ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದಲ್ಲಿರುವ ಒಂದು ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಮಲೇಬೆನ್ನೂರಿನಿಂದ ಕುಂಬಳಗೋಡಿಗೆ ಹೋಗುವ ರಸ್ತೆಯ ಮಧ್ಯಭಾಗದಲ್ಲಿದೆ.
ಮಲೇಬೆನ್ನೂರು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ದೂರಗಳು
- ಬೆಂಗಳೂರು – 283 ಕಿ.ಮೀ
- ದಾವಣಗೆರೆ – 25 ಕಿ.ಮೀ
- ಹರಿಹರ – 19 ಕಿ.ಮೀ
- ಹರಿಹರ ರೈಲ್ವೆ ನಿಲ್ದಾಣ – 20 ಕಿ.ಮೀ
ಈ ದೇವಾಲಯವನ್ನು ಸಂಪೂರ್ಣವಾಗಿ ಬೆನಕನಕೊಂಡಿ ಕುಟುಂಬವು ನಿರ್ಮಿಸಿದೆ. ಶ್ರೀ ಬೆನಕನಕೊಂಡಿ ವೀರಣ್ಣನವರು ಈ ದೇವಾಲಯದ ನಿರ್ಮಾಣದ ಪ್ರಮುಖ ಕಾರಣಕರ್ತರಾಗಿದ್ದಾರೆ. ಈ ದೇವಾಲಯದ ನಿರ್ಮಾಣ ಕಾರ್ಯವು 2009ರಲ್ಲಿ ಪ್ರಾರಂಭಗೊಂಡು, 2020ರಲ್ಲಿ ಪೂರ್ಣಗೊಂಡಿತು.
ಭೇಟಿ ನೀಡಿ




