ಸಾದಹಳ್ಳಿ ಕ್ವಾರಿ ದೇವಸ್ಥಾನ

ಸಾದಹಳ್ಳಿ ಕ್ವಾರಿ ದೇವಸ್ಥಾನವು ಬೆಂಗಳೂರಿನ ಹೊರವಲಯದಲ್ಲಿರುವ ದೂರದ ಪ್ರದೇಶವಾದ ಸಾದಹಳ್ಳಿಯಲ್ಲಿದೆ, ಇದು ಕ್ವಾರಿ ಚಟುವಟಿಕೆ ಯಿಂದಾಗಿ ಸ್ವಲ್ಪ ಜನಪ್ರಿಯತೆಯನ್ನು ಗಳಿಸಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಸಾದಹಳ್ಳಿಯಲ್ಲಿ ವಿಶಾಲವಾದ ಕ್ವಾರಿಯ ನಡುವೆ ಈ ದೇವಾಲಯ ಇದೆ.

ಇದು ಬೆಂಗಳೂರು ನಗರದಿಂದ 29 ಕಿ.ಮೀ ಮತ್ತು ದೇವನಹಳ್ಳಿಯ ನಗರದಿಂದ 12 ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಹಾಗೂ ವಿಮಾನ ನಿಲ್ದಾಣದ ಟೋಲ್ ಗೇಟ್‌ನಿಂದ ಕೇವಲ 05 ಕಿ.ಮೀ ದೂರದಲ್ಲಿದೆ.

ಈ ಕ್ವಾರಿ ಭಾಗದ ಜಾಗದಲ್ಲಿ ಅಪಾರ ಪ್ರಮಾಣದ ಭೂಮಿಯನ್ನು ಕ್ವಾರಿಯ 200 ಮೀಟರ್ ಆಳದವರೆಗೆ ಅಗೆಯಲಾಗಿದೆ, ಈ ದೇವಾಲಯವು ನಿಮ್ಮ ಸಾಮಾನ್ಯ ದೇವಾಲಯಕ್ಕಿಂತ ಭಿನ್ನವಾಗಿದೆ. ಅದು ಈಗ ಗ್ರಾನೈಟ್ ಗೋಪುರದಂತೆ ಕಾಣುತ್ತದೆ. ಕ್ವಾರಿಯ ಮಧ್ಯಭಾಗದಲ್ಲಿದ್ದ ದೇವಸ್ಥಾನವನ್ನು ಹಾಗೆಯೇ ಯಥಾಸ್ಥಿತಿಯಲ್ಲಿ ಬಿಡಲಾಗಿದೆ ಎಂದು ತಿಳಿದಾಗ ಇನ್ನೂ ಆಶ್ಚರ್ಯವಾಗುತ್ತದೆ. ಇದು ಶಿವನ ಅಭಿವ್ಯಕ್ತಿಯಾದ ಮುನೇಶ್ವರ ದೇವರಿಗೆ ಮುಡಿಪಾದ ಕ್ವಾರಿ ಗುಡಿ ನೀಲಿ ಬಣ್ಣದ ದೇವಾಲಯವು ಮೂಲ ಬೆಟ್ಟದ ಮೇಲೆ ಇನ್ನೂ ನಿಂತಿದೆ. ಕ್ವಾರಿಯ ಮಧ್ಯಭಾಗದಲ್ಲಿರುವ ಈ ದೇವಾಲಯಕ್ಕೆ ಕಲ್ಲುಗಣಿಯಾ ಗಡಿಯಿಂದ ಸಂಪರ್ಕಿಸಲು ದಾರಿಯಿದೆ.

ಸಾದಹಳ್ಳಿಯಲ್ಲಿ ವಿಶಾಲವಾದ ಕ್ವಾರಿಯ ಮಧ್ಯೆ ಕಲ್ಲುಗಣಿ ದೇವಸ್ಥಾನ. ಸದಹಳ್ಳಿಯು ಗ್ರಾನೈಟ್ ಕ್ವಾರಿಗೆ ಹೆಸರುವಾಸಿಯಾಗಿದೆ ಅದು ಈಗ ಗ್ರಾನೈಟ್ ಗೋಪುರದಂತೆ ಕಾಣುತ್ತದೆ. ಇದು ಖಾಸಗಿ ಆಸ್ತಿಯಾಗಿದೆ, ಆದರೆ ದೇವಸ್ಥಾನವಿರುವುದರಿಂದ, ನೀವು ಇನ್ನೂ ಈ ಸ್ಥಳಕ್ಕೆ ಪ್ರವೇಶವನ್ನು ಪಡೆಯಬಹುದು.

ದೇವಸ್ಥಾನಕ್ಕೆ ಹೋಗಲು ಒಂದು ಚಿಕ್ಕ ಮೂರು ಅಡಿ ಅಗಲದ ಸೇತುವೆಯಂತೆ ಕಾಣುವ ಗ್ರಾನೈಟ್ ಗೋಡೆ ಇದೆ. ಸೇತುವೆಯ ಮೇಲೀನ ನಡಿಗೆ ಸ್ವಲ್ಪ ಭಯಾನಕವಾಗಿದೆ ಮತ್ತು ದೇವಾಲಯವನ್ನು ತಲುಪಲು ಒಬ್ಬಬ್ಬರಾಗಿ ನಡೆದುಕೊಂಡು ಹೋಗ ಬಹುದು. ನಗರದ ಎತ್ತರದ ಸ್ಥಳವಾದುದರಿಂದ ಗದ್ದಲವನ್ನು ತಪ್ಪಿಸಿಕೊಳ್ಳಲು ಮತ್ತು ಇಲ್ಲಿಂದ ನಗರವನ್ನು ವೀಕ್ಷಿಸಲು ಉತ್ತಮ ಸ್ಥಳ ವಾಗಿದೆ. ಈ ಸ್ಥಳವು ನಿಮಗೆ ಶಾಂತಿಯನ್ನು ತರುತ್ತದೆ.

ಕ್ವಾರಿಯಲ್ಲಿ ಮಳೆ ಬಂದಾಗ ಸಂಗ್ರಹವಾದ ನೀರು ಕಲ್ಯಾಣಿಯ ರೂಪದಲ್ಲಿ ಸಣ್ಣ ಸಣ್ಣ ಕೊಳಗಳಂತೆ ಎರಡು ಪಕ್ಕಗಳಲ್ಲಿ ಸೃಷ್ಟಿಯಾಗಿದೆ ಮತ್ತು ಗ್ರಾನೈಟ್‌ನ ಬಿಳಿಯ ಬಣ್ಣದಿಂದ ಇಡೀ ಸ್ಥಳವು ತುಂಬಾ ರಮಣೀಯವಾಗಿದೆ.

ಭೇಟಿ ನೀಡಿ
ದೇವನಹಳ್ಳಿ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು