ಕುಂದಾಣ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿದೆ. ದೇವನಹಳ್ಳಿ ಸಮೀಪದಲ್ಲಿರುವ ಈ ಏಕಶಿಲಾ ಬೆಟ್ಟವು ನೋಡಲು ಅಳಿಲಿನ ಆಕಾರವನ್ನು ಹೋಲುತ್ತದೆ. ಈ ಬೆಟ್ಟವು ಸುಮಾರು 61 ಮೀಟರ್ ಎತ್ತರವಾಗಿದ್ದು, ಸುಮಾರು 100 ಮೀಟರ್ ಉದ್ದ ಮತ್ತು 50 ಮೀಟರ್ ಅಗಲವನ್ನು ಹೊಂದಿದೆ.
ಕುಂದಾಣ ಬೆಟ್ಟದ ದೂರಗಳು
- ಬೆಂಗಳೂರು – 38 ಕಿ.ಮೀ
- ದೇವನಹಳ್ಳಿ – 11 ಕಿ.ಮೀ
ಕುಂದಾಣ ಬೆಟ್ಟದ ಇತಿಹಾಸ
ಕ್ರಿ.ಶ. 1537ರಲ್ಲಿ ಯಲಹಂಕ ನಾಡಿನ ದೊರೆ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಆದೇಶದ ಮೇರೆಗೆ ಬೆಂಗಳೂರಿನ ನಿರ್ಮಾಣ ಕಾರ್ಯವನ್ನು ಆರಂಭಿಸಿದರು. ಆ ಕಾಲದಲ್ಲಿ ಕುಂದಾಣ ಬೆಟ್ಟವು ಆಡಳಿತ ಮತ್ತು ಸೇನಾ ನೆಲೆಯಾಗಿತ್ತು.
ಪ್ರಸ್ತುತ ಈ ಸ್ಥಳದಲ್ಲಿ ಶ್ರೀ ಚನ್ನರಾಯಸ್ವಾಮಿ ದೇವಾಲಯ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯಗಳಿವೆ. ವರ್ಷದಲ್ಲಿ ನಡೆಯುವ ವಿವಿಧ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಈ ಸ್ಥಳವು ಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಲು ಅತ್ಯಂತ ಸೂಕ್ತವಾಗಿದೆ. ಬೆಟ್ಟದ ಮೇಲಕ್ಕೆ ತಲುಪಲು ರಸ್ತೆ ಮಾರ್ಗವೂ ಲಭ್ಯವಿದೆ. ಬೆಟ್ಟದ ಮೇಲಿರುವ ದೇವಾಲಯದ ಮುಂಭಾಗದಲ್ಲಿ ಸುಮಾರು 15 ಅಡಿ ಎತ್ತರದ ಪುರಾತನ ಕಂಬವೊಂದಿದೆ. ಅಲ್ಲದೆ, ಬೆಟ್ಟದ ಮೇಲ್ಭಾಗದಲ್ಲಿ ಒಂದು ಸಣ್ಣ ನೀರಿನ ಕೊಳವೂ ಇದೆ. ಕುಂದಾಣ ಬೆಟ್ಟವು ಭಾಗಶಃ ಬೃಹತ್ ಬಂಡೆಗಳಿಂದ ಕೂಡಿದ್ದು, ತನ್ನ ವಿಶಿಷ್ಟ ಭೂಸ್ವರೂಪದಿಂದ ಗಮನ ಸೆಳೆಯುತ್ತದೆ.
ಭೇಟಿ ನೀಡಿ









