ಗುರುದ್ವಾರ ಪ್ಯಾರೆ ಭಾಯಿ ಸಾಹಿಬ್ ಸಿಂಗ್ ಜಿ

ಗುರುದ್ವಾರ ಶ್ರೀ ಭಾಯಿ ಸಾಹಿಬ್ ಸಿಂಗ್ ಮಂದಿರವು ಭಾಯಿ ಸಾಹಿಬ್ ಸಿಂಗ್ ಅವರ ಸ್ಮರಣಾರ್ಥ ನಿರ್ಮಿಸಲ್ಪಟ್ಟಿದ್ದು, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಜನವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸಿಖ್ ಮಂದಿರವಾಗಿದೆ.

ಈ ಮಂದಿರವು ಬೆಂಗಳೂರಿನಿಂದ 790 ಕಿ.ಮೀ (NH50 — ಕರ್ನಾಟಕದ ಮೂಲಕ), 689 ಕಿ.ಮೀ (NH44 — ಹೈದರಾಬಾದ್ ಮೂಲಕ), ಕೇಂದ್ರ ಬಸ್ ನಿಲ್ದಾಣ ಬೀದರ್ ನಿಂದ 9 ಕಿ.ಮೀ ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 120ಕಿ.ಮೀ ದೂರದಲ್ಲಿ ಇದೆ.

ಭಾಯಿ ಸಾಹಿಬ್ ಸಿಂಗ್ ಪಂಜ್ ಪ್ಯಾರೆ (ಐದು ಪ್ರೀತಿಪಾತ್ರರು)ರಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಹಿಂದೆ ಸಾಹಿಬ್ ಚಂದ್ ಎಂದು ಕರೆಯಲಾಗುತ್ತಿತ್ತು. 16ನೇ ವಯಸ್ಸಿನಲ್ಲಿ ಆನಂದಪುರದಲ್ಲಿ ಖಾಲ್ಸಾಗೆ ದೀಕ್ಷೆ ಪಡೆದ ಮೊದಲಿಗರಲ್ಲೊಬ್ಬರು. ಭಾಯಿ ಸಾಹಿಬ್ ಸಿಂಗ್ ನಾಯ್ (ಕ್ಷೌರಿಕ) ಕುಟುಂಬಕ್ಕೆ ಸೇರಿದವರಾಗಿದ್ದರು.

ಸಾಹಿಬ್ ಸಿಂಗ್ ಅವರ ಜನ್ಮಸ್ಥಳ ಮತ್ತು ಕುಟುಂಬ ಸದಸ್ಯರ ಬಗ್ಗೆ ವಿಭಿನ್ನ ಆವೃತ್ತಿಗಳಿವೆ. ಎಲ್ಲರೂ ಒಪ್ಪಿಕೊಂಡಿರುವ ಅಂಶವೆಂದರೆ, ಅವರು ನಾಯ್ ಕುಟುಂಬದಲ್ಲಿ ಜನಿಸಿದರು. ಅವರ ಜನ್ಮಸ್ಥಳವನ್ನು ಕುರಿತು ಪ್ರಸಿದ್ಧ ನಂಬಿಕೆಯಂತೆ, ಭಾಯಿ ಸಾಹಿಬ್ ಸಿಂಗ್ ಬೀದರ್ ಅಥವಾ ಅದರ ಹತ್ತಿರದ ಪ್ರದೇಶದಲ್ಲಿ ಜನಿಸಿದರು.

ಭಾಯಿ ಸಾಹಿಬ್ ಸಿಂಗ್ ತಮ್ಮ ಶೂರತ್ವಕ್ಕೆ ಪ್ರಸಿದ್ಧರಾದರು. ಆನಂದಪುರದಲ್ಲಿ ನಡೆದ ಯುದ್ಧದಲ್ಲಿ, ಅವರು ಗುಜ್ಜರ್ ಮುಖ್ಯಸ್ಥ ಜಮಾತುಲ್ಲಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರೆಂದು ಹೇಳಲಾಗುತ್ತದೆ. ಮತ್ತೊಂದು ಕಾರ್ಯಾಚರಣೆಯಲ್ಲಿ, ಹಿಂದೂರ್ ರಾಜ ಭೂಪ್ ಚಂದ್ ಮಸ್ಕೆಟ್‌ನ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡನು. ಇದರಿಂದ ಇಡೀ ಬೆಟ್ಟದ ಸೈನ್ಯವು ಮೈದಾನದಿಂದ ಓಡಿಹೋಯಿತು.

1699 ರ ಮಾರ್ಚ್ 30 ರ ವೈಶಾಖಿ ದಿನದಂದು ಗುರು ಗೋಬಿಂದ್ ಸಿಂಗ್ ಅವರ ಕರೆಯನ್ನು ಅನುಸರಿಸಿ ತಲೆತಪ್ಪಿಸಲು ಮುಂದಾದ ಐದು ಸಿಖ್ಖರಲ್ಲಿ ಭಾಯಿ ಸಾಹಿಬ್ ಸಿಂಗ್ ಒಬ್ಬರು. ಅವರನ್ನು ಗುರು ಗೋಬಿಂದ್ ಸಿಂಗ್ ತಮ್ಮ ಐವರು ಪ್ರೀತಿಪಾತ್ರರೆಂದು ಸ್ವಾಗತಿಸಿದರು. ಈ ಐವರು ಖಾಲ್ಸಾದ ಕೇಂದ್ರಬಿಂದುವಾಗಿದ್ದರು. ಖಾಲ್ಸಾದ ವಿಧಿವಿಧಾನಗಳನ್ನು ಅನುಸರಿಸಿದ ನಂತರ ಸಾಹಿಬ್ ಚಂದ್, ಸಾಹಿಬ್ ಸಿಂಗ್ ಆದರು, ಖಾಲ್ಸಾದ ಎಲ್ಲಾ ಸದಸ್ಯರಿಗೆ ಸಾಮಾನ್ಯವಾದ ಸಿಂಗ್ ಎಂಬ ಬಿರುದನ್ನು ಪಡೆದರು.

ಭೇಟಿ ನೀಡಿ
ಬೀದರ್ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section