ಕರ್ನಲ್ ಬೈಲಿಯ ಕತ್ತಲಕೋಣೆ

ಕರ್ನಲ್ ಬೈಲಿಯ ಕತ್ತಲಕೋಣೆ (ಡಂಜಿಯನ್) ಇದು ಒಂದು ಶ್ರೀರಂಗಪಟ್ಟಣದಲ್ಲಿರುವ ಕತ್ತಲಕೋಣೆಯ ಬಂದೀಖಾನೆಯಾಗಿದ್ದು, ಈ ಸ್ಥಳವು ಕರ್ನಾಟಕ ರಾಜ್ಯದ ಶ್ರೀರಂಗಪಟ್ಟಣದಲ್ಲಿ ಇದೆ. ಟಿಪ್ಪು ಸುಲ್ತಾನ್ ಅವರು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಸೆರೆಹಿಡಿಯಲು ಬಳಸುತ್ತಿದ್ದ ಸ್ಥಳವಾಗಿತ್ತು. ಇದು 18 ನೇ ಶತಮಾನದಲ್ಲಿ ಮೈಸೂರು ಸಾಮ್ರಾಜ್ಯದ ಅಂದಿನ ಆಡಳಿತಗಾರ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ನಿರ್ಮಿಸಲಾದ ಭೂಗತ ಜೈಲು. ಇದು ಟಿಪ್ಪು ಸುಲ್ತಾನನ ಸಮಾಧಿ ಸ್ಮಾರಕದ ಸಮೀಪದಲ್ಲಿದೆ.

ಈ ಬಂದೀಖಾನೆಯು ಬೆಂಗಳೂರಿನಿಂದ ಸುಮಾರು 128 ಕಿ.ಮೀ ಮತ್ತು ಮಂಡ್ಯ ನಗರದಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ಹಾಗೂ ಮೈಸೂರು ನಗರದಿಂದ 16 ಕಿ.ಮೀ, ಮೈಸೂರು ರೈಲ್ವೆ ನಿಲ್ದಾಣದಿಂದ 17ಕಿ.ಮೀ ಮತ್ತು ಶ್ರೀರಂಗಪಟ್ಟಣ ಕೇವಲ 2 ಕಿ.ಮೀ ದೂರದಲ್ಲಿದೆ.

1761 ಮತ್ತು 1799 CE ನಡುವೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರು ಮೈಸೂರು ಸಾಮ್ರಾಜ್ಯ ಆಳಿದರು. ಇದು ಬ್ರಿಟಿಷ್ ಅಧಿಕಾರಿಗಳು ಮತ್ತು ಸೈನಿಕರು ಸೇರಿದಂತೆ ಯುದ್ಧ ಕೈದಿಗಳನ್ನು ಹಿಡಿದಿಡಲು ಬಳಸುವ ಬಿಳಿ ಗೋಡೆಯ ಬಂದೀಖಾನೆಯಾಗಿದೆ. ಇದು ಮೈಸೂರು ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವನ್ನು ಸುತ್ತುವರೆದಿರುವ ಕೋಟೆ ಗೋಡೆಯ ಮತ್ತು ಶ್ರೀರಂಗಪಟ್ಟಣ ದೇವಾಲಯದ ಉತ್ತರ ಭಾಗದಲ್ಲಿದೆ.

