ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಳ್ಳೂರು ಎಂಬ ಗ್ರಾಮದಲ್ಲಿ ಸ್ಥಿತವಾಗಿದೆ. ಮನುಷ್ಯರ ಜೊತೆಯಲ್ಲೇ ಪಕ್ಷಿಗಳು ಸಹಜವಾಗಿ ವಾಸಿಸುವ ಕರ್ನಾಟಕದ ಅಪರೂಪದ ಪಕ್ಷಿತಾಣಗಳಲ್ಲಿ ಇದೂ ಒಂದು ಎಂಬುದು ಕೊಕ್ಕರೆ ಬೆಳ್ಳೂರಿನ ಪ್ರಮುಖ ವಿಶೇಷತೆ. ಇದನ್ನು “ಬೆಳ್ಳಕ್ಕಿಗಳ ತವರೂರು” ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇಲ್ಲಿ ಪ್ರಕೃತಿ ಮತ್ತು ಪಕ್ಷಿಸಂತಾನ ಪರಸ್ಪರ ಬೆರೆತು ಇರುವ ವಿಸ್ಮಯವನ್ನು ಸುಲಭವಾಗಿ ಕಾಣಬಹುದು.
ಈ ಪಕ್ಷಿಧಾಮವು ಬೆಂಗಳೂರಿನಿಂದ ಸುಮಾರು 116 ಕಿ.ಮೀ, ಮಂಡ್ಯ ನಗರದಿಂದ ಸುಮಾರು 33 ಕಿ.ಮೀ ದೂರದಲ್ಲಿದೆ. ಮದ್ದೂರು ರೈಲು ನಿಲ್ದಾಣವು ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಸಮೀಪದ ರೈಲು ನಿಲ್ದಾಣವಾಗಿದ್ದು, ಇದು ಸುಮಾರು 17 ಕಿ.ಮೀ ದೂರದಲ್ಲಿದೆ.
ಇಲ್ಲಿನ ಸ್ಥಳೀಯ ನಿವಾಸಿಗಳು ಪಕ್ಷಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅವುಗಳ ಸಂರಕ್ಷಣೆಗೆ ಸಕ್ರಿಯವಾಗಿ ಕೈಜೋಡಿಸುತ್ತಿದ್ದಾರೆ. ಪಕ್ಷಿಗಳೂ ಸಹ ಈ ಗ್ರಾಮದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ತಮ್ಮ ಮೂಲಕ ಈ ಪುಟ್ಟ ಗ್ರಾಮವನ್ನು ಇಡೀ ನಾಡಿನಾದ್ಯಂತ ಪ್ರಸಿದ್ಧಗೊಳಿಸಿವೆ ಎಂದರೆ ತಪ್ಪಾಗದು. ಬಣ್ಣದ ಕೊಕ್ಕರೆಗಳ ಜೊತೆಗೆ ಸ್ಪಾಟ್-ಬಿಲ್ಡ್ ಪೆಲಿಕಾನ್ಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಈ ಎರಡೂ ಜಾತಿಯ ಪಕ್ಷಿಗಳನ್ನು IUCN ರೆಡ್ ಲಿಸ್ಟ್ನಲ್ಲಿ ಬೆದರಿಕೆಗೆ ಒಳಗಾದ ಪಕ್ಷಿಗಳು ಎಂದು ವರ್ಗೀಕರಿಸಲಾಗಿದೆ. ಈ ಗ್ರಾಮವು ಭಾರತದ 21 ಪ್ರಮುಖ ಪಕ್ಷಿಗಳ ಸಂತಾನೋತ್ಪತ್ತಿ ತಾಣಗಳಲ್ಲಿ ಒಂದಾಗಿದೆ.
ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ ಮತ್ತು ಭೇಟಿ ನೀಡಲು ನಿರ್ದಿಷ್ಟ ಸಮಯ ಮಿತಿಯೂ ಇಲ್ಲ. ಚಳಿಗಾಲದ ಅವಧಿಯಲ್ಲಿ ಕೊಕ್ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬಂದು ವಾಸಮಾಡುವುದರಿಂದ ಈ ಸ್ಥಳಕ್ಕೆ “ಕೊಕ್ಕರೆ ಬೆಳ್ಳೂರು” ಎಂಬ ಹೆಸರೇ ಪ್ರಸಿದ್ಧಿಯಾಗಿದೆ. ಇದು ಪಕ್ಷಿಗಳಿಗಾಗಿ ಮಾನವ ನಿರ್ಮಿಸಿರುವ ತಾಣವಲ್ಲ; ಬದಲಾಗಿ ಇದು ಒಂದು ಗ್ರಾಮವಾಗಿದ್ದು, ಇಲ್ಲಿ ಪೆಲಿಕಾನ್ಗಳು ಹಾಗೂ ಪೇಂಟೆಡ್ ಸ್ಟ್ರೋಕ್ಗಳಂತಹ ವಿಶೇಷ ಪಕ್ಷಿಗಳು ಸ್ವತಃ ತಮ್ಮ ಗೂಡುಗಳನ್ನು ಕಟ್ಟಿಕೊಂಡು ನಿರಂತರವಾಗಿ ವಾಸಿಸುತ್ತಿರುವ ಒಂದು ಅಪರೂಪದ ಪಕ್ಷಿವನವಾಗಿದೆ.
ಭೇಟಿ ನೀಡಿ






