ಶ್ರೀ ಗಂಗಾಧರೇಶ್ವರ ದೇವಸ್ಥಾನ ಕೈದಾಳ

ಕೈದಾಳ ಗಂಗಾಧರೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಕೈದಾಳ ಗ್ರಾಮದಲ್ಲಿ ಇರುವ ಐತಿಹಾಸಿಕ ದೇವಾಲಯವಾಗಿದೆ.

ಸುಮಾರು ಕ್ರಿ.ಶ. 1152ರಲ್ಲಿ ಹೊಯ್ಸಳರ ಸಾಮಂತ ಬಾಚಿದೇವನ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ದ್ರಾವಿಡ ಮತ್ತು ಹೊಯ್ಸಳ ಶೈಲಿಗಳ ಸಂಯೋಜನೆಯಲ್ಲಿ ನಿರ್ಮಿತವಾಗಿರುವ ಈ ದೇವಾಲಯವು ಉತ್ಕೃಷ್ಟ ಮಟ್ಟದ ಕಲಾ ವೈಭವವನ್ನು ಹೊಂದಿದ ವಿಶೇಷ ದೇವಾಲಯವಾಗಿದೆ.

ಕೈದಾಳ ಶ್ರೀ ಗಂಗಾಧರೇಶ್ವರ ದೇವಸ್ಥಾನದ ದೂರಗಳು

  • ಬೆಂಗಳೂರು – 73 ಕಿ.ಮೀ
  • ತುಮಕೂರು – 8 ಕಿ.ಮೀ
  • ತುಮಕೂರು ರೈಲ್ವೆ ನಿಲ್ದಾಣ – 8 ಕಿ.ಮೀ

ಕೈದಾಳ ಗಂಗಾಧರೇಶ್ವರ ದೇವಾಲಯದ ಪೂರ್ವ ಭಾಗದಲ್ಲಿರುವ ಗಂಗಾಧರೇಶ್ವರ ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದ್ದು, ಇದರ ನವರಂಗದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲಾದ ಕಂಬಗಳಿವೆ.

ಈ ಕಂಬಗಳ ಕೆಳಭಾಗದಲ್ಲಿ ನಾಲ್ಕು ದಿಕ್ಕುಗಳಲ್ಲಿ ಬ್ರಹ್ಮ, ವಿಷ್ಣು, ಭೈರವ, ಕೃಷ್ಣ, ಗಣಪತಿ ಹಾಗೂ ವೀರಭದ್ರ ದೇವತೆಗಳ ಶಿಲ್ಪಗಳನ್ನು ಕೆತ್ತಲಾಗಿದೆ. ನವರಂಗದ ಹೊರವಲಯದ ನಾಲ್ಕು ಗೋಡೆಗಳ ಮೇಲೆ ಆನೆಗಳು ಮತ್ತು ಹೂವಿನ ಅಲಂಕಾರಿಕ ಚಿತ್ರಣಗಳನ್ನು ಕೆತ್ತಲಾಗಿದೆ.

ಭೇಟಿ ನೀಡಿ
ತುಮಕೂರು ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section