ಕೈದಾಳ ಗಂಗಾಧರೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಕೈದಾಳ ಗ್ರಾಮದಲ್ಲಿ ಇರುವ ಐತಿಹಾಸಿಕ ದೇವಾಲಯವಾಗಿದೆ.
ಸುಮಾರು ಕ್ರಿ.ಶ. 1152ರಲ್ಲಿ ಹೊಯ್ಸಳರ ಸಾಮಂತ ಬಾಚಿದೇವನ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ದ್ರಾವಿಡ ಮತ್ತು ಹೊಯ್ಸಳ ಶೈಲಿಗಳ ಸಂಯೋಜನೆಯಲ್ಲಿ ನಿರ್ಮಿತವಾಗಿರುವ ಈ ದೇವಾಲಯವು ಉತ್ಕೃಷ್ಟ ಮಟ್ಟದ ಕಲಾ ವೈಭವವನ್ನು ಹೊಂದಿದ ವಿಶೇಷ ದೇವಾಲಯವಾಗಿದೆ.
ಕೈದಾಳ ಶ್ರೀ ಗಂಗಾಧರೇಶ್ವರ ದೇವಸ್ಥಾನದ ದೂರಗಳು
- ಬೆಂಗಳೂರು – 73 ಕಿ.ಮೀ
- ತುಮಕೂರು – 8 ಕಿ.ಮೀ
- ತುಮಕೂರು ರೈಲ್ವೆ ನಿಲ್ದಾಣ – 8 ಕಿ.ಮೀ
ಕೈದಾಳ ಗಂಗಾಧರೇಶ್ವರ ದೇವಾಲಯದ ಪೂರ್ವ ಭಾಗದಲ್ಲಿರುವ ಗಂಗಾಧರೇಶ್ವರ ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದ್ದು, ಇದರ ನವರಂಗದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲಾದ ಕಂಬಗಳಿವೆ.
ಈ ಕಂಬಗಳ ಕೆಳಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಬ್ರಹ್ಮ, ವಿಷ್ಣು, ಭೈರವ, ಕೃಷ್ಣ, ಗಣಪತಿ ಹಾಗೂ ವೀರಭದ್ರ ದೇವತೆಗಳ ಶಿಲ್ಪಗಳನ್ನು ಕೆತ್ತಲಾಗಿದೆ. ನವರಂಗದ ಹೊರವಲಯದ ನಾಲ್ಕು ಗೋಡೆಗಳ ಮೇಲೆ ಆನೆಗಳು ಮತ್ತು ಹೂವಿನ ಅಲಂಕಾರಿಕ ಚಿತ್ರಣಗಳನ್ನು ಕೆತ್ತಲಾಗಿದೆ.
ಭೇಟಿ ನೀಡಿ




