ನಗರೇಶ್ವರ ದೇವಸ್ಥಾನವು 12ನೇ ಶತಮಾನದ ಪಶ್ಚಿಮ ಚಾಲುಕ್ಯರಿಂದ ನಿರ್ಮಾಣವಾದ ದೇವಾಲಯವಾಗಿದೆ. ನಾಗರೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಬಂಕಾಪುರ ನಗರದ ಬಂಕಾಪುರ ಕೋಟೆಯ ಪ್ರದೇಶದಲ್ಲಿದೆ. ಈ ದೇವಾಲಯವನ್ನು ಹಿಂದೂ ದೇವರಾದ ಶಿವನ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಾಗರೇಶ್ವರ, ನಗರೇಶ್ವರ ಅಥವಾ ಅರವತ್ತಾರು ಕಂಬಗಳನ್ನು ಹೊಂದಿರುವ ದೇವಾಲಯ ಕರೆಯಲಾಗುತ್ತದೆ.
ನಗರೇಶ್ವರ ದೇವಸ್ಥಾನದ ದೂರಗಳು
- ಬೆಂಗಳೂರು – 357 ಕಿ.ಮೀ
- ಹಾವೇರಿ – 25 ಕಿ.ಮೀ
- ಶಿಗ್ಗಾಂವ್ – 10 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 26 ಕಿ.ಮೀ
ಈ ದೇವಾಲಯವು ಪ್ರತಿದಿನ ಸಮಯ ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:00 ಮತ್ತು ಮಧ್ಯಾಹ್ನ 4:30 ರಿಂದ ರಾತ್ರಿ 6:30 ರವರೆಗೆ ತರೆದಿರುತ್ತದೆ.
ಮಧ್ಯಕಾಲೀನ ಕಾಲದಲ್ಲಿ, ಬಂಕಾಪುರ ಕೋಟೆಯನ್ನು ಕರ್ನಾಟಕ ಪ್ರದೇಶದ ಪ್ರಮುಖ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಂಕಾಪುರದ ನಾಗರೇಶ್ವರ ದೇವಸ್ಥಾನವು ಫಿರೋಜ್ ಷಾ ಬಹಮನಿಯ ಸೈನ್ಯ ಮತ್ತು ನಂತರದ ಬಿಜಾಪುರ ಸುಲ್ತಾನ್ ಆದಿಲ್ ಷಾ ಆಕ್ರಮಿಸಿಕೊಂಡಾಗ ದೇವಾಲಯವು ಹೆಚ್ಚಿನ ಹಾನಿಯನ್ನು ಅನುಭವಿಸಿದೆ.
ಫರಿಷ್ಟಾ ಅವರ ಬರಹಗಳ ಪ್ರಕಾರ ಸುಲ್ತಾನನು ಕೋಟೆಯೊಳಗಿನ ಒಂದು ಅದ್ಭುತವಾದ ದೇವಾಲಯವನ್ನು ನಾಶಮಾಡಲು ಆದೇಶಿಸಿದನು. ಆದರು ಹೆಚ್ಚಿನ ದರೋಡೆಗಳ ಹೊರತಾಗಿಯೂ, ಅದರ ಭವ್ಯವಾದ ದೊಡ್ಡ ಸಭಾಂಗಣವನ್ನು ಹೊಂದಿರುವ ದೊಡ್ಡ ದೇವಾಲಯವು ಇನ್ನೂ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಂಡಿದೆ. ಈ ದೇವಾಲಯವನ್ನು ಹಿಂದೂ ದೇವರಾದ ಶಿವನ ಗೌರವಾರ್ಥವಾಗಿ ನಿರ್ಮಿಸಲಾಗಿದೆ ಎಂಬುದಕ್ಕೆ ದೇವಾಲಯದಲ್ಲಿನ ಎರಡು ಕಿರು ಶಾಸನಗಳಿಂದ ತಿಳಿಯುತ್ತವೆ. ದೇವಾಲಯದಲ್ಲಿ ಇತರ ಶಾಸನಗಳಿವೆ, ಅವುಗಳಲ್ಲಿ ಒಂದು ಕ್ರಿ.ಶ 1138 ಮತ್ತು ಎರಡು ಕ್ರಿ.ಶ 1091ರ ನಾಗರೇಶ್ವರ ದೇವಸ್ಥಾನದ ದೇವರಿಗೆ ಅನುದಾನದ ದಾಖಲೆ ಇದೆ.
ವಾಸ್ತುಶಿಲ್ಪ
ಕಲಾ ಇತಿಹಾಸಕಾರ ಆಡಮ್ ಹಾರ್ಡಿ ಅವರ ಪ್ರಕಾರ, ಈ ದೇವಾಲಯವು 12ನೇ ಶತಮಾನದ ಪಶ್ಚಿಮ ಚಾಲುಕ್ಯರ (ನಂತರದ ಚಾಲುಕ್ಯ ಅಥವಾ ಕಲ್ಯಾಣಿ ಚಾಲುಕ್ಯ ಎಂದೂ ಕರೆಯಲ್ಪಡುವ) ಕಲಾಶೈಲಿಗೆ ಸೇರಿದೆ.
