ಚಿದಂಬರ ಆಶ್ರಮ ಶ್ರೀ ಸಿದ್ದಾರೂಢ ಮಠ

ಚಿದಂಬರ ಆಶ್ರಮ ಶ್ರೀ ಸಿದ್ದಾರೂಢ ಮಠ (ಗುಂಪಾ)ವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಮನ್ನಳ್ಳಿ ರಸ್ತೆಯಲ್ಲಿರುವ ಮಠ ಮತ್ತು ದೇವಾಲಯವಾಗಿದೆ. ಈ ಮಠವನ್ನು 1986ರಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರು ನಿರ್ಮಿಸಿದರು. ಕಳೆದ ಮೂರು ದಶಕಗಳಿಂದ ಶ್ರೀ ಸಿದ್ದಾರೂಢ ಮಠ (ಗುಂಪಾ) ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಶ್ರೀ ಸಿದ್ದಾರೂಢ ಮಠದ ದೂರಗಳು

  • ಬೆಂಗಳೂರು – 671 ಕಿ.ಮೀ
  • ಬೀದರ್ – 5 ಕಿ.ಮೀ
  • ಬೀದರ್ ರೈಲ್ವೆ ನಿಲ್ದಾಣ – 4 ಕಿ.ಮೀ
  • ಬೀದರ್ ವಿಮಾನ ನಿಲ್ದಾಣ – 4 ಕಿ.ಮೀ

ಶ್ರೀ ಸಿದ್ದಾರೂಢರ ಪ್ರತಿಮೆಯ ಎರಡೂ ಬದಿಗಳಲ್ಲಿ 12 ಜ್ಯೋತಿರ್ಲಿಂಗಗಳಿವೆ. ಶ್ರೀ ಶಿವಕುಮಾರ ಸ್ವಾಮೀಜಿಯವರು ಶ್ರಾವಣ ಮಾಸದಲ್ಲಿ (ಜುಲೈ–ಆಗಸ್ಟ್), ನವರಾತ್ರಿಯ ಸಂದರ್ಭದಲ್ಲಿ ಹಾಗೂ ಪ್ರತಿ ಭಾನುವಾರ ಸಂಜೆ ಪ್ರವಚನ ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಅನೇಕ ಭಕ್ತರು ತಮ್ಮ ಆಧ್ಯಾತ್ಮಿಕ ಹಸಿವನ್ನು ನೀಗಿಸಿಕೊಂಡಿದ್ದಾರೆ. ಬೀದರಿನ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಭಕ್ತರು ಅಥವಾ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡದಿದ್ದರೆ ಅವರ ಯಾತ್ರೆ ಅಪೂರ್ಣವೆನಿಸುತ್ತದೆ.

ಪ್ರತಿ ವರ್ಷ ಸದ್ಗುರು ಸಿದ್ದಾರೂಢರು ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಜಯಂತಿಯನ್ನು ಆಚರಿಸಲು ಭಾರತದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಈ ಆಚರಣೆಯನ್ನು ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ವೈಭವದಿಂದ ನಡೆಸಲಾಗುತ್ತದೆ.

ಕಿರು ಪರಿಚಯ

ಸಿದ್ಧಾರೂಢರು ಮಹಾನ್ ಸಂತರಲ್ಲಿ ಒಬ್ಬರು. ಅವರು 1836ರಲ್ಲಿ ಬೀದರ್ ಜಿಲ್ಲೆಯ ಚಳಕಾಪುರದಲ್ಲಿ ಜನಿಸಿದರು. ಚಿಕ್ಕಂದಿನಲ್ಲಿಯೇ ಅವರಿಗೆ ಜೀವನದ ಐಹಿಕ ಸುಖಭೋಗಗಳ ಬಗ್ಗೆ ವಿರಕ್ತಿ ಉಂಟಾಗಿ ಸಂನ್ಯಾಸವನ್ನು ಸ್ವೀಕರಿಸಿದರು. ಮನೆ ಬಿಟ್ಟು ಲೋಕಸಂಚಾರಿಗಳಾದ ಅವರು ಊರಿಂದೂರಿಗೆ ಸಂಚರಿಸುತ್ತಾ ತಮ್ಮ 41ನೇ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನೆಲೆನಿಂತರು. ಆ ಸ್ಥಳವನ್ನೇ ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡು, ತಮ್ಮನ್ನು ನಂಬಿ ಬಂದವರಿಗೆ ಅಭಯ ನೀಡಿದರು.

ದೇವರ ಭಕ್ತಿಯಿಂದ ಸಕಲ ಕಷ್ಟಗಳೂ ದೂರಾಗುತ್ತವೆ ಎಂಬ ಸಂದೇಶವನ್ನು ಜನರಲ್ಲಿ ಮೂಡಿಸಿದರು. “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು ಜಾತಿ-ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಬೋಧಿಸಿದರು.

ಭೇಟಿ ನೀಡಿ
ಬೀದರ್ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section