ಮಂಡ್ಯ ಸಂಗಮ ಅಥವಾ ತ್ರಿವೇಣಿ ಸಂಗಮವು ಮೂರು ಪವಿತ್ರ ನದಿಗಳಾದ ಕಾವೇರಿ, ಲೋಕಪಾವನಿ ಮತ್ತು ಹೇಮಾವತಿ ನದಿಗಳ ಸಂಗಮಸ್ಥಳವಾಗಿದೆ. ಈ ಸಂಗಮವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಮೀಪದಲ್ಲಿರುವ ಪವಿತ್ರ ಸ್ಥಳವಾಗಿದೆ.
ಈ ಸಂಗಮಸ್ಥಳವು ಅತ್ಯಂತ ಮಂಗಳಕರ ಹಾಗೂ ಪವಿತ್ರವೆಂದು ನಂಬಲಾಗಿದೆ. ದಂತಕಥೆಗಳ ಪ್ರಕಾರ, ಸಂಗಮದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತವೆ ಎಂಬ ಭಕ್ತರ ನಂಬಿಕೆ ಇದೆ.
ತ್ರಿವೇಣಿ ಸಂಗಮದ ದೂರಗಳು
- ಬೆಂಗಳೂರು – 131 ಕಿ.ಮೀ
- ಮಂಡ್ಯ – 28 ಕಿ.ಮೀ
- ಶ್ರೀರಂಗಪಟ್ಟಣ – 4 ಕಿ.ಮೀ
- ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣ – 6 ಕಿ.ಮೀ
- ಮೈಸೂರು ವಿಮಾನ ನಿಲ್ದಾಣ – 30 ಕಿ.ಮೀ
ಶ್ರೀರಂಗಪಟ್ಟಣದ ಸಮೀಪದಲ್ಲಿ ಕಾವೇರಿ ನದಿ ಎರಡು ಭಾಗಗಳಾಗಿ ವಿಭಜನೆಗೊಂಡು ಉತ್ತರ ಕಾವೇರಿ ಮತ್ತು ದಕ್ಷಿಣ ಕಾವೇರಿಯಾಗಿ ಕೆಲ ದೂರ ಹರಿದು, ನಂತರ ಮತ್ತೆ ಒಂದಾಗಿ ಸೇರುತ್ತದೆ. ಈ ಮಧ್ಯೆ ಲೋಕಪಾವನಿ ನದಿ ಉತ್ತರ ಕಾವೇರಿಯೊಂದಿಗೆ ಸೇರುತ್ತದೆ.
ಭೇಟಿ ನೀಡಿ






