ಮುನಿನಗರ ಅಣೆಕಟ್ಟು

ಮುನಿನಗರ ಆಣೆಕಟ್ಟು ಮತ್ತು ಜಲಾಶಯವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮುನಿನಗರ ಗ್ರಾಮದಲ್ಲಿದೆ. ಇದು ಒಂದು ಚಿಕ್ಕ ಚೆಕ್ ಡ್ಯಾಮ್ ಆಗಿದ್ದು, ಈ ಜಲಾಶಯವು 30-40 ಎಕರೆ ವಿಸ್ತೀರ್ಣವನ್ನು ಹೊಂದಿದೆ ಮತ್ತು ಹತ್ತಿರದ ಗ್ರಾಮಗಳಿಗೆ ನೀರಿನ ಮೂಲವಾಗಿದೆ. ಹಾಗೂ ಜಲಾಶಯದ ಪಕ್ಕದಲ್ಲಿ ಮಹದೇಶ್ವರ ದೇವಾಲಯವಿದೆ.

ಈ ಜಲಾಶಯವು ಬೆಂಗಳೂರಿಂದ 38 ಕಿ.ಮೀ, ಬೆಂಗಳೂರು ದಕ್ಷಿಣ (ರಾಮನಗರ) ದಿಂದ 41 ಕಿ.ಮೀ ಮತ್ತು ಕನಕಪುರ ದಿಂದ 35 ಕಿ.ಮೀ ದೂರದಲ್ಲಿದೆ. ಹಾಗೂ ಹಾರೋಹಳ್ಳಿಯಿಂದ 16 ಕಿ.ಮೀ ಮತ್ತು ಕಗ್ಗಲೀಪುರದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

ಈ ಜಲಾಶಯವು ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಸುತ್ತಮುತ್ತಲಿನ ಹಚ್ಚ ಹಸಿರಿನ ಬೆಟ್ಟಗಳು ಮತ್ತು ಪ್ರಕೃತಿಯು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಸುಂದರವಾದ ದೃಶ್ಯಾವಳಿಗಳನ್ನು ಆನಂದಿಸಬಹುದು ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು.

ಭೇಟಿ ನೀಡಿ
ಹಾರೋಹಳ್ಳಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section