ಅಲ್ಲಮಪ್ರಭು ಗದ್ದುಗೆಮಠವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಮೊರ್ಖಂಡಿ ಗ್ರಾಮದಲ್ಲಿ ಇರುವ ಮಠವಾಗಿದೆ. ಈ ಮಠವು 12ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧ ಪಡೆದ ಅಲ್ಲಮಪ್ರಭುಗಳಿಗೆ ಸಮರ್ಪಿತವಾದ ಮಠವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 715 ಕಿ.ಮೀ (NH50 ಮೂಲಕ), 730 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 80 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 1.5 ಕಿ.ಮೀ ದೂರದಲ್ಲಿದೆ.
ಹರಳಯ್ಯ ಗವಿಯಿಂದ ಮುಂದೆ ಹೋದಾಗ ಬಲಗಡೆ ಇರುವುದೇ ಅಲ್ಲಮಪ್ರಭು ಗದಿಗೆಮಠ. ಈ ಮಠ ಕರಿಕಲ್ಲಿನಿಂದ ನಿರ್ಮಾಣವಾಗಿದ್ದು ಸುಂದರವಾಗಿ ಕಾಣುತ್ತದೆ. ಅಲ್ಲಮಪ್ರಭುಗಳು ಬಸವಕಲ್ಯಾಣಕ್ಕೆ ಬಂದಾಗ ಇಲ್ಲಿ ಕುಳಿತು ಪೂಜೆ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಮಠ ವಿಶಾಲವಾಗಿದ್ದು ಚಿಕ್ಕ ಬಾಗಿಲುಗಳಿರುವ ಕೋಣೆಗಳು ಕೂಡ ಇವೆ. ಹಿತ್ತಲಿನ ಪ್ರದೇಶದಲ್ಲಿ ಒಂದು ಸುಂದರವಾದ ಬಾವಿಯೂ ಕೂಡ ಇದೆ. ಪ್ರಸ್ತುತ ಈ ದೇವಾಲಯವನ್ನು ಬಸವೇಶ್ವರ ದೇವಾಲಯ ಸಮಿತಿಯ ಜನರು ನಿರ್ವಹಿಸುತ್ತಿದ್ದಾರೆ.
ಭೇಟಿ ನೀಡಿ





