ಮಹಮ್ಮದ್ ಗವಾನ್ ಮದರಸಾ

ಮಹಮ್ಮದ್ ಗವಾನ್ ಮದರಸಾವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನಲ್ಲಿ 15 ನೇ ಶತಮಾನದ ಉತ್ತರಾರ್ಧದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಮಹ್ಮದ್ ಗವಾನ್ ಅವರಿಂದ ನಿರ್ಮಿಸಲಾದ ಮದರಸಾ ಆಗಿದೆ. ಇದು 1472 ರಲ್ಲಿ ಬೀದರ್‌ನಲ್ಲಿ ನಿರ್ಮಿಸಲಾದ ಧಾರ್ಮಿಕ ಮತ್ತು ಜಾತ್ಯತೀತ ಕಲಿಕೆಯ ( ಮದ್ರಸಾ ) ದೊಡ್ಡ ಕೇಂದ್ರವಾಗಿದೆ.

ಈ ಸ್ಥಳವು ಬೆಂಗಳೂರಿನಿಂದ 762 ಕಿ.ಮೀ (NH50 ಕರ್ನಾಟಕದ ಮೂಲಕ), 679 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 2 ಕಿ.ಮೀ ದೂರದಲ್ಲಿದೆ. ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿ ಇದೆ.

ಕೋಟೆಯ ಇತಿಹಾಸ

1458 ರಿಂದ 1481 ರವರೆಗೂ ಸೇವೆ ಸಲ್ಲಿಸಿದ, ಬಹಮನಿ ರಾಜ್ಯದ ಪರ್ಶಿಯನ್ ಮೂಲದ ಪ್ರಧಾನ ಮಂತ್ರಿಯಾದ ಮಹಮದ್ ಗವಾನನು ಈ ಮದ್ರಸಾವನ್ನು 1472 ರಲ್ಲಿ ನಿರ್ಮಾಣ ಮಾಡಿದನು. ಮಧ್ಯ ಏಶಿಯಾದಲ್ಲಿರುವ ಮದ್ರಸಾಗಳ ಯೋಜನೆ ಹಾಗೂ ವಿನ್ಯಾಸಗಳಂತೇ ಇರುವ ಈ ಅಭೂತಪೂರ್ವ ಸ್ಮಾರಕದಂತೆ ಭಾರತದಲ್ಲಿ ಮತ್ತೊಂದಿಲ್ಲ.

ಮೂರು ಮಹಡಿಗಳುಳ್ಳ ಈ ಕಟ್ಟಡವನ್ನು ಎತ್ತರಿಸಿದ ಪೀಠದ ಮೇಲೆ ಕಟ್ಟಲಾಗಿದೆ. ಅದನ್ನು ಪ್ರವೇಶಿಸಲು ಎರಡು ಕಮಾನುಗಳನ್ನು ಹಾದು, ಮುಖಮಂಟಪವನ್ನು ಪ್ರವೇಶಿಸಿ, ಮುಚ್ಚಲ್ಪಟ್ಟ ಹಾದುಹೋಗುವ ಮಾರ್ಗವನ್ನು ಹೊಕ್ಕು, ಒಳಭಾಗವನ್ನು ಪ್ರವೇಶಿಸಬೇಕು. ಪ್ರವೇಶದಲ್ಲಿ ಎರಡು ಎತ್ತರದ ಸ್ತಂಭಗೋಪುರಗಳದ್ದು (ಮಿನಾರೆಟ್) ಇದೀಗ ಈಶಾನ್ಯದಲ್ಲಿರುವುದು ಮಾತ್ರ ಉಳಿದುಕೊಂಡಿದೆ. ಈ ಮೂರು ಹಂತದ ಸ್ತಂಭಗೋಪುರಗಳಲ್ಲಿರುವ ಪರ್ಶಿಯನ್ ಶೈಲಿಯ ದ್ಯೋತಕವಾದ ಮೊಗಸಾಲೆಗಳು ಚಾಚುತೊಲೆಗಳ ಪ್ರಕ್ಷೇಪಗಳಾಗಿದ್ದು, ಬೇರೆಲ್ಲ ಬಹುಪಾಲು ಭಾರತೀಯ ಸ್ತಂಭಗೋಪುರಗಳಂತೆ ಕೆಳಗೆ ಚಾಚುಪೀಠಗಳ ಆಧಾರವನ್ನು ಪಡೆದಿಲ್ಲ.