ಕರ್ನಲ್ ಬೈಲಿಯ ಪೊಲ್ಲಿಲೂರ್ ಕದನದಲ್ಲಿ (1780), ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಎದುರಾಳಿ ಬ್ರಿಟಿಷ್ ಸೈನ್ಯವನ್ನು ಕರ್ನಲ್ ಬೈಲಿ ನೇತೃತ್ವ ವಹಿಸಿದ್ದರು. ದುರದೃಷ್ಟವಶಾತ್ ಬ್ರಿಟಿಷರು ಯುದ್ಧದಲ್ಲಿ ಸೋತರು ಮತ್ತು ಕರ್ನಲ್ ಬೈಲಿ ಹಾಗೂ ಇತರ ಕೆಲವು ಸೈನಿಕರನ್ನು ಯುದ್ಧದ ಖೈದಿಗಳಾಗಿ ಸೆರೆಹಿಡಿಯಲಾಯಿತು. ಅಲ್ಲಿ ವಿಶೇಷವಾಗಿ ನಿರ್ಮಿಸಲಾದ ಕತ್ತಲಕೋಣೆಯಲ್ಲಿ ಸೆರೆಮನೆಯಲ್ಲಿ ಇರಿಸಲು ಶ್ರೀರಂಗಪಟ್ಟಣಕ್ಕೆ ಕರೆದೊಯ್ಯಲಾಯಿತು. ಶ್ರೀರಂಗಪಟ್ಟಣದ ಕತ್ತಲಕೋಣೆಯಲ್ಲಿ ಹಲವಾರು ತಿಂಗಳುಗಳನ್ನು ಕಳೆದನು. ಅಲ್ಲಿ ಬೈಲಿ ಮತ್ತು ಅವನ ಸೈನಿಕರನ್ನು ಕಲ್ಲಿನ ರಂಧ್ರಗಳಿಗೆ ಸರಪಳಿಯಿಂದ ಬಂಧಿಸಲಾಯಿತು, ಕರ್ನಲ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ 13 ನವೆಂಬರ್ 1782 ರಲ್ಲಿ ಆ ಸ್ಥಳದಲ್ಲಿ ಮರಣಹೊಂದಿದ ಬ್ರಿಟಿಷ್ ಅಧಿಕಾರಿಯಾಗಿದ್ದು, ನಂತರ ಬಂದೀಖಾನೆಗೆ ಅವರ ಹೆಸರನ್ನು ಇಡಲಾಯಿತು.

ಈ ವಿಶಿಷ್ಟ ಭೂಗತ ಕತ್ತಲಕೋಣೆಯನ್ನು ಇಟ್ಟಿಗೆ ಮತ್ತು ಸುಣ್ಣದ ಗಾರೆ ಕಲ್ಲಿನಿಂದ ನಿರ್ಮಿಸಲಾಗಿದೆ ಹಾಗೂ ಇದು ಕೋಣೆಯನ್ನು ಬೆಳಗಿಸುವ ಸಮ್ಮಿತೀಯ ಕಮಾನುಗಳ ಸರಣಿಯನ್ನು ಹೊಂದಿರುವುದರಿಂದ ವಾಸ್ತುಶಿಲ್ಪದ ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಕಮಾನುಗಳ ನಿರ್ದಿಷ್ಟ ಅಂಶವೆಂದರೆ ಅದು ಮಸೀದಿಯ ಸಮಾಧಿಯಂತೆ ಕಾಣುತ್ತದೆ, ಬದಿಯಲ್ಲಿ ಬಲ್ಬಸ್ ಆಕಾರದಲ್ಲಿದೆ ಮತ್ತು ಸೀಲಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಹೀಗಾಗಿ ಕೈದಿಗಳು ತಮ್ಮ ಪೂರ್ಣ ಎತ್ತರಕ್ಕೆ ನಿಲ್ಲಲು ಅನುಕೂಲವಾಗುತ್ತದೆ. ಬಂದೀಖಾನೆಯು 100 ft x 40 ft ಅಳತೆಯನ್ನು ಹೊಂದಿದೆ ಮತ್ತು ಕೋಟೆಯ ಗೋಡೆಗೆ ತಾಗಿಕೊಂಡಿದೆ. ಎತ್ತರದ ವೇದಿಕೆಯನ್ನು ಹೊಂದಿದೆ, ಅದರ ಮೇಲೆ ಭುಜದ ಎತ್ತರದ ಕಲ್ಲಿನ ಚಪ್ಪಡಿಗಳನ್ನು ಕೊಕ್ಕೆಗಳು ಮತ್ತು ಸರಪಳಿ ಸಾಧನಗಳೊಂದಿಗೆ ಜೋಡಿಸಲಾದ ರಂಧ್ರಗಳೊಂದಿಗೆ ಕೈದಿಗಳನ್ನು ಕಟ್ಟಿಹಾಕಲು ಅಳವಡಿಸಲಾಗಿದೆ. ಇದನ್ನು ನೆಲದ ಮಟ್ಟದಿಂದ ಕೆಲವು ಹಂತಗಳ ಮೂಲಕ ಸಂಪರ್ಕಿಸಲಾಗುತ್ತದೆ. ಬಂದೀಖಾನೆಯ ಕಲ್ಲಿನ ಚಪ್ಪಡಿಯಲ್ಲಿ ಕೈದಿಗಳನ್ನು ಕಟ್ಟಲಾಗುತ್ತದೆ ಮತ್ತು ಅವರ ಕುತ್ತಿಗೆಯವರೆಗೂ ನೀರಿನಲ್ಲಿ ಮುಳುಗಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು