ಒಬೆಲಿಸ್ಕ್ ಸ್ಮಾರಕವು ಕರ್ನಾಟಕ ರಾಜ್ಯದ ಶ್ರೀರಂಗಪಟ್ಟಣದಲ್ಲಿ ನಿರ್ಮಿಸಲಾದ ಸ್ಮರಣಾರ್ಥ ಸ್ಮಾರಕವಾಗಿದೆ. ಈ ಸ್ಮಾರಕವನ್ನು ಮುತ್ತಿಗೆ ಸ್ಮಾರಕ ಎಂದೂ ಸಹ ಕರೆಯುತ್ತಾರೆ. 1798-99ರ ಅವಧಿಯಲ್ಲಿ ಬ್ರಿಟಿಷ್ ಸೈನ್ಯ ಮತ್ತು ಟಿಪ್ಪು ಸುಲ್ತಾನ್ ನೇತೃತ್ವದ ಮೈಸೂರು ಸಾಮ್ರಾಜ್ಯದ ಪಡೆಗಳ ನಡುವೆ ನಡೆದ ಕೊನೆಯ ಹಾಗೂ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ 4 ಮೇ 1799 ರಂದು ಶ್ರೀರಂಗಪಟ್ಟಣದ ಮುತ್ತಿಗೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡ ಬ್ರಿಟಿಷ್ ಅಧಿಕಾರಿಗಳು ಮತ್ತು ಸ್ಥಳೀಯ ಸೈನಿಕರ ಸ್ಮರಣೆಯನ್ನು ಈ ಸ್ಮಾರಕವು ಗುರುತಿಸುತ್ತದೆ. ಈ ಯುದ್ದದಲ್ಲಿ ಬ್ರಿಟಿಷ್ ಸೈನ್ಯವನ್ನು ಬ್ರಿಟಿಷ್ ಜನರಲ್ ಹ್ಯಾರಿಸ್ ನೇತೃತ್ವ ವಹಿಸಿದ್ದರು. ಸುಲ್ತಾನರಿಂದ ತಮ್ಮ ಸಿಂಹಾಸನವನ್ನು ಮರಳಿ ಪಡೆದಿದ್ದಕ್ಕಾಗಿ ಒಡೆಯರ್ಗಳು ಕೃತಜ್ಞತೆಯ ಸಂಕೇತವಾಗಿ 1907 ರಲ್ಲಿ ಕೃಷ್ಣ ರಾಜ ಒಡೆಯರ್ IV ಆಳ್ವಿಕೆಯಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಯಿತು. ಈ ಸ್ಮಾರಕವು 50 ಅಡಿ ಎತ್ತರವಿದೆ.
ಈ ಸ್ಮಾರಕವು ಬೆಂಗಳೂರಿನಿಂದ ಸುಮಾರು 134 ಕಿ.ಮೀ ಮತ್ತು ಮೈಸೂರು ನಗರ ದಿಂದ ಕೇವಲ 16 ಕಿ.ಮೀ ಹಾಗೂ ಮಂಡ್ಯ ನಗರದಿಂದ 29 ಕಿ.ಮೀ ದೂರದಲ್ಲಿದೆ. ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣದಿಂದ ಕೇವಲ 500 ಮೀಟರ್ ಮತ್ತು ಶ್ರೀರಂಗಪಟ್ಟಣ ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ.
ಈ ಸ್ಮಾರಕವು ಶ್ರೀರಂಗಪಟ್ಟಣ ಕೋಟೆಯ ಗೋಡೆಗಳ ಬಳಿ ಎತ್ತರದ ಭೂಮಿಯಲ್ಲಿದೆ. ಇದು ಹೆಚ್ಚು ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಹಾಗೂ ಕಾವೇರಿ ನದಿಯ ದ್ವೀಪದ ಒಂದು ತುದಿಯಲ್ಲಿ ವಾಯುವ್ಯ ಮೂಲೆಯಲ್ಲಿ ಎತ್ತರದ ಬಿಂದುವಿನ ಮೇಲೆ ಹರಡಿರುವ ಕೇಂದ್ರೀಕೃತ ಸರಣಿಯ ಮೆಟ್ಟಿಲುಗಳ ಮಧ್ಯದಲ್ಲಿ ಸ್ಥಾಪಿಸಲಾಗಿದೆ.
ಒಬೆಲಿಸ್ಕ್ ಸ್ಮಾರಕವು ನಾಲ್ಕು ಫಿರಂಗಿ ಚೆಂಡುಗಳ ಮೇಲೆ ಪಿರಮಿಡ್ ಅಥವಾ ಶಂಕುವಿನಾಕಾರದ ಗೋಪುರವನ್ನು ಹೊಂದಿರುವ ಚದರ ತಳದ ರೂಪದಲ್ಲಿ ನಯಗೊಳಿಸಿದ ಕಲ್ಲಿನ ತಳವಾಗಿದ್ದು, ಮೊನಚಾದ ರೂಪವು ಆಕಾಶ ದಿಕ್ಕಿಗಿದ್ದು ಹಾಗೂ ಕಿರಿದಾದ ರಚನೆಯಾಗಿದೆ. ಶಿಖರದಲ್ಲಿ ಶಂಕುವಿನಾಕಾರದ ಮೊನಚಾದ ಮೇಲ್ಭಾಗದಲ್ಲಿ ಫಿರಂಗಿ ಚೆಂಡನ್ನು ಅಳವಡಿಸಲಾಗಿದೆ. ತಳದಲ್ಲಿ ನಾಲ್ಕು ಫಲಕಗಳನ್ನು ಅಳವಡಿಸಲಾಗಿದೆ.
ಒಬೆಲಿಸ್ಕ್ನ ಮುಂಭಾಗದಲ್ಲಿರುವ ಫಲಕವು ಮುತ್ತಿಗೆಯ ಸಾಮಾನ್ಯ ವಿವರಣೆಯನ್ನು ಈ ರೀತಿ ನೀಡುತ್ತದೆ
ಎರಡನೇ ಫಲಕವು ಏಪ್ರಿಲ್ 5 ರಿಂದ ಮೇ 4, 1799 ರ ಮುತ್ತಿಗೆ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಅಧಿಕಾರಿಗಳು, ಬ್ರಿಟಿಷ್ ಸೈನ್ಯದ ಸೈನಿಕರ ಹುತಾತ್ಮತೆಯನ್ನು ಮತ್ತು ಭಾರತೀಯ ಸೈನಿಕರ ಹುತಾತ್ಮತೆಯ ವಿವರಗಳೊಂದಿಗೆ ಫಲಕದಲ್ಲಿ ಕೆತ್ತಲಾಗಿದೆ. ಫಲಕದಲ್ಲಿ ಕೆತ್ತಲಾದ ಸಾವುನೋವುಗಳ ಅಂತಿಮ ಎಣಿಕೆಯು 192 ಜನರು ಸತ್ತರು, 657 ಜನರು ಗಾಯಗೊಂಡರು ಮತ್ತು 25 ಜನರು ಪತ್ತೆಯಾಗಿಲ್ಲ ಎಂದು ವರದಿ ಮಾಡಿದೆ. ಈ ಸ್ಮಾರಕದ ರಚನೆ ಮತ್ತು ವ್ಯವಸ್ಥೆ ಎರಡರಲ್ಲೂ ಪ್ರಾತಿನಿಧಿಕವಾಗಿದ್ದು, ತಿಳುವಳಿಕೆಯ ಸಂಪೂರ್ಣ ರಚನೆಯೊಂದಿಗೆ ಸ್ಮಾರಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಒಬೆಲಿಸ್ಕ್ ಸ್ಮಾರಕದ ಕೊನೆಯ ಎರಡು ಮುಖಗಳಲ್ಲಿ, ಮುತ್ತಿಗೆಯಲ್ಲಿ ಹುತಾತ್ಮರಾದ ಯುರೋಪಿಯನ್ ಅಧಿಕಾರಿಗಳ ಶ್ರೇಣಿ, ಹೆಸರು ಮತ್ತು ರೆಜಿಮೆಂಟ್ ಅನ್ನು ಫಲಕಗಳು ಪಟ್ಟಿ ಮಾಡುತ್ತವೆ.
ಇತಿಹಾಸ
ಫೆಬ್ರವರಿ 1799 ರಲ್ಲಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ಪ್ರಾರಂಭವಾಗುವ ಮೊದಲು, ಬ್ರಿಟಿಷ್ ಪಡೆಗಳು ಟಿಪ್ಪು ಸುಲ್ತಾನ್ ಅವರ ಮೇಲೆ ದಾಳಿ ಮಾಡುವ ಯೋಜನೆ ಮಾಡಿ ಹೈದರಾಬಾದ್ನ ನಿಜಾಮ್ ಮತ್ತು ಮರಾಠರ ಹೆಚ್ಚುವರಿ ತುಕಡಿಯೊಂದಿಗೆ ಒಟ್ಟುಗೂಡಿಸಲಾಯಿತು. ಬ್ರಿಟಿಷರ ಆಕ್ರಮಣಕಾರಿ ಸೈನ್ಯವು ಫಿರಂಗಿಗಳೊಂದಿಗೆ ಶಸ್ತ್ರಸಜ್ಜಿತವಾದ ಸೈನ್ಯವನ್ನು ಒಳಗೊಂಡಿತ್ತು ಆನೆಗಳು, ಕುದುರೆಗಳು, ಒಂಟೆಗಳು ಮತ್ತು ಇತರ ಯುದ್ಧ ಸಾಮಾನುಗಳನ್ನು ಜೊತೆಯಲ್ಲಿ ಒಟ್ಟುಗೂಡಿಸಲಾಯಿತು.
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಮತ್ತು ಅವನ ಸೈನ್ಯವು ಕೋಟೆಯೊಳಗೆ ಚೆನ್ನಾಗಿ ಸುತ್ತುವರಿದು ಮುತ್ತಿಗೆ ಹಾಕಿದವು. ಶ್ರೀರಂಗಪಟ್ಟಣ ನಗರದ ಸುತ್ತಲೂ ಹರಿಯುವ ಕಾವೇರಿ ನದಿಯು ಅತ್ಯಂತ ಕೆಳಮಟ್ಟದಲ್ಲಿತ್ತು. ಎರಡೂ ಕಡೆಯಿಂದ ಯುದ್ಧದ ತಂತ್ರಗಳು ಮತ್ತು ಹೋರಾಟಗಳ ನಂತರ, ಬ್ರಿಟಿಷ್ ಅಧಿಕಾರಿಗಳು ಮತ್ತು ಸೈನಿಕರ ದಂಡು ಅಂತಿಮವಾಗಿ, 4 ಮೇ 1799 ರಂದು ನೀರಿನಲ್ಲಿ ನಾಲ್ಕು ಅಡಿ ಆಳದ ನದಿಯನ್ನು ದಾಟಿ, ಗೋಡೆಗಳ ಒಳಭಾಗದಲ್ಲಿ ಗುಡಿಸಿದವು. ಯುದ್ಧದ ಆರಂಭದಲ್ಲಿ ಫ್ರೆಂಚ್ ಹಾಗೂ ಟಿಪ್ಪುವಿನ ಕೆಚ್ಚೆದೆಯ ಸೈನಿಕರ ಪಡೆಗಳು ಉತ್ತಮ ಸಜ್ಜುಗೊಂಡ ಬ್ರಿಟಿಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದವು.
04 ಮೇ 1799 ರಂದು ಮುಸ್ಸಂಜೆಯಲ್ಲಿ, ಕೆಲವು ಬ್ರಿಟಿಷ್ ಅಧಿಕಾರಿಗಳು ಟಿಪ್ಪು ಸುಲ್ತಾನನ ದೇಹವನ್ನು ಹುಡುಕಲು ಹೋದರು. ಅಧಿಕಾರಿಗಳು ಟಿಪ್ಪು ಸುಲ್ತಾನ ದೇಹ ಎಂದು ಗುರುತಿಸಲಾಯಿತು ಮತ್ತು ಅವನ ದೇಹವು ವಾಟರ್ ಗೇಟ್ ಬಳಿ ಉಸಿರುಗಟ್ಟಿದ ಸುರಂಗದಂತಹ ಹಾದಿಯಲ್ಲಿ ಪತ್ತೆಯಾಯಿತು. ಟಿಪ್ಪುವಿನ ದೇಹದ ಮೇಲೆ ಒಂದು ಗುಂಡು ಸೇರಿದಂತೆ ಮೂರು ಗಾಯಗಳನ್ನು ಅನುಭವಿಸಿ ಮತ್ತು ಅವನು ಅದೇ ದಿನ ಮರಣಹೊಂದಿದನು. ಹೀಗೆ ಯುದ್ಧವು ಕೊನೆಗೊಂಡು ಟಿಪ್ಪು ಸುಲ್ತಾನ್ ವಿರುದ್ಧ ನಿರ್ಣಾಯಕ ವಿಜಯವನ್ನು ಸಾಧಿಸಿದರು.
ಭೇಟಿ ನೀಡಿ








