ನೇಮಿನಾಥ ಜೈನ ಬಸದಿ ಲಕ್ಷ್ಮೇಶ್ವರ

ನೇಮಿನಾಥ ಜೈನ ಬಸದಿಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಪಂಪ ಸರ್ಕಲ್ ನ ಹತ್ತಿರ ಇರುವ ಕರ್ನಾಟಕದ ಅತ್ಯಂತ ಹಳೆಯ ಜೈನ ಬಸದಿ ದೇವಾಲಯಗಳಲ್ಲಿ ಒಂದಾಗಿದೆ. ಇದು ನೇಮಿನಾಥ ಸ್ವಾಮಿಗೆ ಸಮರ್ಪಿತವಾಗಿದೆ. ಕಲ್ಯಾಣಿ ಚಾಲುಕ್ಯ ರಾಜವಂಶದಿಂದ ನಿರ್ಮಿಸಲ್ಪಟ್ಟಿದೆ ಮತ್ತು ನಂತರ ರಾಷ್ಟ್ರಕೂಟ ರಾಜರಿಂದ ಪೋಷಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಲಕ್ಷ್ಮೇಶ್ವರದಲ್ಲಿ ಇರುವ ನೇಮಿನಾಥ ಜೈನ ಬಸದಿಯು ಬೆಂಗಳೂರಿನಿಂದ ಸುಮಾರು 386 ಕಿ.ಮೀ ಹಾಗೂ ಗದಗದಿಂದ 47 ಕಿ.ಮೀ ದೂರದಲ್ಲಿದೆ. ಹಾಗೂ ಲಕ್ಷ್ಮೇಶ್ವರದಿಂದ ಕೇವಲ 1 ಕಿ.ಮೀ ಮತ್ತು ಗುಡಗೇರಿ ರೈಲ್ವೆ ನಿಲ್ದಾಣದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ.

ದೇವಾಲಯವು ಚಾಲುಕ್ಯ ಶೈಲಿಯಲ್ಲಿದ್ದರೂ, ಇದು ಅನೇಕ ಮಾರ್ಪಾಡುಗಳು ಮತ್ತು ನವೀಕರಣಗಳಿಗೆ ಒಳಗಾಗಿದೆ. 22ನೇ ಜೈನ ತೀರ್ಥಂಕರರಾದ ನೇಮಿನಾಥ (ಶಂಖವು ನೇಮಿನಾಥನ ಸಂಕೇತ) ಈ ಜೈನ ಬಸದಿಯ ಪ್ರಧಾನ ದೇವರು. 1008 ಜೈನ ತೀರ್ಥಂಕರರನ್ನು ಕೆತ್ತಿದ ಏಕಶಿಲೆಯ ಸ್ತಂಭ ಇರುವುದರಿಂದ, ಈ ಬಸದಿಯನ್ನು ಸಹಸ್ರಕೂಟ ಬಸದಿ ಎಂದೂ ಕರೆಯುತ್ತಾರೆ.

ಬಸದಿ ಗರ್ಭಗೃಹ, ದೊಡ್ಡ ಅರ್ಧಮಂಟಪ, ದೊಡ್ಡ ಮಹಾಮಂಟಪ ಮತ್ತು ರಂಗಮಂಟಪವನ್ನು ಒಳಗೊಂಡಿದೆ. ರಂಗಮಂಟಪವು ಮೂರು ಪ್ರವೇಶ ದ್ವಾರಗಳನ್ನು (ದಕ್ಷಿಣ, ಉತ್ತರ ಮತ್ತು ಪಶ್ಚಿಮ) ಹೊಂದಿದೆ. ಇದು ಸಣ್ಣ ಮಾದರಿಯಲ್ಲಿ ಚತುರ್ಮುಖ ರಚನೆಯನ್ನು ಹೊಂದಿದ್ದು, ಪ್ರತಿಯೊಂದು ಮುಖವು ಮೂರು ಆಕೃತಿಗಳನ್ನು ಹೊಂದಿದೆ. ದೇವಾಲಯವು ರೇಖಾನಗರ ಶಿಖರವನ್ನು ಹೊಂದಿದೆ. ಇದರ ವಿಶಿಷ್ಟ ಲಕ್ಷಣವೆಂದರೆ, ಸೂಕ್ಷ್ಮ ರೂಪದಲ್ಲಿ ಕೆತ್ತಿದ ಸಹಸ್ರಕೂಟ ಜಿನಬಿಂಬ.

ದೇವಾಲಯದ ಮುಂದೆ ಮಾನಸ್ತಂಭವನ್ನು ನಿರ್ಮಿಸಲಾಗಿದೆ. ನರ್ತಕರು ಮತ್ತು ಸಂಗೀತಗಾರರ ಅನೇಕ ಅದ್ಭುತ ಕೆತ್ತನೆಗಳು ಕಾಣಿಸಿಕೊಳ್ಳುತ್ತವೆ. ಹತ್ತಿರದ ಬಾವಿಯ ಗೋಡೆಯ ಮೇಲೆ ಅನೇಕ ವಿರೂಪಗೊಂಡ ಜೈನ ವಿಗ್ರಹಗಳೂ ಕಾಣಬಹುದು. ಆದಿಕವಿ ಪಂಪಾ ಈ ಬಸದಿಯಲ್ಲಿ ಕುಳಿತು ಆದಿಪುರಾಣವನ್ನು ಬರೆದಿದ್ದಾರೆ.

ಬಸದಿ ಶಿಥಿಲಾವಸ್ಥೆಯಲ್ಲಿದ್ದರೂ, ನವೀಕರಿಸಲಾಗಿದೆ. ಇದು ಕಲ್ಯಾಣಿ ಚಾಲುಕ್ಯರ ಜೈನ ವಾಸ್ತುಶಿಲ್ಪದ ಆಸಕ್ತಿಯನ್ನು ಚೆನ್ನಾಗಿ ಪ್ರತಿಪಾದಿಸುತ್ತದೆ. ದೇವಾಲಯದ ಗೋಡೆಯ ಮೇಲೆ ಒಂದು ಶಾಸನವಿದ್ದು, ಕಲ್ಲಿನ ಮೇಲೆ ಶಂಖ ಚಿಪ್ಪನ್ನು ಕೆತ್ತಲಾಗಿದೆ. ಶಂಖ (ಶಂಕರ ಚಿಪ್ಪು) ಎಂಬ ಹೆಸರು ಬಂದಿರುವುದು, ಶಂಖ ನೇಮಿನಾಥ ತೀರ್ಥಂಕರನ ಸಂಕೇತವಾಗಿರುವುದರಿಂದ.

ಭೇಟಿ ನೀಡಿ
ಲಕ್ಷ್ಮೇಶ್ವರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section