ನೇಮಿನಾಥ ಜೈನ ಬಸದಿ ಲಕ್ಷ್ಮೇಶ್ವರವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪಂಪ ಸರ್ಕಲ್ ನ ಹತ್ತಿರ ಇರುವ ಕರ್ನಾಟಕದ ಅತ್ಯಂತ ಹಳೆಯ ಜೈನ ಬಸದಿ ದೇವಾಲಯಗಳಲ್ಲಿ ಒಂದಾಗಿದೆ. ಇದು ನೇಮಿನಾಥ ಸ್ವಾಮಿಗೆ ಸಮರ್ಪಿತವಾಗಿದೆ. ಕಲ್ಯಾಣಿ ಚಾಲುಕ್ಯ ರಾಜವಂಶದಿಂದ ನಿರ್ಮಿಸಲ್ಪಟ್ಟಿದೆ ಮತ್ತು ನಂತರ ರಾಷ್ಟ್ರಕೂಟ ರಾಜರಿಂದ ಪೋಷಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.
ಲಕ್ಷ್ಮೇಶ್ವರದಲ್ಲಿ ಇರುವ ನೇಮಿನಾಥ ಜೈನ ಬಸದಿಯು ಬೆಂಗಳೂರಿನಿಂದ 386 ಕಿಮೀ ಮತ್ತು ಗದಗದಿಂದ 47 ಕಿ.ಮೀ ದೂರದಲ್ಲಿದೆ. ಹಾಗೂ ಲಕ್ಷ್ಮೇಶ್ವರ ದಿಂದ ಕೇವಲ 01 ಕಿ.ಮೀ ಮತ್ತು ಗುಡಗೇರಿ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.
ದೇವಾಲಯವು ಚಾಲುಕ್ಯ ಶೈಲಿಯಲ್ಲಿದ್ದರೂ ಇದು ಅನೇಕ ಮಾರ್ಪಾಡುಗಳು ಮತ್ತು ನವೀಕರಣಗಳಿಗೆ ಒಳಗಾಗಿದೆ. 22 ನೇ ಜೈನ ತೀರ್ಥಂಕರರಾದ ನೇಮಿನಾಥ (ಶಂಖವು ನೇಮಿನಾಥನ ಸಂಕೇತ) ಈ ಜೈನ ಬಸದಿಯ ಪ್ರಧಾನ ದೇವರು. 1008 ಜೈನ ತೀರ್ಥಂಕರರನ್ನು ಕೆತ್ತಿದ ಏಕಶಿಲೆಯ ಸ್ತಂಭ ಇರುವುದರಿಂದ ಈ ಬಸದಿಯನ್ನು ಸಹಸ್ರಕೂಟ ಬಸದಿ ಎಂದೂ ಕರೆಯುತ್ತಾರೆ. ಗರ್ಭಗೃಹ, ದೊಡ್ಡ ಅರ್ಧಮಂಟಪ, ದೊಡ್ಡ ಮಹಾಮಂಟಪ ಮತ್ತು ರಂಗಮಂಟಪಗಳನ್ನು ಒಳಗೊಂಡಿರುವ ಬಸದಿ. ರಂಗಮಂಟಪವು ಮೂರು ಪ್ರವೇಶದ್ವಾರಗಳನ್ನು (ದಕ್ಷಿಣ, ಉತ್ತರ ಮತ್ತು ಪಶ್ಚಿಮ) ಹೊಂದಿದೆ. ಇದು ಸಣ್ಣ ಮಾದರಿಯಲ್ಲಿ ಚತುರ್ಮುಖ ರಚನೆಯನ್ನು ಹೊಂದಿದೆ, ಪ್ರತಿಯೊಂದೂ ಮೂರು ಆಕೃತಿಗಳನ್ನು ಹೊಂದಿದೆ. ಇದು ರೇಖಾನಗರ ಶಿಖರವನ್ನು ಹೊಂದಿದೆ. ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಸೂಕ್ಷ್ಮ ರೂಪದಲ್ಲಿ ಸಹಸ್ರಕೂಟ ಜಿನಬಿಂಬ.
ದೇವಾಲಯದ ಮುಂದೆ ಮಾನಸ್ತಂಭವನ್ನು ನಿರ್ಮಿಸಲಾಗಿದೆ. ನರ್ತಕರು ಮತ್ತು ಸಂಗೀತಗಾರರ ಅನೇಕ ಅದ್ಭುತ ಕೆತ್ತನೆಗಳಿವೆ. ಹತ್ತಿರದ ಬಾವಿಯ ಗೋಡೆಯ ಮೇಲೆ ಅನೇಕ ವಿರೂಪಗೊಂಡ ಜೈನ ವಿಗ್ರಹಗಳನ್ನು ಕಾಣಬಹುದು. ಆದಿಕವಿ ಪಂಪಾ ಈ ಬಸದಿಯಲ್ಲಿ ಕುಳಿತು ಆದಿ ಪುರಾಣವನ್ನು ಬರೆದಿದ್ದಾರೆ. ಬಸದಿ ಶಿಥಿಲಾವಸ್ಥೆಯಲ್ಲಿದ್ದು, ನವೀಕರಿಸಲ್ಪಟ್ಟಿದೆ. ಇದು ಕಲ್ಯಾಣಿ ಚಾಲುಕ್ಯರ ಜೈನ ವಾಸ್ತುಶಿಲ್ಪದ ಆಸಕ್ತಿಯನ್ನು ಪ್ರಸ್ತುತಪಡಿಸುತ್ತದೆ. ದೇವಾಲಯದ ಗೋಡೆಯ ಮೇಲೆ ಒಂದು ಶಾಸನವಿದೆ ಮತ್ತು ಕಲ್ಲಿನ ಮೇಲೆ ಶಂಖ ಚಿಪ್ಪನ್ನು ಕೆತ್ತಲಾಗಿದೆ. ಶಂಖ (ಶಂಕರ ಚಿಪ್ಪು) ಎಂಬ ಹೆಸರು ಬಂದಿರುವುದು ಇದು ನೇಮಿನಾಥ ತೀರ್ಥಂಕರನ ಸಂಕೇತವಾಗಿರುವುದರಿಂದ.
ಭೇಟಿ ನೀಡಿ