ಅಲ್ಲಮಪ್ರಭು ಗದ್ದುಗೆ ಮಠ

ಅಲ್ಲಮಪ್ರಭು ಗದ್ದುಗೆಮಠವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೊರ್ಖಂಡಿ ಗ್ರಾಮದಲ್ಲಿ ಇರುವ ಮಠವಾಗಿದೆ. ಈ ಮಠವು 12ನೇ ಶತಮಾನದ ಪ್ರಸಿದ್ಧ ವಚನಕಾರರಾದ ಅಲ್ಲಮಪ್ರಭುಗಳಿಗೆ ಸಮರ್ಪಿತವಾಗಿದೆ.

ಅಲ್ಲಮಪ್ರಭು ಗದ್ದುಗೆ ಮಠದ ದೂರಗಳು

  • ಬೆಂಗಳೂರು – 645 ಕಿ.ಮೀ
  • ಬೀದರ್ – 77 ಕಿ.ಮೀ
  • ಬಸವಕಲ್ಯಾಣ – 3 ಕಿ.ಮೀ
  • ಹುಮ್ನಾಬಾದ್ ರೈಲ್ವೆ ನಿಲ್ದಾಣ – 30 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 78 ಕಿ.ಮೀ

ಹರಳಯ್ಯ ಗವಿಯಿಂದ ಮುಂದೆ ಹೋದಾಗ ಬಲಗಡೆಲ್ಲದೆ ಅಲ್ಲಮಪ್ರಭು ಗದ್ದುಗೆಮಠ ಇದೆ. ಈ ಮಠ ಕರಿಕಲ್ಲಿನಿಂದ ನಿರ್ಮಿತವಾಗಿದ್ದು ಸುಂದರವಾಗಿ ಕಾಣುತ್ತದೆ. ಅಲ್ಲಮಪ್ರಭುಗಳು ಬಸವಕಲ್ಯಾಣಕ್ಕೆ ಬಂದಾಗ ಇಲ್ಲಿ ಕುಳಿತು ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಮಠವು ವಿಶಾಲವಾಗಿದ್ದು, ಚಿಕ್ಕ ಬಾಗಿಲುಗಳಿರುವ ಕೋಣೆಗಳೂ ಇವೆ. ಹಿತ್ತಲಿನ ಪ್ರದೇಶದಲ್ಲಿ ಒಂದು ಸುಂದರ ಬಾವಿಯೂ ಇದೆ. ಪ್ರಸ್ತುತ ಈ ಮಠವನ್ನು ಬಸವೇಶ್ವರ ದೇವಾಲಯ ಸಮಿತಿಯ ಜನರು ನಿರ್ವಹಿಸುತ್ತಿದ್ದಾರೆ.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section