ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ

ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೋಮರನಹಳ್ಳಿಯಲ್ಲಿದೆ. ಹೆಳವನಕಟ್ಟೆ ಶ್ರೀ ರಂಗನಾಥಸ್ವಾಮಿ ದೇವಾಲಯವು ಮಹಾನ್ ಹರಿಭಕ್ತೆ ಮತ್ತು ಕೀರ್ತನಗಾತಿ ಗಿರಿಯಮ್ಮನವರಿಗೆ ಕೀರ್ತನೆಗಳನ್ನು ರಚಿಸಲು ಪ್ರೇರೇಪಿಸಿದ ಸ್ಥಳವಾಗಿದೆ.

ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದ ದೂರಗಳು

  • ಬೆಂಗಳೂರು – 286 ಕಿ.ಮೀ
  • ದಾವಣಗೆರೆ – 30 ಕಿ.ಮೀ
  • ಹರಿಹರ – 22 ಕಿ.ಮೀ
  • ಹರಿಹರ ರೈಲ್ವೆ ನಿಲ್ದಾಣ – 22 ಕಿ.ಮೀ

ಖ್ಯಾತ ಸಾಹಿತಿ ತ.ರಾ.ಸು. ಹುಟ್ಟೂರಾದ ಮಲೆಬೆನ್ನೂರು ಮಾರ್ಗವಾಗಿ ೦೧ ಕಿ.ಮೀ. ಮುಂದುವರೆದರೆ ಕೋಮಾರನಹಳ್ಳಿ ಸಿಗುತ್ತದೆ. ಇದು ಹರಿಹರ ತಾಲ್ಲೂಕಿನ ಕೊನೆಯ ಗ್ರಾಮ. ಇಲ್ಲಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವಿದೆ. ಇಲ್ಲಿ ರಂಗ-ಲಿಂಗ (ಹರಿ-ಹರ) ಒಂದೇ ಗರ್ಭಗುಡಿಯಲ್ಲಿರುವುದು ವಿಶೇಷ. ಶ್ರೀ.ರಂಗನಾಥನ ಪರಮಭಕ್ತೆ ಹೆಳವನಕಟ್ಟೆ ಗಿರಿಯಮ್ಮನ ದೇವಾಲಯವು ಇದೆ. ಈಕೆಯು ಅನೇಕ ಕೀರ್ತನೆಗಳನ್ನು ರಚಿಸಿದ್ದಾಳೆ. ಪಕ್ಕದಲ್ಲಿ ಶ್ರೀ ಶಂಕರಲಿಂಗ ಭಗವಾನರ ಆಶ್ರಮ ಮತ್ತು ಸಮಾಧಿ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ವಿಶಾಲವಾದ ಕೆರೆ ಇದೆ.

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ ಕ್ರಿ.ಶ.1570ರ ಸುಮಾರಿಗೆ ಜೀವಿಸಿದ್ದಳು. ಇವಳ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ ; ತಂದೆ ಬಿಷ್ಟಪ್ಪ ಜೋಯಿಸ. ಇವರಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತೆಂದು ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ “ಗಿರಿಯಮ್ಮ” ಎಂದು ಹೆಸರನ್ನಿಟ್ಟರು ಎಂಬ ಮಾತಿದೆ.

ಭೇಟಿ ನೀಡಿ
ಹರಿಹರ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section