇಲ್ಲಿ ಏಕೆ ಧ್ಯಾನ ಮಾಡುತ್ತಿದ್ದೀರಾ? ಎಂದು ಕೇಳುತ್ತಾರೆ.
ಆಗ ತಿಪ್ಪೇರುದ್ರಯವರು ಕೊಳಕು ದೇಹಕ್ಕೆ ಮಾತ್ರ ಅಂಟಿದೆ ಆದರೆ ಆತ್ಮದಲ್ಲಿ ಇರುವ ಶಿವನಿಗೆ ಅಲ್ಲ ಎಂದು ಹೇಳುತ್ತಾರೆ. ಇದರಿಂದ ಮನ ಪರಿವರ್ತನೆಗೊಂಡ ಕೆಂಪಯ್ಯ ನವರು ತಮ್ಮ ಜೀವನದ ನಿಜ ಉದ್ದೇಶವನ್ನು ತಿಳಿದು ಮುಂದೆ ಹರಪನಹಳ್ಳಿಯ ಗುರು ಶ್ರೀ ಸ್ವಾಮಿ ಆದರಿಂದು ಕೆಂಪಯ್ಯ ಸ್ವಾಮಿ ಆದರೂ ಎಂದು ಜನ ಕಂಡ ಸತ್ಯಕಥೆ. ರುದ್ರಸ್ವಾಮಿ ಅವರು ತಿಪ್ಪೆಗುಂಡಿಯ ಮೇಲೆ ಧ್ಯಾನರಾಗಿದ್ದ ರಿಂದ ಅವರಿಗೆ ತಿಪ್ಪೆ ರುದ್ರ ಸ್ವಾಮಿ ಎಂದು ಹೆಸರು ಬಂದಿದೆ. ತಿಪ್ಪೇರುದ್ರ ಸ್ವಾಮಿಯವರ ಜೀವನದ ಉದ್ದೇಶ ಧರ್ಮದ ಸಂದೇಶವನ್ನು ಹರಡುವುದು ಮತ್ತು ಸಹ ಮಾನವರಿಗೆ ಮಾರ್ಗದರ್ಶನ ಮತ್ತು ಸಾಂತ್ವನ ನೀಡುವುದಾಗಿತ್ತು.
ನಾಯಕನಹಟ್ಟಿ ಇದರ ಪ್ರಾಚೀನ ಹೆಸರು ನಿಷದಪುರ. ಆದರೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳು ಇಲ್ಲಿ ನೆಲೆಸಿದ ನಂತರ, ಈ ಸ್ಥಳವು ಹಂತ ಹಂತವಾಗಿ ‘ನಾಯಕನಹಟ್ಟಿ’ ಎಂದು ಪ್ರಸಿದ್ಧಿಯಾಯಿತು.
ಗುರುಗಳ ಆರಂಭಿಕ ಶಿಷ್ಯರಲ್ಲಿ ಒಬ್ಬನಾದ ಫಣಿಯಪ್ಪ ಎಂಬ ವ್ಯಾಪಾರಿ, ತಿಪ್ಪೇರುದ್ರ ಸ್ವಾಮಿಗಳನ್ನು ತನ್ನ ಊರಾದ ನಿಷದಪುರಕ್ಕೆ ಬರುವಂತೆ ವಿನಂತಿಸಿದನು. ಸ್ವಾಮಿಗಳು ಬಂದಾಗ, ಅವರು ಸ್ಥಳೀಯ ದೇವತೆಯ ದೇವಾಲಯದಲ್ಲಿ ತಂಗುವ ಆಸೆ ವ್ಯಕ್ತಪಡಿಸಿದರು.
ಪುರಾಣದ ಪ್ರಕಾರ, ಸ್ಥಳೀಯ ದೇವತೆ ಅವರಿಗೆ ದೇವಾಲಯದ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಮತ್ತು ಬಾಗಿಲು ತೆರೆಯದೆ ಉಳಿಯಿತು. ಈ ಸಂದರ್ಭವನ್ನು ಅರಿತುಕೊಂಡ ಸ್ವಾಮಿಗಳು, ದೇವಾಲಯದಲ್ಲಿ ತಂಗುವುದು ಸಾಧ್ಯವಿಲ್ಲವೆಂದು ತಿಳಿದುಕೊಂಡರೂ, ತಮ್ಮ ಬೆಟ್ಟ (ನಡೆಯುವ ಕೋಲು) ಮತ್ತು ಜೋಲಿಗೆ (ಭುಜದ ಚೀಲ)ಗಳನ್ನು ಅಲ್ಲಿ ಇಡಲು ಕನಿಷ್ಠ ಅವಕಾಶ ನೀಡಬೇಕೆಂದು ದೇವರಿಗೆ ಪ್ರಾರ್ಥಿಸಿದರು. ಏಕೆಂದರೆ ಅವುಗಳೇ ಅವರ ಏಕೈಕ ಲೌಕಿಕ ಆಸ್ತಿಯಾಗಿದ್ದವು.
