ಅಲ್ಲಮಪ್ರಭು ಗದ್ದುಗೆಮಠವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೊರ್ಖಂಡಿ ಗ್ರಾಮದಲ್ಲಿ ಇರುವ ಮಠವಾಗಿದೆ. ಈ ಮಠವು 12ನೇ ಶತಮಾನದ ಪ್ರಸಿದ್ಧ ವಚನಕಾರರಾದ ಅಲ್ಲಮಪ್ರಭುಗಳಿಗೆ ಸಮರ್ಪಿತವಾಗಿದೆ.
ಅಲ್ಲಮಪ್ರಭು ಗದ್ದುಗೆ ಮಠದ ದೂರಗಳು
- ಬೆಂಗಳೂರು – 645 ಕಿ.ಮೀ
- ಬೀದರ್ – 77 ಕಿ.ಮೀ
- ಬಸವಕಲ್ಯಾಣ – 3 ಕಿ.ಮೀ
- ಹುಮ್ನಾಬಾದ್ ರೈಲ್ವೆ ನಿಲ್ದಾಣ – 30 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 78 ಕಿ.ಮೀ
ಹರಳಯ್ಯ ಗವಿಯಿಂದ ಮುಂದೆ ಹೋದಾಗ ಬಲಗಡೆಲ್ಲದೆ ಅಲ್ಲಮಪ್ರಭು ಗದ್ದುಗೆಮಠ ಇದೆ. ಈ ಮಠ ಕರಿಕಲ್ಲಿನಿಂದ ನಿರ್ಮಿತವಾಗಿದ್ದು ಸುಂದರವಾಗಿ ಕಾಣುತ್ತದೆ. ಅಲ್ಲಮಪ್ರಭುಗಳು ಬಸವಕಲ್ಯಾಣಕ್ಕೆ ಬಂದಾಗ ಇಲ್ಲಿ ಕುಳಿತು ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಮಠವು ವಿಶಾಲವಾಗಿದ್ದು, ಚಿಕ್ಕ ಬಾಗಿಲುಗಳಿರುವ ಕೋಣೆಗಳೂ ಇವೆ. ಹಿತ್ತಲಿನ ಪ್ರದೇಶದಲ್ಲಿ ಒಂದು ಸುಂದರ ಬಾವಿಯೂ ಇದೆ. ಪ್ರಸ್ತುತ ಈ ಮಠವನ್ನು ಬಸವೇಶ್ವರ ದೇವಾಲಯ ಸಮಿತಿಯ ಜನರು ನಿರ್ವಹಿಸುತ್ತಿದ್ದಾರೆ.
ಭೇಟಿ ನೀಡಿ





