ಘಾಟಿ ಸುಬ್ರಮಣ್ಯ ಹಿಂದೂ ದೇವಾಲಯವಾಗಿದ್ದು, ಇದು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಬಳಿಯ ಘಾಟಿ ಗ್ರಾಮದಲ್ಲಿದೆ. ಈ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಮತ್ತು ಇದು ಜನಪ್ರಿಯ ಸುಬ್ರಮಣ್ಯನ ಯಾತ್ರಾ ಕೇಂದ್ರವಾಗಿದೆ. ಈ ದೇವಾಲಯದ ವಿಶಿಷ್ಟತೆಯೆಂದರೆ ಪ್ರಧಾನ ದೇವತೆ ಕಾರ್ತಿಕೇಯ, ಭಗವಾನ್ ನರಸಿಂಹನ ಜೊತೆಯಲ್ಲಿ ಕಂಡುಬರುತ್ತದೆ. ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಸ್ಥಳೀಯ ಸಾರಿಗೆ ಲಭ್ಯವಿದೆ.
ಇದು ದೇವಾಲಯವು ಬೆಂಗಳೂರು ನಗರದಿಂದ 58 ಕಿ.ಮೀ ಮತ್ತು ದೊಡ್ಡಬಳ್ಳಾಪುರ ತಾಲೂಕಿನಿಂದ 15 ಕಿ.ಮೀ ದೂರದಲ್ಲಿದೆ.
ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮಯವು ಸಾಮಾನ್ಯವಾಗಿ ಬೆಳಿಗ್ಗೆ 6:00 ರಿಂದ ರಾತ್ರಿ 8.30 ರವರೆಗೆ ಇರುತ್ತದೆ.
ಏಳು ತಲೆಯ ನಾಗರಹಾವು ಹೊಂದಿರುವ ಕಾರ್ತಿಕೇಯನ ವಿಗ್ರಹವನ್ನು ಒಂದೇ ಕಲ್ಲಿನಿಂದ ಮಾಡಲಾಗಿದೆ. ಕಲ್ಲಿನ ಹಿಂಭಾಗದಲ್ಲಿ ನರಸಿಂಹನ ಕೆತ್ತನೆ ಇದೆ. ಇದು ಪೂರ್ವಾಭಿಮುಖವಾಗಿದ್ದರೆ ನರಸಿಂಹ ದೇವರ ವಿಗ್ರಹವು ಪಶ್ಚಿಮಾಭಿಮುಖವಾಗಿದೆ. ಎರಡೂ ದೇವತೆಗಳು ಏಕಕಾಲದಲ್ಲಿ ಭಕ್ತರಿಗೆ ಗೋಚರಿಸುವಂತೆ ಮಾಡಲು, ಗರ್ಭಗುಡಿಯ ಹಿಂಭಾಗದಲ್ಲಿ ಬೃಹತ್ ಕನ್ನಡಿಯನ್ನು ಇರಿಸಲಾಗಿದೆ.
ಗರ್ಭರಕ್ಷಾಂಬಿಗೈ ದೇವತೆ ಶಕ್ತಿ ದೇವಾಲಯವು ಪ್ರಮುಖ ಆಕರ್ಷಣೆಯಾಗಿದೆ. ಮಕ್ಕಳಿಲ್ಲದ ದಂಪತಿಗಳು ವ್ರತಗಳನ್ನು (ಹರಕೆ) ಮಾಡುವ ಮೂಲಕ ಭಗವಂತನಿಂದ ಮಕ್ಕಳೊಂದಿಗೆ ಆಶೀರ್ವದಿಸಲ್ಪಡುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಸಂಬಂಧಿತ ಆಚರಣೆಯೆಂದರೆ ಹಾವುಗಳ ವಿಗ್ರಹಗಳನ್ನು ಸ್ಥಾಪಿಸುವುದು (ನಾಗರ ಹಾವು). ಇಂತಹ ಸಾವಿರಾರು ವಿಗ್ರಹಗಳನ್ನು ದೇವಸ್ಥಾನದ ಆವರಣದಲ್ಲಿ ನೋಡಬಹುದು.
