ತ್ರಿವೇಣಿ ಸಂಗಮ

ಮಂಡ್ಯ ಸಂಗಮ ಅಥವಾ ತ್ರಿವೇಣಿ ಸಂಗಮವು ಮೂರು ಪವಿತ್ರ ನದಿಗಳಾದ ಕಾವೇರಿ ನದಿ, ಲೋಕಪಾವನಿ ನದಿ ಮತ್ತು ಹೇಮಾವತಿ ನದಿಗಳ ಸಂಗಮವಾಗಿದೆ. ಸಂಗಮವು ಮಂಡ್ಯದ ಶ್ರೀರಂಗಪಟ್ಟಣದಲ್ಲಿದೆ. ಈ ಸಂಗಮದ ಸ್ಥಳವು ತುಂಬಾ ಮಂಗಳಕರವೆಂದು ನಂಬಲಾಗಿದೆ ಮತ್ತು ದಂತಕಥೆಯ ಪ್ರಕಾರ, ಸಂಗಮದ ನೀರಿನಲ್ಲಿ ಸ್ನಾನ ಮಾಡುವುದರಿಂದ ಯಾವುದೇ ಪಾಪಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಸಂಗಮವು ಬೆಂಗಳೂರಿನಿಂದ 129 ಕಿ.ಮೀ ಮತ್ತು ಮಂಡ್ಯದಿಂದ 29 ಕಿ.ಮೀ ದೂರದ ಲ್ಲಿದೆ. ಹಾಗೂ ಮೈಸೂರಿನಿಂದ 18 ಕಿ.ಮೀ ಹಾಗೂ ಶ್ರೀ ರಂಗಪಟ್ಟಣದಿಂದ ಕೇವಲ 4.5 ಕಿ.ಮೀ ದೂರದಲ್ಲಿದೆ.

ಶ್ರೀರಂಗಪಟ್ಟಣಕ್ಕಿಂತ ಸ್ವಲ್ಪ ಮೊದಲು ಕಾವೇರಿ ನದಿಯು ಎರಡು ಭಾಗವಾಗಿ ಉತ್ತರ ಕಾವೇರಿ ಮತ್ತು ದಕ್ಷಿಣ ಕಾವೇರಿ ಯಾಗಿ ಸುಮಾರು ದೂರ ಹರಿದು ಮತ್ತೆ ಒಂದಾಗಿ ಸೇರುತ್ತದೆ. ಈ ಮದ್ಯೆ ಲೋಕಪಾವನಿ ಎಂಬ ನದಿಯು ಉತ್ತರ ಕಾವೇರಿ ನದಿಯೊಂದಿಗೆ ಸೇರುತ್ತದೆ.

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section