ನರಗುಂದ

ನರಗುಂದವು ಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ನರಗುಂದ ತಾಲೂಕಿನಲ್ಲಿ ಇರುವ ಒಂದು ಬೆಟ್ಟವಾಗಿದೆ. ನರಗುಂದ ಗುಡ್ಡವು ನೋಡಲು ಮಲಗಿದ ಸಿಂಹದಂತೆ ಇದೆ. ಗುಡ್ಡದ ಮೇಲೆ ಸಿದ್ದೇಶ್ವರ ದೇವಸ್ಥಾನ ಇದೆ ಮತ್ತು ಇಳಿಜಾರಿನಲ್ಲಿ ಬೃಹತ್ತಾದ ವೆಂಕಟೇಶ್ವರ ದೇವಾಲಯವಿದ್ದು, ಈ ದೇವಾಲಯವು ದ್ರಾವಿಡ ಶೈಲಿಯಲ್ಲಿವೆ.

ಈ ಸ್ಥಳವು ಬೆಂಗಳೂರಿನಿಂದ 475 ಕಿಮೀ ಮತ್ತು ಗದಗ ನಗರದಿಂದ 50.3 ಕಿಮೀ ದೂರದಲ್ಲಿದೆ.

ನರಗುಂದದ ಇತಿಹಾಸ

ನರಗುಂದದಲ್ಲಿ ಚಾಳುಕ್ಯ 3ನೆಯ ಸೋಮೇಶ್ವರ, 02ನೆಯ ಜಗದೇಕಮಲ್ಲ ಮತ್ತು 03ನೆಯ ತೈಲರ ಶಾಸನಗಳಿವೆ. ಆ ಕಾಲದಲ್ಲಿ ನರಗುಂದವು ಒಂದು ಅಗ್ರಹಾರವಾಗಿತ್ತು. ಇದು ನಂತರ 220 ಮಹಾಜನರ ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಗುಡ್ಡದ ಮೇಲಿನ ಕೋಟೆಯನ್ನು ಮರಾಠ ಛತ್ರಪತಿ ಶಿವಾಜಿ ಮಹಾರಾಜ 1674 ರಲ್ಲಿ ಕಟ್ಟಿಸಿದ. 1785ರಲ್ಲಿ ನರಗುಂದದ ಕೋಟೆ ಟಿಪ್ಪುವಿಗೆ ವಶವಾಯಿತು. ನಂತರ ಮರಾಠಾ ಪೇಶ್ವೆ 1818ರಲ್ಲಿ ದಾದಾಜಿರಾವ್ ಅಪ್ಪನಿಗೆ ನರಗುಂದವನ್ನು ಕೊಟ್ಟ.

ನರಗುಂದವನ್ನು 18 ನೇ ಶತಮಾನದಲ್ಲಿ ಪುಣೆಯ ಮರಾಠ ಪೇಶ್ವೆಗಳ ಪರವಾಗಿ 18 ನೇ ಶತಮಾನದಲ್ಲಿ ಭಾವೆ ರಾಜವಂಶದ ವೆಂಕಟರಾವ್ ಆಳುತ್ತಿದ್ದನು. ಮೈಸೂರಿನ ಹೈದರ್ ಆಲಿಯು, 1778 ರಲ್ಲಿ ಅದನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿದನು. 1784 ರಲ್ಲಿ ಟಿಪ್ಪು ಸುಲ್ತಾನ್ ನರಗುಂದದ ಮೇಲೆ ದಾಳಿ ಮಾಡಿದನು. ಮರಾಠರು ಮತ್ತು ಭಾವೆ ಪರಿವಾರ ಮತ್ತು ಅವರ ಲೆಕ್ಕಿಗರಾಗಿದ್ದ ಪೇಠೆ ಪರಿವಾರಗಳು ಟಿಪ್ಪು ಮತ್ತು ಅವರ ಸಹಚರರ ಕೈಯಲ್ಲಿ ಕ್ರೂರ ಚಿತ್ರಹಿಂಸೆ ಮತ್ತು ಅತ್ಯಾಚಾರಗಳ ಮೂಲಕ ತೇಜೋವಧೆ ಹೊಂದಿದರು. ಅವರನ್ನು 1799ರಲ್ಲಿ ಬಿಡುಗಡೆ ಮಾಡುವವರೆಗೆ ಅವರು ಮೈಸೂರಿನ ಜೈಲಿನಲ್ಲಿ ಇರಬೇಕಾಯಿತು. ನಂತರ ಅವರು ನರಗುಂದಕ್ಕೆ ಮರಳಿದರು.

ಬ್ರಿಟಿಷ್ ಅಧಿಪತ್ಯದ ವಿರುದ್ಧ ದೇಶದಲ್ಲಿ 1857 ಮೇ 10ರಂದು ನಡೆದ ಮೊದಲ ಹೋರಾಟದ ಸಮಯದಲ್ಲೇ ಬಾಬಾಸಾಹೇಬನ ಮುಂದಾಳುತನದಲ್ಲಿ ಬ್ರಿಟಿಷ್ ಆಳಿಕೆಯ ವಿರುದ್ಧ ಹೋರಾಟದ ಧ್ವನಿ ಮೊಳಗಿತು.

ದಾದಾಜಿರಾಯನ ವಂಶದ ಬಾಬಾಸಾಹೇಬನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ಸ್ವೀಕರಿಸಲು ಇಚ್ಛಿಸಿದಾಗ ಬ್ರಿಟಿಷರು ಅದಕ್ಕೆ ಅವಕಾಶ ನೀಡಲಿಲ್ಲ. ಬಾಬಾಸಾಹೇಬ ಇದನ್ನು ಪ್ರತಿಭಟಿಸಿ ಬಂಡೆದ್ದ. ಭಾರತದ 1857ರ ಬಂಡಾಯದಲ್ಲಿ ನರಗುಂದ ಪ್ರಧಾನಪಾತ್ರ ವಹಿಸಿತ್ತು. ಆಗ ಬ್ರಿಟಿಷರು ನಡೆಸಿದ ಆಕ್ರಮಣವನ್ನು ಇಲ್ಲಿಯವರು ಕೆಚ್ಚಿನಿಂದ ಎದುರಿಸಿದರು. 1858ರಲ್ಲಿ ಬ್ರಿಟಿಷರು ಬಾಬಾಸಾಹೇಬನನ್ನು ಮಣಿಸಿ ಕೋಟೆಯನ್ನು ಕೆಡವಿದರು.

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section