ಈ ದೇವಾಲಯವನ್ನು ಸಾಬೂನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಸಣ್ಣ ಗೋಪುರ ಹೊಂದಿದ ಗರ್ಭಗುಡಿ ಮತ್ತು ಮಂಟಪವನ್ನು ಒಳಗೊಂಡಿದೆ. ಮಂಟಪವು ಮಹಾಮಂಟಪ ಅಥವಾ ನವರಂಗದೊಂದಿಗೆ ಸಂಪರ್ಕ ಹೊಂದಿದೆ. ಪಶ್ಚಿಮ ಚಾಲುಕ್ಯ ದೇವಾಲಯಗಳ ಸಾಮಾನ್ಯ ವಿನ್ಯಾಸದಂತೆ, ಗರ್ಭಗುಡಿಯು ಮುಖಮಂಟಪದ ಮೂಲಕ ದೊಡ್ಡ ಸಭಾಂಗಣಕ್ಕೆ ಸಂಪರ್ಕ ಹೊಂದಿದೆ. ಸಭಾಂಗಣದ ಎದುರುಭಾಗದಲ್ಲಿ, ಗರ್ಭಗುಡಿಗೆ ಅಭಿಮುಖವಾಗಿ ತೆರೆಯಲ್ಪಟ್ಟ ನಂದಿಮಂಟಪವಿದೆ.
ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ದೇವಾಲಯ ಮತ್ತು ಸಭಾಂಗಣಗಳ ಬಾಹ್ಯ ಗೋಡೆಗಳ ಸುಂದರ ವಿನ್ಯಾಸ. ಗೋಡೆಗಳ ಮೇಲ್ಮೈಯನ್ನು ತೆಳ್ಳಗಿನ ಪೂರ್ಣ ಮತ್ತು ಅರ್ಧ ಪೈಲಸ್ಟರ್ಗಳಿಂದ ವಿಭಜಿಸಿ ಅಲಂಕರಿಸಲಾಗಿದೆ. ಅರ್ಧ ಪೈಲಸ್ಟರ್ಗಳ ಮೇಲ್ಭಾಗದಲ್ಲಿ ಚಿಕ್ಕ ಅಲಂಕಾರಿಕ ಗೋಪುರಗಳಂತಹ ವಿನ್ಯಾಸಗಳನ್ನು ಕಾಣಬಹುದು.
ದೊಡ್ಡ ಸಭಾಂಗಣದ ಪ್ರಮುಖ ಆಕರ್ಷಣೆಯೆಂದರೆ ಗಂಟೆಯ ಆಕಾರದ, ಲೇಥ್ನಲ್ಲಿ ತಯಾರಿಸಲಾದ ಕಡು ಬೂದು ಬಣ್ಣದ ಸಾಬೂನು ಕಲ್ಲಿನ ಕಂಬಗಳು. ಈ ಕಂಬಗಳನ್ನು ಅತ್ಯಂತ ಚೆನ್ನಾಗಿ ಪಾಲಿಶ್ ಮಾಡಿರುವುದರಿಂದ ಅವು ಬೆಳಕನ್ನು ಪ್ರತಿಫಲಿಸಿ ಮಿನುಗುತ್ತವೆ. ಇದು ಪಶ್ಚಿಮ ಚಾಲುಕ್ಯ ಶೈಲಿಯ ವಿಶಿಷ್ಟ ಲಕ್ಷಣವಾಗಿದ್ದು, ನಂತರ ಹೊಯ್ಸಳ ವಾಸ್ತುಶಿಲ್ಪದಲ್ಲಿಯೂ ಜನಪ್ರಿಯವಾಯಿತು.
ಕಂಬಗಳ ಮೇಲಿನ ಪ್ರಮುಖ ಅಲಂಕಾರವು ಸಮತಲ ಉಂಗುರಗಳಾಗಿದೆ. ಕೆಲವು ಕಂಬಗಳು ಚದರ ಆಧಾರದ ಮೇಲೆ ನಿರ್ಮಿತವಾಗಿದ್ದು, ವಿಶೇಷವಾಗಿ ಎರಡು ಸಭಾಂಗಣಗಳ ಮಧ್ಯದಲ್ಲಿರುವ ಕಂಬಗಳು ಅತ್ಯಂತ ಸುಂದರ ಹಾಗೂ ವಿಭಿನ್ನ ಶಿಲ್ಪಕಲೆಯನ್ನು ಹೊಂದಿವೆ.
ಕಂಬಗಳ ನಡುವಿನ ದೊಡ್ಡ ಸಭಾಂಗಣದ ಚಾವಣಿಯು ಬಹಳ ಅಲಂಕಾರಿಕವಾಗಿದ್ದು, ನಾಲ್ಕು ಮೂಲೆಗಳಲ್ಲಿ ಕಾಲ್ಪನಿಕ ಮೃಗಗಳ ರೂಪಗಳು ಮತ್ತು ರೋಸೆಟ್ ವಿನ್ಯಾಸಗಳನ್ನು ಹೊಂದಿದೆ. ಕೇಂದ್ರ ಭಾಗದಲ್ಲಿರುವ ಗುಮ್ಮಟಾಕಾರದ ಸೀಲಿಂಗ್ವು ವಿಶೇಷವಾಗಿ ಗಮನಾರ್ಹವಾಗಿದೆ.
ಇದಲ್ಲದೆ, ಶಿವ, ವಿಷ್ಣು, ಗಣಪತಿ, ಬ್ರಹ್ಮ ಮತ್ತು ಕಾಳಿ ಸೇರಿದಂತೆ ವಿವಿಧ ಹಿಂದೂ ದೇವತೆಗಳ ಉಬ್ಬು ಶಿಲ್ಪಗಳು ದೇವಾಲಯದ ಅಲಂಕಾರವನ್ನು ಇನ್ನಷ್ಟು ವೈಭವಯುತವಾಗಿಸಿವೆ.
ಭೇಟಿ ನೀಡಿ