ಅಡ್ಡಾದಿಡ್ಡಿಯಾದ ವಿನ್ಯಾಸದಲ್ಲಿ ಹಾಗೂ ಸೊಗಸಾದ ಲಿಪಿಯ ಬರವಣಿಗೆಗಳುಳ್ಳ ಹಸಿರು, ನೀಲಿ ಮತ್ತು ಬಿಳಿಯ ಹೊಳಪಿನ ಹಾಸುಬಿಲ್ಲೆಗಳಿಂದ ಸ್ತಂಭಗೋಪುರಗಳು ವಿಫುಲವಾಗಿ ವಿನ್ಯಾಸದಲ್ಲಿ ಹಾಗೂ ಸೊಗಸಾದ ಅಪಿಯ ಬರವಣಿಗೆಗಳುಳ್ಳ ಹಸಿರು, ನೀಲ ಅಲಂಕೃತಗೊಂಡಿದೆ. ಮದ್ರಸಾದ ಮುಂಭಾಗದ ಬಹುತೇಕ ಭಾಗವನ್ನೂ ಒಮ್ಮೆ ಝಗಝಗಿಸುವ ಬಣ್ಣಗಳ ಹಾಸುಬಿಲ್ಲೆಗಳಿಂದ ಅಲಂಕರಿಸಲಾಗಿತ್ತು. ಪ್ರಸ್ತುತ ಅಲಂಕಾರಗಳ ಕುರುಹುಗಳು ಮಾತ್ರ ಈಗ ಉಳಿದಿವೆ.

ಹಿಂದೆ ಈ ಮದ್ರಸಾವು ಪ್ರಮುಖ ಕಲಕಾ ಕೇಂದ್ರವಾಗಿತ್ತು ಆದರೆ ಪ್ರಸ್ತುತ ಇದು ಮಸೀದಿಯಾಗಿದೆ. ಮತಧರ್ಮಶಾಸ್ತ್ರ, ತತ್ವಶಾಸ್ತ್ರ, ಖಗೋಳ ವಿಜ್ಞಾನ ಗಣಿತ, ಅರಬಿಕ್ ಹಾಗೂ ಪರ್ಶಿಯನ್ ಭಾಷೆಗಳನ್ನು ಕಲಿಯಲು ಬರುವ ಸುಮಾರು 1,000 ವಿದ್ಯಾರ್ಥಿಗಳು, ಅದರಲ್ಲೂ ಬಹುಪಾಲು ವಿದೇಶಿ ವಿದ್ಯಾರ್ಥಿಗಳದ್ದು, ಅವರಿಗೆಲ್ಲ. ಉಚಿತ ವಸತಿ ಸೌಕರ್ಯಯನ್ನು ಒದಗಿಸಲಾಗಿತ್ತು. ಅಲ್ಲಿ 3,000 ಪುಸ್ತಕಗಳುಳ್ಳ ಗ್ರಂಥಾಲಯ, ಮಸೀದಿ, ಉಪನ್ಯಾಸ ಸಭಾಂಗಣಗಳು, ಉಪನ್ಯಾಸಕರ ವಾಸದ ಬಿಡದಿಗಳು ಹಾಗೂ ವಿದ್ಯಾರ್ಥಿಗಳ ಸಣ್ಣ ಶಯನ ಕೋಣೆಗಳು ಇದ್ದವು. 1696 ರಲ್ಲಿ ಔರಂಗಜೇಬನ ಮುಂದಾಳತ್ವದಲ್ಲಿ ಬಂದ ಮೊಘಲ್ ಸೇನೆಯು ಈ ಮದ್ರಸಾದಲ್ಲಿ ತಂಗಿದ್ದಾಗ, ಆಕಸ್ಮಿಕಗವಾಗಿ ವಿಸ್ಪೋಟಗೊಂಡ ಕೋವಿಮದು ಕಟ್ಟಡಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡಿತು.