ಪಿರಮಿಡ್ ವ್ಯಾಲಿಯು ಅಂತರರಾಷ್ಟ್ರೀಯ ಧ್ಯಾನ ಕೇಂದ್ರವಾಗಿದ್ದು, ಇದು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿದೆ. ಈ ಧ್ಯಾನ ಕೇಂದ್ರದ ಸ್ಥಾಪಕರು ಬ್ರಹ್ಮರ್ಷಿ ಪಿತಾಮಹ ಡಾ. ಪತ್ರಿಜಿಯವರು. ಈ ಕೇಂದ್ರವು ಸ್ವಯಂ ಸಾಕ್ಷಾತ್ಕಾರ ಮತ್ತು ಆಧ್ಯಾತ್ಮಿಕ ಬುದ್ಧಿವಂತಿಕೆಯ ಅನ್ವೇಷಣೆಯಲ್ಲಿ ವ್ಯಕ್ತಿಗಳು, ಸಮಾಜಗಳು ಹಾಗೂ ಸಂಸ್ಥೆಗಳಿಗೆ ಮಾರ್ಗದರ್ಶನ ಮತ್ತು ಸೇವೆಯನ್ನು ಒದಗಿಸುತ್ತದೆ.
ಪಿರಮಿಡ್ ವ್ಯಾಲಿ ಧ್ಯಾನ ಕೇಂದ್ರದ ದೂರಗಳು
- ಬೆಂಗಳೂರು – 37 ಕಿ.ಮೀ
- ರಾಮನಗರ – 40 ಕಿ.ಮೀ
- ಕನಕಪುರ – 24 ಕಿ.ಮೀ
- ಹಾರೋಹಳ್ಳಿ – 7 ಕಿ.ಮೀ
ಪಿರಮಿಡ್ ವ್ಯಾಲಿಯು ಸುಮಾರು 28 ಎಕರೆ ವಿಸ್ತೀರ್ಣದ ಆವರಣದಲ್ಲಿದ್ದು, ಮೈತ್ರೇಯ ಬುದ್ಧ ಪಿರಮಿಡ್, ಆಂಫಿಥಿಯೇಟರ್, ವಸತಿ ವ್ಯವಸ್ಥೆ, ಊಟದ ಸೌಲಭ್ಯ, ಪುಸ್ತಕ ಮಳಿಗೆ ಹಾಗೂ ಜಲಮೂಲಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ.
ಹಿನ್ನೆಲೆ
ಬ್ರಹ್ಮರ್ಷಿ ಪಿತಾಮಹ ಡಾ. ಪತ್ರೀಜಿಯವರು ತಮ್ಮ ಜೀವನದ ಆರಂಭದಲ್ಲೇ ಆಳವಾದ ಅನುಭವಗಳ ಮೂಲಕ ಧ್ಯಾನದ ಶಕ್ತಿಯನ್ನು ಅರಿತುಕೊಂಡರು ಮತ್ತು 1979ರಲ್ಲಿ ಜ್ಞಾನೋದಯವನ್ನು ಪಡೆದರು. ಆಂಧ್ರಪ್ರದೇಶದ ರಸಗೊಬ್ಬರ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಸರಳ ಹಿನ್ನೆಲೆಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, ವಿಶ್ವದಾದ್ಯಂತ ಜನರಿಗೆ ಧ್ಯಾನ ಮತ್ತು ಸಸ್ಯಾಹಾರವನ್ನು ಉತ್ತೇಜಿಸುವುದನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ.
ಯಾವುದೇ ಧಾರ್ಮಿಕ ಸಂಕೇತಗಳನ್ನು ಅಳವಡಿಸದೆ, ಅವರ ವಿಧಾನವು ಸಂಪೂರ್ಣವಾಗಿ ವೈಜ್ಞಾನಿಕ ಮತ್ತು ಜಾತ್ಯಾತೀತ ಸ್ವರೂಪದ್ದಾಗಿದೆ. ಸಮಸ್ತ ಮಾನವಕುಲಕ್ಕೆ ಆಧ್ಯಾತ್ಮಿಕತೆ ಮತ್ತು ಸಸ್ಯಾಹಾರಿ ಜೀವನಶೈಲಿಯ ಸಂದೇಶವನ್ನು ಹರಡುವ ಉದ್ದೇಶದಿಂದ, ಪತ್ರೀಜಿಯವರು 1990ರಲ್ಲಿ ಪಿರಮಿಡ್ ಆಧ್ಯಾತ್ಮಿಕ ಸಮಾಜಗಳ ಚಳುವಳಿಯನ್ನು ಸ್ಥಾಪಿಸಿದರು.
ಹೆಚ್ಚಿನ ಮಾಹಿತಿಗಾಗಿ Pyramid Valley ವೆಬ್ಸೈಟ್ಗೆ ಭೇಟಿ ನೀಡಿ.
ಭೇಟಿ ನೀಡಿ











