ಮುಸ್ತಪುರ್ ಆಣೆಕಟ್ಟು ಅಥವಾ ಚುಲ್ಕಿ ನಾಲಾ ಆಣೆಕಟ್ಟು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಸ್ತಪುರ್ ಗ್ರಾಮದ ಹತ್ತಿರ ಇರುವ ಪ್ರಮುಖ ಅಣೆಕಟ್ಟಾಗಿದೆ. ನೀರಾವರಿ ಹಾಗೂ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ನಿರ್ಮಿಸಲಾದ ಈ ಆಣೆಕಟ್ಟಿನ ನಿರ್ಮಾಣ ಕಾರ್ಯ 1997ರಲ್ಲಿ ಪೂರ್ಣಗೊಂಡಿತು.
ಈ ಆಣೆಕಟ್ಟು ಬೆಂಗಳೂರಿನಿಂದ 754 ಕಿ.ಮೀ (NH50 ಮೂಲಕ), 736 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್ನಿಂದ 87 ಕಿ.ಮೀ ಮತ್ತು ಬಸವಕಲ್ಯಾಣ ತಾಲೂಕಿನಿಂದ ಕೇವಲ 7 ಕಿ.ಮೀ ದೂರದಲ್ಲಿದೆ.
ಚುಲ್ಕಿನಾಲಾ ನದಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಚೌಕಿವಾಡಿಯಲ್ಲಿ ಉಗಮವಾಗುತ್ತದೆ. ಈ ನದಿ ಜಿಲ್ಲೆಯಲ್ಲಿ ಸುಮಾರು 42 ಕಿ.ಮೀ ಹರಿದು, ನಂತರ ಕರಣಜ ನದಿಗೆ ಸೇರುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಚುಲ್ಕಿನಾಲಾ ನದಿಯ ಮೇಲೆಯೇ ಮುಸ್ತಪುರ್ ಬಳಿ ಒಂದು ಸಂಯೋಜಿತ ಅಣೆಕಟ್ಟು ನಿರ್ಮಿಸಲಾಯಿತು.
- ಆಣೆಕಟ್ಟಿನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 0.93 TMC
- ಒಟ್ಟು ಜಲಾನಯನ ಪ್ರದೇಶ: 243.55 ಚ.ಕಿ.ಮೀ
ಭೇಟಿ ನೀಡಿ

