ಮಹಮ್ಮದ್ ಗವಾನ್ ಮದರಸಾವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನಲ್ಲಿ 15 ನೇ ಶತಮಾನದ ಉತ್ತರಾರ್ಧದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಮಹ್ಮದ್ ಗವಾನ್ ಅವರಿಂದ ನಿರ್ಮಿಸಲಾದ ಮದರಸಾ ಆಗಿದೆ. ಇದು 1472 ರಲ್ಲಿ ಬೀದರ್ನಲ್ಲಿ ನಿರ್ಮಿಸಲಾದ ಧಾರ್ಮಿಕ ಮತ್ತು ಜಾತ್ಯತೀತ ಕಲಿಕೆಯ ( ಮದ್ರಸಾ ) ದೊಡ್ಡ ಕೇಂದ್ರವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 762 ಕಿ.ಮೀ (NH50 ಕರ್ನಾಟಕದ ಮೂಲಕ), 679 ಕಿ.ಮೀ (NH 44 ಹೈದರಾಬಾದ್ ಮೂಲಕ), ಬೀದರ್ ನಿಂದ 2 ಕಿ.ಮೀ ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ಇದೆ.
ಕೋಟೆಯ ಇತಿಹಾಸ
ಮಹಮ್ಮದ್ ಗವಾನ್ ಮದರಸಾ, 1458 ರಿಂದ 1481 ರವರೆಗೆ ಬಹಮನಿ ರಾಜ್ಯದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಪರ್ಶಿಯನ್ ಮೂಲದ ಮಹಮ್ಮದ್ ಗವಾನ್ ಅವರು 1472 ರಲ್ಲಿ ನಿರ್ಮಿಸಿದ ಐತಿಹಾಸಿಕ ಸ್ಮಾರಕವಾಗಿದೆ. ಮಧ್ಯ ಏಶಿಯಾದ ಮದ್ರಸಾ ವಿನ್ಯಾಸದ ಪ್ರಭಾವವನ್ನು ಹೊಂದಿರುವ ಈ ಮದರಸಾ ಭಾರತದಲ್ಲಿ ಅದ್ವಿತೀಯವಾಗಿದೆ. ಮೂರು ಮಹಡಿಗಳಲ್ಲಿ ನಿರ್ಮಿಸಲಾದ ಕಟ್ಟಡವು ಎತ್ತರಿಸಿದ ಪೀಠದ ಮೇಲೆ ಇದೆ. ಪ್ರವೇಶ ಮಾಡಲು ಎರಡು ಕಮಾನುಗಳನ್ನು ಹಾದು ಮುಖಮಂಟಪಕ್ಕೆ ಬರಬೇಕಾಗುತ್ತದೆ. ಒಳಭಾಗಕ್ಕೆ ಹೋಗಲು ಮುಚ್ಚಲ್ಪಟ್ಟ ಹಾದುಹೋಗುವ ಮಾರ್ಗಗಳ ಮೂಲಕ ಪ್ರವೇಶ ಮಾಡಬೇಕು.
ಮದರಸಾದ ಪ್ರವೇಶ ದ್ವಾರದಲ್ಲಿ ಎರಡು ಎತ್ತರದ ಸ್ತಂಭಗೋಪುರಗಳಿದ್ದು, ಇವತ್ತಿಗೂ ಈಶಾನ್ಯದ ಸ್ತಂಭಗೋಪುರ ಉಳಿದಿದೆ. ಈ ಮೂರು ಹಂತದ ಸ್ತಂಭಗೋಪುರಗಳ ಮೇಲೆ ಪರ್ಶಿಯನ್ ಶೈಲಿಯ ಮೊಗಸಾಲೆಗಳು ಹಾಗೂ ಚಾಚುತೊಲೆಗಳು ಕಂಡುಬರುತ್ತವೆ. ಸ್ತಂಭಗೋಪುರಗಳು ಭಾರತೀಯ ಶೈಲಿಯಂತೆ ನೆಲದ ಚಾಚುಪೀಠಗಳಿಂದ ಬೆಂಬಲಿಸಲ್ಪಡಿಲ್ಲ. ಹಸಿರು, ನೀಲಿ ಮತ್ತು ಬಿಳಿ ಹಾಸುಬಿಲ್ಲೆಗಳಿಂದ ಅಲಂಕೃತಗೊಂಡ ಸ್ತಂಭಗೋಪುರಗಳು ಮತ್ತು ಮುಂಭಾಗದ ಬಣ್ಣದ ಹಾಸುಬಿಲ್ಲೆಗಳು ಮದರಸಾದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ, ಏಕೆಂದರೆ ಈ ಅಲಂಕಾರಗಳ ಕುರುಹುಗಳು ಮಾತ್ರ ಇಂದಿಗೂ ಉಳಿದಿವೆ.
ಹಿಂದೆ ಈ ಮದರಸಾ ಧಾರ್ಮಿಕ ಮತ್ತು ವಿದ್ಯಾಪರಿಕ ಶಿಕ್ಷಣ ಕೇಂದ್ರವಾಗಿದ್ದು, ಮತಧರ್ಮಶಾಸ್ತ್ರ, ತತ್ತ್ವಶಾಸ್ತ್ರ, ಖಗೋಳ ವಿಜ್ಞಾನ, ಗಣಿತ, ಅರಬಿಕ್ ಮತ್ತು ಪರ್ಶಿಯನ್ ಭಾಷೆಗಳನ್ನು ಕಲಿಯಲು ಸುಮಾರು 1,000 ವಿದ್ಯಾರ್ಥಿಗಳು (ಬಾಹ್ಯ ದೇಶದಿಂದ ಬಂದವರು ಸೇರಿದಂತೆ) ಇಲ್ಲಿ ಬರುತ್ತಿದ್ದರು. ವಿದ್ಯಾರ್ಥಿಗಳಿಗೆ ಉಚಿತ ವಸತಿ, ಗ್ರಂಥಾಲಯ (3,000 ಪುಸ್ತಕಗಳು), ಮಸೀದಿ, ಉಪನ್ಯಾಸ ಸಭಾಂಗಣಗಳು ಮತ್ತು ಶಯನ ಕೋಣೆಗಳೆಲ್ಲ ಸೌಲಭ್ಯವಾಗಿ ಲಭ್ಯವಿದ್ದವು.
1696 ರಲ್ಲಿ ಔರಂಗಜೇಬನ ನೇತೃತ್ವದ ಮೊಘಲ್ ಸೇನೆಯು ಮದರಸಾದಲ್ಲಿ ತಂಗಿದ್ದಾಗ, ಆಕಸ್ಮಿಕ ವಿಸ್ಫೋಟದಿಂದ ಕಟ್ಟಡಕ್ಕೆ ತೀವ್ರ ಹಾನಿ ಉಂಟಾಯಿತು. ಇಂದಿಗೂ ಮದರಸಾ ಬಹುಪಾಲು ವಿದ್ಯಾರ್ಥಿಗಳಿಗೆ ಪಾಠಶಾಲೆ ಹಾಗೂ ಮಸೀದಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಭೇಟಿ ನೀಡಿ








