ಬಾಣಂತಿಮರಿ ಬೆಟ್ಟ

ಬಾಣಂತಿಮರಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲೂಕಿನ ಡೊಳ್ಳಹಳ್ಳಿ ಗ್ರಾಮದ ಹತ್ತಿರ ಇರುವ ಬೆಟ್ಟವಾಗಿದೆ. ಈ ಬೆಟ್ಟದ ಬುಡದಲ್ಲಿ ಶ್ರೀ ಬಾಣಂತಿ ಮಾರಿ ಅಮ್ಮನ ದೇವಾಲಯವಿದೆ ಮತ್ತು ಬೆಟ್ಟದ ಮೇಲೆ ಆಂಜನೇಯ ಸ್ವಾಮಿ ದೇವಾಲಯವಿದೆ. ಟ್ರೆಕ್ಕಿಂಗ್‌ಗೆ ಅದ್ಭುತವಾದ ಸ್ಥಳವಾಗಿದೆ. ಬೆಟ್ಟದ ಮೇಲಿನಿಂದ ಕಾಣುವ ನೋಟ ಸುಂದರವಾಗಿದೆ. ಈ ಸ್ಥಳವು ಬಾಣಂತಿಮರಿ ರಾಜ್ಯ ಅರಣ್ಯ, ರಾಮನಗರ ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ.

ಈ ಬೆಟ್ಟವು ಬೆಂಗಳೂರಿಂದ 62 ಕಿ.ಮೀ ಮತ್ತು ರಾಮನಗರದಿಂದ 27 ಕಿ.ಮೀ ದೂರದಲ್ಲಿದೆ. ಹಾಗೂ ಕನಕಪುರದಿಂದ ಕೇವಲ 06 ಕಿ.ಮೀ ದೂರದಲ್ಲಿದೆ.

ಈ ಚಾರಣವು ಒಂದು ನಿರ್ಜನ, ವಿಲಕ್ಷಣ ಹಳ್ಳಿಯ ಮೂಲಕ ಕರೆದೊಯ್ಯುವ ಮೂಲಕ, ಅದರ ಶಾಂತತೆಯಲ್ಲಿ ಬಹುತೇಕ ಪಾರಮಾರ್ಥಿಕವೆನಿಸುತ್ತದೆ. ಪ್ರಕೃತಿಯ ಸೌಂದರ್ಯದ ಹೊಸ ದೃಷ್ಟಿಕೋನವನ್ನು ನೀಡುವ ಮತ್ತು ಬೆರಗುಗೊಳಿಸುವ ವಿಹಂಗಮ ನೋಟಗಳನ್ನು ಚಾರಣಿಗರಿಗೆ ಒಂದು ಅದ್ಬುತ ಸ್ಥಳವಾಗಿದೆ.

ಭೇಟಿ ನೀಡಿ
ಕನಕಪುರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section