ಶಾಂತಗಿರಿ ಕೋಟೆಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನಲ್ಲಿ ಇರುವ ಒಂದು ಐತಿಹಾಸಿಕ ಕೋಟೆಯಾಗಿದೆ. ಈ ಕೋಟೆಯು ಒಂದು ರೀತಿಯ ಹಳ್ಳಿಯಲ್ಲಿರುವ, ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇದ್ದು, ಇಳಿಜಾರು ಮತ್ತು ಯಾವುದೇ ಸರಿಯಾದ ದಾರಿಯಿಲ್ಲದ ಬೆಟ್ಟದ ಮೇಲೆ ನಿರ್ಮಿತವಾಗಿದೆ. ಇದು ಮರಾಠ ದೊರೆ ಛತ್ರಪತಿ ಶಿವಾಜಿಯು ನಿರ್ಮಿಸಿದ ಕೋಟೆಯಾಗಿದೆ. ಈ ಕೋಟೆ ಚಾರಣ ಮತ್ತು ಪುರಾತನ ಕೋಟೆಗಳ ಅನ್ವೇಷಣೆಯಲ್ಲಿರುವವರಿಗೆ ಸಂತೋಷವನ್ನು ನೀಡುತ್ತದೆ.
ಶಾಂತಗಿರಿ ಕೋಟೆಯ ದೂರಗಳು
- ಬೆಂಗಳೂರು – 432 ಕಿ.ಮೀ
- ಗದಗ – 65 ಕಿ.ಮೀ
- ಗಜೇಂದ್ರಗಡ – 23 ಕಿ.ಮೀ
- ಮಾಲಾಪುರ ರೈಲ್ವೆ ನಿಲ್ದಾಣ – 34 ಕಿ.ಮೀ
- ಗದಗ ಬೈಪಾಸ್ ರೈಲ್ವೆ ನಿಲ್ದಾಣ – 66 ಕಿ.ಮೀ
ಶಾಂತಗಿರಿ ಕೋಟೆಯ ಪಾಳುಬಿದ್ದಿರುವ ವಿನ್ಯಾಸ ಮತ್ತು ಅಲಂಕಾರಿಕ ವಿಧಾನಗಳು ನೋಡಲು ಮನಮೋಹಕವಾಗಿವೆ. ಕೋಟೆಯ ಯೋಜನೆ ಬೆಟ್ಟದ ತುದಿಯ ಒಂದು ಮೂಲೆಯಲ್ಲಿದೆ. ಆಯಕಟ್ಟಿನ ಸ್ಥಳವು ಸುತ್ತಮುತ್ತಲಿನ ಬಯಲು ಪ್ರದೇಶ ಮತ್ತು ಬೆಟ್ಟದ ಗೋಡೆಯ ಎರಡು ಭಾಗದ ನೋಟವನ್ನು ನೀಡುತ್ತದೆ.
ಈ ಕೋಟೆಯ ಉಳಿದಿರುವ ಪ್ರಮುಖ ಭಾಗಗಳೆಂದರೆ ಒಂದು ಬಾವಿ ಮತ್ತು 3 ಬುರುಜುಗಳು. ಎರಡು ಬುರುಜುಗಳು ವೃತ್ತಾಕಾರವಾಗಿದ್ದು, ಮೂರನೆಯದು ಚೌಕಾಕಾರವಾಗಿದೆ. ಮುಖ್ಯ ಕೋಟೆಯ ಎರಡು ಗೋಡೆಗಳಲ್ಲಿ ಎಡ ಮತ್ತು ಬಲ ಕ್ರಮವಾಗಿ ಸುಮಾರು 85 ಮೀಟರ್ ಮತ್ತು 117 ಮೀಟರ್ ಉದ್ದವಿದೆ.
ಚೌಕಾಕಾರದ ಬುರುಜು ಕೋಟೆಯ ಗೋಡೆಗಿಂತ ಹೆಚ್ಚು ಎತ್ತರವಾಗಿದೆ. ತಳದಲ್ಲಿ ಕಿರಿದಾದ ಬಾಗಿಲು ಮತ್ತು ಮೇಲ್ಭಾಗದಲ್ಲಿ ಬಾಲ್ಕನಿಯ ಮುಂಚಾವಿಕೆ ಬಾಗಿಲು ಇದೆ. ಮಾರ್ಗವು ಎಷ್ಟು ಕಿರಿದಾಗಿದೆ ಎಂದರೆ, ತೆಳ್ಳಗಿನ ವ್ಯಕ್ತಿ ಮಾತ್ರ ಅದನ್ನು ಪ್ರವೇಶಿಸಬಹುದು. ರಚನೆಯು ಕನಿಷ್ಠ 8 ಅಡಿ ಎತ್ತರವಿದೆ ಮತ್ತು ಮೇಲಿನ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಕೇಂದ್ರ ಗೋಪುರ ಮತ್ತು ಮತ್ತೆರಡು ಬುರುಜುಗಳನ್ನು ಸಂಪರ್ಕಿಸಲು ಗೋಡೆಯ ಮೇಲೆ ಮಾರ್ಗವಿದೆ, ಆದರೆ ಅದು ಈಗ ಅಪೂರ್ಣವಾಗಿದೆ.
ಭೇಟಿ ನೀಡಿ





