ಗಾಯತ್ರಿ ತಪೋಭೂಮಿಯು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ್ ಗ್ರಾಮದ ಮುತ್ತಳ್ಳಿಯಲ್ಲಿ ಇರುವ ಪವಿತ್ರ ಕ್ಷೇತ್ರವಾಗಿದೆ. ಇದು ಗಾಯತ್ರಿ ದೇವಿಗೆ ಸಮರ್ಪಿತವಾಗಿ ನಿರ್ಮಿಸಲಾದ ಭವ್ಯ ದೇವಾಲಯವಾಗಿದೆ. ದಕ್ಷಿಣ ಭಾರತದಲ್ಲಿ ಈ ರೀತಿಯಾಗಿ ನಿರ್ಮಿಸಲಾದ ಏಕೈಕ ದೇವಾಲಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಶ್ರೀ ಗಾಯತ್ರಿ ತಪೋಭೂಮಿಯ ದೂರಗಳು
- ಬೆಂಗಳೂರು – 387 ಕಿ.ಮೀ
- ಹಾವೇರಿ – 55 ಕಿ.ಮೀ
- ಶಿಗ್ಗಾಂವ್ – 23 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 56 ಕಿ.ಮೀ
ಸುಂದರವಾದ ಗರ್ಭಗುಡಿಯಲ್ಲಿ ತಾಯಿ ಗಾಯತ್ರಿ ದೇವಿಯ ಕಪ್ಪು ವರ್ಣದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ದೇವಿಯು ಸುಕೋಮಲ ಹಾಗೂ ಮಂದಸ್ಮಿತದಿಂದ ಕೂಡಿದ ಐದು ಮುಖಗಳನ್ನು ಹೊಂದಿದ್ದು, ಅಭಯ ಹಸ್ತದಿಂದ ಭಕ್ತರಿಗೆ ದರ್ಶನ ನೀಡುತ್ತಾಳೆ.
ಇಲ್ಲಿ ಗಾಯತ್ರಿ ದೇವಿಯ ಜೊತೆಗೆ ಗಣೇಶ, ಸ್ಕಂದ ಹಾಗೂ ಅನ್ನಪೂರ್ಣೇಶ್ವರಿ ದೇವಿಯ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ.
ಭೇಟಿ ನೀಡಿ




