ಕೋಟೆಯ ನೀರಿನ ಗೇಟ್ ಅಥವಾ ರಹಸ್ಯ ಬಾಗಿಲು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೆ. ಈ ನೀರಿನ ಗೇಟ್ ಶ್ರೀರಂಗಪಟ್ಟಣ ಕೋಟೆಯನ್ನು ಪ್ರವೇಶಿಸಲು ಬಳಸಲಾಗುತ್ತಿದ್ದ ರಹಸ್ಯ ದ್ವಾರವಾಗಿತ್ತು.
ಈ ಸ್ಥಳವು ಬೆಂಗಳೂರಿನಿಂದ ಸುಮಾರು 132 ಕಿ.ಮೀ, ಮಂಡ್ಯ ನಗರದಿಂದ ಸುಮಾರು 28 ಕಿ.ಮೀ ಹಾಗೂ ಶ್ರೀರಂಗಪಟ್ಟಣ ಪಟ್ಟಣದಿಂದ ಕೇವಲ 500 ಮೀಟರ್ ದೂರದಲ್ಲಿದೆ.
ಶ್ರೀರಂಗಪಟ್ಟಣ ಕೋಟೆಯನ್ನು ಪ್ರವೇಶಿಸಲು ಇದು ರಹಸ್ಯ ದ್ವಾರವಾಗಿದೆ. ರಾಜವಂಶವನ್ನು ವಶಪಡಿಸಿಕೊಳ್ಳಲು ಬಯಸುವ ಇತರ ರಾಜವಂಶಗಳನ್ನು ಗೊಂದಲಗೊಳಿಸುವುದಕ್ಕಾಗಿ ಈ ರಹಸ್ಯ ದ್ವಾರವನ್ನು ನಿರ್ಮಿಸಲಾಯಿತು. ಸ್ಥಳೀಯವಾಗಿ ಈ ದ್ವಾರವನ್ನು “ನೀರಿನ ಗೇಟ್” ಎಂದು ಕರೆಯಲಾಗುತ್ತದೆ. ಹೊರಗಿನಿಂದ ಕೋಟೆಗೆ ದಾಳಿ ಮಾಡುವವರ ಮೇಲೆ ಗುಂಡು ಹಾರಿಸಲು ಇಲ್ಲಿ ಗನ್ ಪಾಯಿಂಟ್ ವ್ಯವಸ್ಥೆಯೂ ಇತ್ತು.
1799ರಲ್ಲಿ ಬ್ರಿಟಿಷರು ಈ ರಹಸ್ಯ ದ್ವಾರದ ಮಾಹಿತಿಯನ್ನು ಕಂಡುಕೊಂಡು, ಅದರ ಮೂಲಕ ಶ್ರೀರಂಗಪಟ್ಟಣ ಕೋಟೆಯನ್ನು ವಶಪಡಿಸಿಕೊಂಡರು. ಇದೇ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ಟಿಪ್ಪು ಸುಲ್ತಾನನು ಹತರಾದನು.
ಭೇಟಿ ನೀಡಿ



