ಶ್ರೀ ವೀರನಾರಾಯಣ ದೇವಸ್ಥಾನ

ಶ್ರೀ ವೀರನಾರಾಯಣ ದೇವಾಲಯವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಗದಗ ತಾಲೂಕಿನ ಹೃದಯಭಾಗದಲ್ಲಿ ಇರುವ, ಕ್ರಿ.ಶ. 1117ರಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನರಿಂದ ನಿರ್ಮಿಸಲ್ಪಟ್ಟ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಪ್ರಧಾನ ದೇವತೆ ಹಿಂದೂ ದೇವರು ನಾರಾಯಣ ಅಥವಾ ವಿಷ್ಣುವರ್ಧನನೆಂದು ಕರೆಯುತ್ತಾರೆ.

ಈ ದೇವಾಲಯವು ಬೆಂಗಳೂರಿನಿಂದ 417 ಕಿ.ಮೀ ಮತ್ತು ಹುಬ್ಬಳ್ಳಿ ನಗರದಿಂದ 59 ಕಿ.ಮೀ ದೂರದಲ್ಲಿದೆ. ಗದಗ ನಗರದಿಂದ ರಸ್ತೆಮಾರ್ಗವಾಗಿ 4 ಕಿ.ಮೀ ಹಾಗೂ ರೈಲ್ವೆಮಾರ್ಗವಾಗಿ 2 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಪ್ರತಿದಿನ ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ತೆರೆದಿರುತ್ತದೆ.

ಇತಿಹಾಸ

ಇತಿಹಾಸವು ಹೇಳುವುದೇನಂದರೆ, ರಾಮಾನುಜಾಚಾರ್ಯರು ಹೊಯ್ಸಳ ರಾಜಕುಮಾರ ಬಿಟ್ಟಿದೇವನನ್ನು ಕಾಯಿಲೆಯಿಂದ ಗುಣಪಡಿಸಿದಾಗ, ಬಿಟ್ಟಿದೇವನು ಅವರ ಪ್ರಭಾವಕ್ಕೆ ಒಳಗಾಗಿ ತನ್ನ ಹೆಸರನ್ನು ವಿಷ್ಣುವರ್ಧನ ಎಂದು ಬದಲಾಯಿಸಿಕೊಂಡನು. ಹಾಗೆಯೇ, ತನ್ನ ಜೈನ ಧರ್ಮವನ್ನು ತ್ಯಜಿಸಿ ಶ್ರೀವೈಷ್ಣವ ಪಂಥಕ್ಕೆ ಸೇರಿದ ಬಿಟ್ಟಿದೇವನು ರಾಮಾನುಜಾಚಾರ್ಯರ ಶಿಷ್ಯನಾದನು. ಹೊಯ್ಸಳ ದೊರೆ ಬಿಟ್ಟಿದೇವನು ಶ್ರೀ ರಾಮಾನುಜಾಚಾರ್ಯರಿಂದ ದೀಕ್ಷೆ ಪಡೆದು ವೈಷ್ಣವನಾದ ನಂತರ, ಗುರುಗಳ ನಿರ್ದೇಶನಾನುಸಾರ ಕ್ರಿ.ಶ. 1117ರಲ್ಲಿ ಶ್ರೀ ವೀರನಾರಾಯಣ ದೇವಾಲಯವನ್ನು ನಿರ್ಮಿಸಿದನು ಎಂದು ಪ್ರತೀತಿ ಇದೆ. ಬಿಟ್ಟಿದೇವನು ಕಟ್ಟಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ಇದೂ ಒಂದು. ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಶಿಲ್ಪಕಲೆಗಳ ಸುಂದರ ಸಂಗಮವೇ ಶ್ರೀ ವೀರನಾರಾಯಣ ದೇವಾಲಯವಾಗಿದೆ.

ವೀರನಾರಾಯಣ ದೇವಾಲಯವು ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ವಾಸ್ತುಶಿಲ್ಪ ಶೈಲಿಗಳ ವಿಭಿನ್ನ ರಾಜಕಾಲಗಳ ಸಮ್ಮಿಲನವಾಗಿದೆ. ವಿಜಯನಗರ ಶೈಲಿಯ ಪ್ರವೇಶಪ್ರಾಂಗಣವು ಹೊಯ್ಸಳ ಶೈಲಿಯ ವಿಶಿಷ್ಟ ಗರುಡಸ್ತಂಭದೊಂದಿಗೆ ರಂಗಮಂಟಪಕ್ಕೆ ಸಂಪರ್ಕ ಹೊಂದುತ್ತದೆ. ಒಳಮಂಟಪ, ಗರ್ಭಗುಡಿ ಮತ್ತು ಮುಖ್ಯಗೋಪುರವು ಚಾಲುಕ್ಯ ಶೈಲಿಯಲ್ಲಿಯೇ ನಿರ್ಮಿಸಲಾಗಿದೆ.

ಅತ್ಯಂತ ಹಳೆಯ ವಿಭಾಗವು ವೀರನಾರಾಯಣ ದೇವಾಲಯವಾಗಿದೆ. ವಾಸ್ತವವಾಗಿ, ಪಾಶ್ಚಾತ್ಯ ಚಾಲುಕ್ಯರು ಅಭ್ಯಾಸ ಮಾಡಿದ್ದ ಕಲಾ ಶೈಲಿಯನ್ನು ಕೆಲವೊಮ್ಮೆ “ಗದಗ ಶೈಲಿ” ಎಂದು ಕರೆಯಲಾಗುತ್ತದೆ. ಚಾಲುಕ್ಯ ಸಾಮ್ರಾಜ್ಯವು ನೂರಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಿಸಿತು, ಅವುಗಳಲ್ಲಿ ಹೆಚ್ಚಿನವು ಕರ್ನಾಟಕದಲ್ಲಿವೆ. ನಂತರದ ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯಗಳು ಈ ಕಲಾತ್ಮಕ ಮೌಲ್ಯಗಳಿಂದ ಪ್ರಭಾವಿತವಾದವು.

ಭೇಟಿ ನೀಡಿ
ಗದಗ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section