ಅದಾದ ನಂತರ ದೇವಾಲಯದ ಬಾಗಿಲುಗಳು ತೆರೆದವು. ಸ್ವಾಮಿಗಳು ತಮ್ಮ ಬೆಟ್ಟ ಮತ್ತು ಜೋಳಿಗೆಯನ್ನು ಒಳಗೆ ಬಿಟ್ಟು ಹೊರಟರು. ಆದರೆ ರಾತ್ರಿ ವೇಳೆಗೆ ಆ ಎರಡು ವಸ್ತುಗಳು ವಿಸ್ತರಿಸಿ ದೊಡ್ಡದಾದವು ಮತ್ತು ಅವು ದೇವಾಲಯದಲ್ಲಿದ್ದ ಸ್ಥಳೀಯ ದೇವತೆಯ ಪ್ರತಿಮೆಯನ್ನು ಹೊರಕ್ಕೆ ತಳ್ಳಿದವು. ಹೀಗಾಗಿ ಆ ದೇವತೆ ಅಲ್ಲಿಂದ ತೆರಳಿದಳು.
ಅದಾದ ನಂತರ ದೇವಾಲಯವು ಗುರು ತಿಪ್ಪೇರುದ್ರ ಸ್ವಾಮಿಗಳ ನಿವಾಸವಾಯಿತು. ಅವರು ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವ ಆರಾಧನೆಯನ್ನು ಪ್ರಾರಂಭಿಸಿದರು.
ಈ ದಂತಕಥೆಯನ್ನು ಸ್ಥಳೀಯರು ಪುರಾಣವೆಂದು ನೋಡಿದರೂ, ಇತಿಹಾಸಾತ್ಮಕವಾಗಿ ನೋಡಿದರೆ, ತಿಪ್ಪೇರುದ್ರ ಸ್ವಾಮಿಗಳು ಶಿವಭಕ್ತಿಯನ್ನು ಹರಡುತ್ತಿದ್ದ ಪರಿಣಾಮ, ಹಿಂದಿನ ಸ್ಥಳೀಯ ದೇವತೆ ಮಾರಿಯಮ್ಮನ ಆರಾಧನೆ ನಿಧಾನವಾಗಿ ಕುಂಠಿತಗೊಂಡಿತು ಮತ್ತು ಆ ದೇವಾಲಯವು ಇಂದಿನ ನಾಯಕನಹಟ್ಟಿ ಶಿವ ದೇವಾಲಯವಾಗಿ ಪರಿವರ್ತಿತವಾಯಿತು.
ತಿಪ್ಪೇಸ್ವಾಮಿಯವರು ಸತ್ತ ಹೆಮ್ಮೆಯನ್ನು ಬದುಕಿಸಿ ಹಾಲು ಕರೆದಿದ್ದು ಅವರು ಮಾಡಿದ್ದು ಅತಿ ಜನಪ್ರಿಯ ಮಹಿಮೆಗಳಲ್ಲಿ ಇದು ಒಂದು. ಸಂತಾನವಿಲ್ಲದೆ ದುಃಖದಲ್ಲಿದ್ದ ನಿಡಗಲ್ಲು ದೊರೆಗಳಿಗೆ ಸಂತಾನ ಭಾಗ್ಯವನ್ನು ಕರುಣಿಸಿ ದೊರೆಗಳ ವಂಶ ಬೆಳೆಸುತ್ತಾರೆ. ಭಕ್ತ ಪಣಿಯಪ್ಪನ್ನು ದಾರಿದ್ಯದಿಂದ ಬಳಲುತ್ತಿದ್ದಾಗ, ಅವನ ಮನೆಯಲ್ಲಿ ಅಕ್ಷಯ ಪಾತ್ರಯನ್ನು ನಿರ್ಮಿಸಿ ಬಡತನವನ್ನು ನಿರ್ಮೂಲನೆಗೊಳಿಸಿದರು.
ಭೇಟಿ ನೀಡಿ