ದೇವರಬೆಳಕೆರೆ ಅಣೆಕಟ್ಟು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಗ್ರಾಮದ ಸಮೀಪದಲ್ಲಿರುವ ಅಣೆಕಟ್ಟಾಗಿದೆ. ಈ ಅಣೆಕಟ್ಟಿನ ಮೂಲಕ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ.
ದೇವರಬೆಳಕೆರೆ ಅಣೆಕಟ್ಟಿನ ದೂರಗಳು
- ಬೆಂಗಳೂರು – 270 ಕಿ.ಮೀ
- ದಾವಣಗೆರೆ – 15 ಕಿ.ಮೀ
- ಹರಿಹರ – 15 ಕಿ.ಮೀ
- ಹರಿಹರ ರೈಲ್ವೆ ನಿಲ್ದಾಣ – 15 ಕಿ.ಮೀ
ದೇವರಬೆಳಕೆರೆ ಅಣೆಕಟ್ಟಿನ ನಿರ್ಮಾಣವು 1978–79ರಲ್ಲಿ ಪ್ರಾರಂಭವಾಗಿ, 1986–87ರಲ್ಲಿ ಪೂರ್ಣಗೊಂಡಿತು. ಶ್ಯಾಗಳೆ ಹಳ್ಳ ಮತ್ತು ಸೂಳೆಕೆರೆ ಹಳ್ಳ ಎಂಬ ಎರಡು ಸ್ಥಳೀಯ ಹೊಳೆಗಳ ಸಂಗಮದಿಂದ ರೂಪುಗೊಂಡ ಜಲಾಶಯದ ಮೇಲೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ನಂತರ ಈ ಅಣೆಕಟ್ಟಿನಿಂದ ಬಿಡುಗಡೆಯಾಗುವ ನೀರು ಹರಿದ್ರ ನದಿಯಾಗಿ ಹರಿದು, ಹರಿಹರದಲ್ಲಿ ತುಂಗಭದ್ರ ನದಿಯನ್ನು ಸೇರುತ್ತದೆ.
ದೇವರಬೆಳಕೆರೆ ಅಣೆಕಟ್ಟು ಮತ್ತು ಜಲಾಶಯವು ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ನ ಒಡೆತನದಲ್ಲಿದ್ದು, ಅದರ ನಿರ್ವಹಣೆಯಲ್ಲಿದೆ. ಈ ಅಣೆಕಟ್ಟಿನ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ.

ಈ ಅಣೆಕಟ್ಟು ಒಟ್ಟು 2286.08 ಚದರ ಕಿಲೋಮೀಟರ್ (893 ಚದರ ಮೈಲಿ) ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಜಲಾನಯನ ಪ್ರದೇಶದಲ್ಲಿ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 609 ಮಿಮೀ (24 ಇಂಚುಗಳು) ಆಗಿದೆ. ಜಲಾನಯನ ಪ್ರದೇಶದಿಂದ ಲಭ್ಯವಾಗುವ 75% ವಿಶ್ವಾಸಾರ್ಹತೆಯ ಸರಾಸರಿ ವಾರ್ಷಿಕ ನೀರಿನ ಇಳುವರಿ 216.34 MCM (7.64 TMC) ಆಗಿದ್ದು, ಇದರಲ್ಲಿ 45.56 MCM (1.609 TMC) ನೀರನ್ನು 4280 ಹೆಕ್ಟೇರ್ (10,576 ಎಕರೆ) ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಮಾಡಲು ಬಳಸಲಾಗುತ್ತದೆ.
ಭೇಟಿ ನೀಡಿ




