ಶಿರಾ ಕೋಟೆ (ಕಸ್ತೂರಿ ರಂಗಪ್ಪ ನಾಯಕ ಕೋಟೆ)ಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟಣದಲ್ಲಿ ಇರುವ ಐತಿಹಾಸಿಕ ಕೋಟೆಯಾಗಿದೆ. ಶಿರಾ ನಗರ ಮತ್ತು ಈ ಕೋಟೆಯನ್ನು ರತ್ನಗಿರಿ ಪಾಳೆಯಗಾರ ಕಸ್ತೂರಿ ರಂಗಪ್ಪ ನಾಯಕರು 17ನೇ ಶತಮಾನದಲ್ಲಿ ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ.
ನಂತರ ಆಡಳಿತಾಧಿಕಾರಿ ಮಲ್ಲಿಕ್ ಹುಸೇನ್ ಈ ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿದರು. ಅದರ ನಂತರ ಶಿರಾ ನವಾಬರು ಕೋಟೆಯನ್ನು ಅಭಿವೃದ್ಧಿಪಡಿಸಿದರು. ಕಸ್ತೂರಿ ರಂಗಪ್ಪ ನಾಯಕರ ಆಳ್ವಿಕೆಯ ನಂತರ, ಕೋಟೆ ಮತ್ತು ಶಿರಾ ಪ್ರಾಂತ್ಯವು ವಿವಿಧ ಆಡಳಿತಗಾರರ ನಿಯಂತ್ರಣಕ್ಕೆ ಒಳಪಟ್ಟಿತು.
ಕಸ್ತೂರಿ ರಂಗಪ್ಪ ನಾಯಕ ಕೋಟೆಯ ದೂರಗಳು
- ಬೆಂಗಳೂರು – 133 ಕಿ.ಮೀ
- ತುಮಕೂರು – 52 ಕಿ.ಮೀ
- ಸಿರಾ – 2 ಕಿ.ಮೀ
- ತುಮಕೂರು ರೈಲ್ವೆ ನಿಲ್ದಾಣ – 53 ಕಿ.ಮೀ
ಈ ಕೋಟೆಯ ಗೋಡೆಯು ಸುಮಾರು 7 ಮೀಟರ್ ಎತ್ತರವಾಗಿದ್ದು, 2.13 ಮೀಟರ್ ದಪ್ಪವಿದೆ. ಕೋಟೆಯ ಉತ್ತರ ದಿಕ್ಕಿನಲ್ಲಿ ಪ್ರವೇಶದ್ವಾರವಿದೆ. ಒಳಗಿನ ಆವರಣವನ್ನು ತಲುಪಲು ಮೂರು ದ್ವಾರಗಳಿದ್ದು, ಅವುಗಳೆಂದರೆ ದಿಡ್ಡಿ ಬಾಗಿಲು, ದ್ರಾವಿಡ ಶೈಲಿಯ ಕಂಬಗಳ ಬಾಗಿಲು ಹಾಗೂ ದಕ್ಷಿಣ ದಿಕ್ಕಿನ ಕೋಟೆಗೋಡಿಯಲ್ಲಿರುವ ಬಾಗಿಲು.
ಕೋಟೆಯ ಒಳಭಾಗದಲ್ಲಿ ಬಾವಿ, ವಸತಿಗೃಹಗಳು, ಮದ್ದಿನ ಮನೆ, ಕಣಜಗಳು ಹಾಗೂ ದೇವಾಲಯದಂತಹ ಕಟ್ಟಡಗಳಿವೆ.
ಈ ಕೋಟೆಯು ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದ್ದು, ಸುಮಾರು 197.5 ಎಕರೆ (79.9 ಹೆಕ್ಟೇರ್) ಪ್ರದೇಶದಲ್ಲಿ ವ್ಯಾಪಿಸಿದೆ. ಕೋಟೆಯನ್ನು ಸುತ್ತುವರಿದಂತೆ ಕಂದಕವೂ ಇದೆ.
ಸಿರಾ ಪ್ರದೇಶದ ಇತಿಹಾಸಕ್ಕೂ ಈ ಕೋಟೆ ಸಂಬಂಧಿಸಿದೆ ಎಂಬ ಉಲ್ಲೇಖಗಳಿವೆ. ಕೋಟೆಯು ಪೂರ್ಣಗೊಳ್ಳುವ ಮೊದಲು, ಶಿರಾ ಮತ್ತು ಅದರ ಪ್ರದೇಶಗಳನ್ನು ಬಿಜಾಪುರದ ಸೇನಾನಿ ರಂದೂಲ್ಲಾ ಖಾನ್ ಕಳುಹಿಸಿದ ಸೈನ್ಯ ವಶಪಡಿಸಿಕೊಂಡಿತು. ಅವನ ಅಧೀನದಲ್ಲಿದ್ದ ಅಫ್ಜಲ್ ಖಾನ್ ನೇತೃತ್ವದ ಸೇನೆ, ಸಿರಾ ಮುಖ್ಯಸ್ಥ ಕಸ್ತೂರಿ ರಂಗಪ್ಪ ನಾಯಕನನ್ನು ಸೋಲಿಸಿ ಕೊಂದಿತು.
ನಂತರ ರಾಜ್ಯಪಾಲರಾಗಿದ್ದ ಮಲಿಕ್ ಹುಸೇನ್ ಅವರು ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿ, ಪಟ್ಟಣವನ್ನು ಸುತ್ತುವರಿದ ಮಣ್ಣಿನ ಗೋಡೆಯನ್ನೂ ನಿರ್ಮಿಸಿದರು. ಈ ಕೋಟೆ ಬ್ರಿಟಿಷರ ವಶವಾದ ಸಂದರ್ಭದಲ್ಲಿ ನಿಯೋಜಿತ ಅಧಿಕಾರಿಗಳ ಸಮಾಧಿಗಳ ಮೇಲೆ 14-03-1800 ಎಂಬ ಮರಣ ದಿನಾಂಕವೂ ಉಲ್ಲೇಖಿಸಲಾಗಿದೆ.
ಭೇಟಿ ನೀಡಿ