ಆದಿ (ಪ್ರಥಮ) ಸುಬ್ರಹ್ಮಣ್ಯವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ಮಧ್ಯ ಸುಬ್ರಹ್ಮಣ್ಯ ದೇವರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮತ್ತು ಅಂತ್ಯ (ಕೊನೆಯ) ಸುಬ್ರಹ್ಮಣ್ಯವು ನಾಗುಲಮಡಕ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿದೆ.
ಘಾಟಿ ಸುಬ್ರಹ್ಮಣ್ಯಕ್ಕೆ 600 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಪುರಾಣಗಳ ಪ್ರಕಾರ, ಎರಡೂ ವಿಗ್ರಹಗಳು ಭೂಮಿಯಿಂದ ಹೊರಹೊಮ್ಮಿವೆ ಎಂದು ನಂಬಲಾಗಿದೆ. ಇದು ಹಿಂದೂ ದೇವತೆ ಕೇತುವಿನ ಆರಾಧನೆಗೆ ದಕ್ಷಿಣ ಭಾರತದಲ್ಲಿ ಪ್ರಮುಖ ಕೇಂದ್ರವಾಗಿದೆ. ಪುಷ್ಯ ಶುದ್ಧ ಷಷ್ಠಿಯಂದು ಬ್ರಹ್ಮರಥೋತ್ಸವದ ವಿಶೇಷ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ನರಸಿಂಹ ಜಯಂತಿ ಇಲ್ಲಿ ಆಚರಿಸಲಾಗುವ ಮತ್ತೊಂದು ಪ್ರಮುಖ ಹಬ್ಬವಾಗಿದೆ. ಈ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮಗಳೂ ನಡೆಯುತ್ತವೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ ಊಟದ ವ್ಯವಸ್ಥೆಯೂ ಇದೆ.
ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜನರು ಮಂಗಳವಾರ ಭೇಟಿ ನೀಡಲು ಬಯಸುತ್ತಾರೆ, ಏಕೆಂದರೆ ಮಂಗಳವಾರ ಮಂಗಳಕರವೆಂದು ಪರಿಗಣಿಸಲಾಗಿದೆ.
ಸ್ಥಳ ಪುರಾಣ ಅಥವಾ ದೇವಾಲಯಕ್ಕೆ ಸಂಬಂಧಿಸಿದ ದಂತಕಥೆಯ ಪ್ರಕಾರ, ಘಾಟಿಯು ವಜ್ರಾಂಗ ಮತ್ತು ವಜ್ರಾಂಗಿಯ ಪುತ್ರನಾದ ತಾರಕಾಸುರನನ್ನು ಕೊಲ್ಲಲು ಹೊರಡುವ ಮೊದಲು ಸುಬ್ರಹ್ಮಣ್ಯನು ಸರ್ಪ ವೇಷದಲ್ಲಿ ತಪಸ್ಸು ಮಾಡಿದ ಸ್ಥಳವಾಗಿದೆ. ಸುಬ್ರಹ್ಮಣ್ಯ ದೇವರ ರೂಪವು ಏಳು ಹೆಡೆಯ ಹಾವಿನ ರೂಪವಾಗಿದೆ ಮತ್ತು ಇದು ರಾಕ್ಷಸನಾದ ಘಟಿಕಾಸುರನನ್ನು ಸಂಹಾರ ಮಾಡಿದ ಪ್ರದೇಶ ಎಂದು ನಂಬಲಾಗಿದೆ. ಕುಮಾರಸ್ವಾಮಿ (ಸುಬ್ರಹ್ಮಣ್ಯಸ್ವಾಮಿ) ತಾರಕ, ಶೂರ ಮತ್ತು ಪದ್ಮಾಸುರ ಮುಂತಾದ ರಾಕ್ಷಸರನ್ನು ಸಂಹಾರ ಮಾಡಿದರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನವು ದಕ್ಷಿಣ ಭಾರತದಲ್ಲಿ ಹಾವಿನ ಪೂಜೆಗೆ ಪ್ರಮುಖ ಸ್ಥಳವಾಗಿದೆ.
ಭೇಟಿ ನೀಡಿ