ಮಂಚನಬೆಲೆ ಅಣೆಕಟ್ಟುವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿದೆ. ಅರ್ಕಾವತಿ ನದಿಗೆ ಅಡ್ಡವಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.
ಈ ಅಣೆಕಟ್ಟು ಬೆಂಗಳೂರಿನಿಂದ 40 ಕಿ.ಮೀ ಹಾಗೂ ಬೆಂಗಳೂರು ದಕ್ಷಿಣ (ರಾಮನಗರ)ದಿಂದ 22 ಕಿ.ಮೀ ದೂರದಲ್ಲಿದೆ. ಮಾಗಡಿ ನಗರದಿಂದ ಇದು ಕೇವಲ 20 ಕಿ.ಮೀ ದೂರದಲ್ಲಿದೆ.
ಈ ಅಣೆಕಟ್ಟು ಸಣ್ಣ ಬೆಟ್ಟಗಳು ಮತ್ತು ಹಚ್ಚ ಹಸಿರಿನ ಮರಗಳಿಂದ ಆವೃತವಾಗಿದ್ದು, ಈ ಸ್ಥಳವು ಇನ್ನಷ್ಟು ಮೋಹಕವಾಗಿ ಕಾಣುತ್ತದೆ. ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಆಕಾಶ ಮತ್ತು ಭೂಮಿಯ ಮನೋಹರ ನೋಟಗಳನ್ನು ವೀಕ್ಷಿಸಬಹುದು. ಈ ಎರಡೂ ಸಮಯಗಳಲ್ಲಿ ಹಚ್ಚ ಹಸಿರು ಪ್ರಕೃತಿ, ನೀಲಿ ನೀರು ಮತ್ತು ಆಕಾಶದ ವಿಭಿನ್ನ ವರ್ಣಗಳು ಸೇರಿ ಸ್ಥಳವನ್ನು ಮಾಂತ್ರಿಕವಾಗಿ ರೂಪಿಸುತ್ತವೆ. ಮಂಚನಬೆಲೆ ಅಣೆಕಟ್ಟು ವಿಶ್ರಾಂತಿ ಪಡೆಯಲು ಮತ್ತು ಮನಸ್ಸಿಗೆ ನೆಮ್ಮದಿ ನೀಡಲು ಸೂಕ್ತ ಸ್ಥಳವಾಗಿದೆ.
ಭೇಟಿ ನೀಡಿ





