ಪ್ರಾಚೀನ ಹೊಯ್ಸಳ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಭಾನುವಳ್ಳಿ

ಭಾನುವಳ್ಳಿಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನವು ಹೊಯ್ಸಳರ ಕಾಲದ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದಲ್ಲಿದೆ. ಈ ದೇವಾಲಯವು ನಯನಮನೋಹರವಾಗಿದ್ದು, ಇಲ್ಲಿ ಇರುವ ಪುರಾತನ ದೇವರ ಮೂರ್ತಿಯು ಎತ್ತರವಾಗಿಯೂ ಅತ್ಯಂತ ಸುಂದರವಾಗಿಯೂ ಹಾಗೂ ಆಕರ್ಷಕವಾಗಿಯೂ ಕಾಣಿಸುತ್ತದೆ.

ಭಾನುವಳ್ಳಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ ದೂರಗಳು

  • ಬೆಂಗಳೂರು – 282 ಕಿ.ಮೀ
  • ದಾವಣಗೆರೆ – 24 ಕಿ.ಮೀ
  • ಹರಿಹರ – 13 ಕಿ.ಮೀ
  • ಹರಿಹರ ರೈಲ್ವೆ ನಿಲ್ದಾಣ – 14 ಕಿ.ಮೀ

ಹೊಯ್ಸಳ ಚಕ್ರವರ್ತಿ ಇಮ್ಮಡಿ ನರಸಿಂಹನ ಮೊಮ್ಮಗನಾದ ವೀರ ಸೋಮೇಶ್ವರನ ಪ್ರಧಾನ ದಂಡನಾಯಕನಾಗಿದ್ದ ನಾರಾಯಣಪುರದ ಅತ್ತಿರಾಜ ಮತ್ತು ನಿವಿಲಾಡೆಯಕ್ಕರ ಪುತ್ರ ಪೂಳಾಲ್ವ ದಂಡನಾಥನು ಕ್ರಿ.ಶ. 1223ರಲ್ಲಿ ಶ್ರೀ ಲಕ್ಷ್ಮೀನಾರಾಯಣಪುರ ಗ್ರಾಮ ಹಾಗೂ ಶ್ರೀ ಲಕ್ಷ್ಮೀನಾರಾಯಣ ದೇವಾಲಯವನ್ನು ನಿರ್ಮಿಸಿದನೆಂಬ ಶಿಲಾಶಾಸನವನ್ನು ಇಂದಿಗೂ ಇಲ್ಲಿ ಕಾಣಬಹುದು.

ಪೂಳಾಲ್ವನ ಮಗಳು ಇಲ್ಲಿ ವಾಸವಾಗಿದ್ದರಿಂದ, ಆಕೆಗಾಗಿ ದೇವಾಲಯವನ್ನು ನಿರ್ಮಿಸಿದ ನಂತರ ಈ ಸ್ಥಳವು “ಭಾನುಮತಿ ಪಟ್ಟಣ”ವೆಂದು ಪ್ರಸಿದ್ಧಿಯಾಯಿತು ಎಂದು ಹೇಳಲಾಗುತ್ತದೆ. ಇಲ್ಲಿನ ಶಾಸನಗಳಲ್ಲಿ ಈ ದೇವಾಲಯ ಹಾಗೂ “ಶ್ರೀ ಲಕ್ಷ್ಮೀನಾರಾಯಣಪುರ” ಅಥವಾ “ಭಾನುವಳ್ಳಿ” ಎಂಬ ಉಲ್ಲೇಖಗಳಿವೆ.

ಈ ದೇವಾಲಯವು ಕಾಲಕ್ರಮೇಣ ಅವನತಿಯತ್ತ ಸಾಗಿದ್ದರಿಂದ, ಮೂಲಮೂರ್ತಿಯನ್ನು ಉಳಿಸಿಕೊಂಡು ಹೊಸ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ಹನ್ನೆರಡು ಅಡಿ ಎತ್ತರದ, ಎಡ ತೊಡೆಯ ಮೇಲೆ ಶ್ರೀ ಲಕ್ಷ್ಮಿಯನ್ನು ಕೂರಿಸಿಕೊಂಡಿರುವ ಸುಂದರ ಶ್ರೀ ಲಕ್ಷ್ಮೀನಾರಾಯಣನ ಮೂರ್ತಿ ಇದೆ. ಶಂಖ-ಚಕ್ರಧಾರಿಯಾಗಿರುವ ಈ ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳಿವೆ. ಲಿಂಗಪೀಠದ ಸುತ್ತ ಹೊಯ್ಸಳರ ಲಾಂಛನವನ್ನು ಕಾಣಬಹುದು.

ಭೇಟಿ ನೀಡಿ
ಹರಿಹರ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section